Don't Miss!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಸಿನಿಮಾ ತಿರಸ್ಕರಿಸಿದ ನಾನಿ, ಕಾರಣ ವೈಮನಸ್ಸು!
ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು ಸದ್ಯ 'ಸರ್ಕಾರು ವಾರಿ ಪಾಟ' ಚಿತ್ರದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈಗ ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸಿದ್ದಾರೆ. ಮುಂಬರುವ ಪ್ರಾಜೆಕ್ಟ್ #SSMB28 ಸಿನಿಮಾ ಶೂಟಿಂಗ್ ತಯಾರಿಯಲ್ಲಿ ಇದ್ದಾರೆ. ಸದ್ಯದಲ್ಲಿಯೇ ಸಿನಿಮಾ ಸೆಟ್ ಸೇರಲಿದೆ.
ಈ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ್ ಸಿನಿವಾಸ್ ನಿರ್ದೇಶನ ಇದೆ. ಈಗಾಗಲೇ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನೆರವೇರಿದ್ದು, ಪ್ರೀ ಪ್ರೋಡಕ್ಷನ್ ಕೆಲಸಗಳು ಕೂಡ ಮುಗಿವೆ. ಇನ್ನೇನಿದ್ದರು ಸಿನಿಮಾದ ಚಿತ್ರೀಕರಣ ಆರಂಭ ಆಗಬೇಕು ಅಷ್ಟೇ. ಈ ನಡುವೆ ಸಿನಿಮಾದ ತಾರ ಬಳಗದ ಬಗ್ಗೆ ಹೊಸ ದುದ್ದಿ ಒಂದು ಹರಿದಡುತ್ತಾ ಇದೆ.
ಮೊದಲ ವಾರ ಬಾಕ್ಸಾಫೀಸ್ನಲ್ಲಿ ಮಹೇಶ್ ಬಾಬು ಘರ್ಜನೆ!
ನಟ ಮಹೇಶ್ ಬಾಬು ಸಿನಿಮಾದಲ್ಲಿ ಪಾತ್ರವರ್ಗ ಸದಾ ಪ್ಲಸ್ ಪಾಯಿಂಟ್. ಅದು ಸಹ ಕಲಾವಿದರಾಗಿರ ಬಹುದು ಅಥವಾ ಖಳನಾಯಕರಾಗಿರಬಹುದು. ಎಲ್ಲಾ ಪಾತ್ರಗಳಲ್ಲೂ ಹೆಸರಾಂತ ಕಲಾವಿದರು ಇದ್ದೇ ಇರುತ್ತಾರೆ. ಅದರೆ ಈ ಬಾರಿ ಮಹೇಶ್ ಬಾಬು ಸಿನಿಮಾವನ್ನು ತೆಲುಗಿನ ನಟ ನಾನಿ ತಿರಸ್ಕರಿಸಿದ್ದಾರೆ ಎನ್ನುವ ಹೊಸ ಸುದ್ದಿ ಹೊರ ಬಂದಿದೆ.
ಹೌದು ನಟ ನಾನಿಯನ್ನು ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಶೇಷ ಪಾತ್ರ ಒಂದರಲ್ಲಿ ನಟಿಸುವಂತೆ ಕೇಳಲಾಗುತ್ತಂತೆ. ಆದರೆ ಇದನ್ನು ನಟ ನಾನಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಮಹೇಶ್ ಬಾಬು ಜೊತೆಗೆ ಅಭಿನಯಿಸುವ ಅವಕಾಶವನ್ನು ನಾನಿ ತಿರಸ್ಕರಿಸಿದ್ದಾರಂತೆ. ಹಾಗಾಗಿ ಮಹೇಶ್ ಬಾಬು ಜೊತೆಗೆ ಅಭಿನಯಿಸಲು ಇಷ್ಟ ಇಲ್ಲದ ಕಾರಣ ನಾನಿ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.
46ರ ವಯಸ್ಸಲ್ಲೂ 26 ರಂತೆ ಕಾಣುವ ಮಹೇಶ್ ಬಾಬು ಅಂದದ ಗುಟ್ಟೇನು?
ನಾನಿ ಸಿನಿಮಾ ತಿರಸ್ಕರಿಸಿದ ಬಳಿಕ ಈ ಪಾತ್ರಕ್ಕೆ ಮತ್ತೊಬ್ಬ ನಟನ ಮೊರೆ ಹೋಗಿದೆ ಸಿನಿಮಾತಂಡ. ನಟ ಸುಶಾಂತ್ ಅವರನ್ನು ನಾನಿ ಜಾಗಕ್ಕೆ ಕರೆತರಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಈಗಾಗಲೇ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ 'ಅಲಾ ವೈಕುಂಠಪುರಂಲೋ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಸುಶಾಂತ್. ಈ ಚಿತ್ರಕ್ಕೆ ಸುಶಾಂತ್ ಒಪ್ಪಿಗೆ ನೀಡಿದ್ದು, ಸುಶಾಂತ್ ಸೇರ್ಪಡೆ ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.
ಮಹೇಶ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಈ ಹಿಂದೆ ಎರಡು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ. 'ಅತಡು' ಮತ್ತು 'ಖಲೇಜಾ' ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿದೆ. ಈಗ ಮಹೇಶ ಬಾಬು 28ನೇ ಸಿನಿಮಾದ ಮೂಲಕ ಮೂರನೇ ಬಾರಿ ಈ ಜೋಡಿ ಒಂದಾಗುತ್ತಿದೆ. ಫೆಬ್ರವರಿ 3ರಂದು ಸಿನಿಮಾ ಲಾಂಚ್ ಅಗಿದೆ. ಕಾರ್ಯಕ್ರಮದಲ್ಲಿ ನಮ್ರತಾ ಶಿರೋಡ್ಕರ್, ಪೂಜಾ ಹೆಗ್ಡೆ ಸೇರಿದಂತೆ ಪಾತ್ರವರ್ಗ ಹಾಜರಿತ್ತು.
ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್: ಛೀ.. ಎಂದ ನೆಟ್ಟಿಗರು