Don't Miss!
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶದಿಂದ ವಾಪಸ್ ಆದ ನಟ ಪ್ರಭಾಸ್ ಸ್ವಯಂ ನಿರ್ಬಂಧದಲ್ಲಿ
ಕೊರೊನಾ ವೈರಸ್ ಆತಂಕ ಹಿನ್ನಲೆ ನಟ ಪ್ರಭಾಸ್ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಇತ್ತೀಚಿಗೆ ನಟ ಪ್ರಭಾಸ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದರು. ಸದ್ಯ ವಾಪಸ್ ಆಗಿರುವ ಬಾಹುಬಲಿ ನಟ ಈಗ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಪ್ರಭಾಸ್ ಜೊತೆಗೆ ಇಡೀ ಸಿನಿಮಾತಂಡ ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ.
ಚಿತ್ರತಂಡ ಇತ್ತೀಚಿಗೆ ವಿದೇಶದಿಂದ ಚಿತ್ರೀಕರಣ ಮುಗಿಸಿ ಹೈದರಾಬಾದ್ ಗೆ ವಾಪಸ್ ಆಗಿದೆ. ಈ ಬಗ್ಗೆ ನಟ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ಹಿನ್ನಲೆ ನಾನು ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ನಟ ಪ್ರಭಾಸ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..
ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?
ಜಾರ್ಜಿಯಾಗೆ ತೆರಳಿದ್ದ ಚಿತ್ರತಂಡ
ಪ್ರಭಾಸ್ ಸದ್ಯ ಜಾನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಜಾನ್ ಸಿನಿಮಾ ಶೂಟಿಂಗ್ ಗಾಗಿ ಇಡೀ ತಂಡ ಜಾರ್ಜಿಯಾಗೆ ಪಯಣ ಬೆಳೆಸಿತ್ತು. ಕೊರೊನಾ ವೈರಸ್ ಹಾವಳಿ ಹೆಚ್ಚಾಗುವ ಮೊದಲೆ ಚಿತ್ರತಂಡ ವಿದೇಶಕ್ಕೆ ಹಾರಿತ್ತು. ಸದ್ಯಾ ವಾಪಸ್ ಆಗಿರುವ ತಂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.
ಈ ಬಗ್ಗೆ ಪ್ರಭಾಸ್ ಹೇಳಿದ್ದೇನು?
ಈ ಬಗ್ಗೆ ನಟ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿದೇಶದಿಂದ ಚಿತ್ರೀಕರಣ ಮುಗಿಸಿ ಸುರಕ್ಷಿತವಾಗಿ ವಾಪಸ್ ಬಂದಿದ್ದೀವಿ. ಕೊರೊನಾ ಹೆಚ್ಚುತ್ತಿರುವ ಕಾರಣ ನಾನು ಸ್ವಯಂ ಸಂಪರ್ಕದಲ್ಲಿ ಇರಲು ನಿರ್ಧರಿಸಿದ್ದೇನೆ. ನೀವೆಲ್ಲರು ಸುರಕ್ಷಿತರಾಗಿರಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇನೆ" ಎಂದು ಪ್ರಭಾಸ್ ಹೇಳಿದ್ದಾರೆ.
ಕೆಜಿಎಫ್ 2 ಬಿಡುಗಡೆ ದಿನಾಂಕ ಕೇಳಿ ಪ್ರಭಾಸ್ ಅಭಿಮಾನಿಗಳು ಖುಷ್: ಕಾರಣವೇನು?
ನಟಿ ಪೂಜಾ ಹೆಗ್ಡೆ ಸ್ವಯಂ ನಿರ್ಬಂಧ
ನಟ ಪ್ರಭಾಸ್ ಜೊತೆ ನಾಯಕಿ ಪೂಜಾ ಹೆಡಗೆ ಕೂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಜಾರ್ಜಿಯಾದಿಂದ ವಾಪಸ್ ಆಗುತ್ತಿರುವ ಫೋಟೋವನ್ನು ಹಾಕಿಕೊಂಡಿರುವ ಪೂಜಾ ಮಾಸ್ಕ್ ಹಾಕಿಕೊಂಡು ಏರ್ ಪೋರ್ಟ್ ನಲ್ಲಿ ಕುಳಿತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಪರಿಣಾಮ ಪೂಜಾ ಕೂಡ ಸ್ವಯಂಬಂಧಿಯಾಗಿದ್ದಾರೆ.
ಪ್ರಭಾಸ್ ಚಿತ್ರಕ್ಕೆ ಬಾಲಿವುಡ್ನಿಂದ ಹಾರಿಬರಲಿದ್ದಾರೆ ಖ್ಯಾತ ನಾಯಕಿ
ರಾಧಕೃಷ್ಣ ನಿರ್ದೇಶನದ ಸಿನಿಮಾ
ಜಾನ್ ಸಿನಿಮಾದ ಸಿನಿಮಾವನ್ನು ನಿರ್ದೇಶಕ ರಾಧಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಈಗ ವಿದೇಶದಿಂದ ವಾಪಸ್ ಆದ ಇಡೀ ಚಿತ್ರತಂಡ ಸ್ವಯಂ ನಿರ್ಬಂಧದಲ್ಲಿ ಇದೆ. ಇತ್ತೀಚಿಗೆ ಪ್ರಭಾಸ್ ಚಿತ್ರೀಕರಣಕ್ಕೆಂದು ವಿದೇಶಕ್ಕೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮಾಸ್ಕ್ ಹಾಕಿಕೊಂಡು ತಂಡದ ಜೊತೆ ಜಾರ್ಜಿಯಾಗೆ ಹೋಗುತ್ತಿದ್ದ ಪ್ರಭಾಸ್ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿದ್ದರು.