Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ಹಿರಿಯ ನಟಿ ಕಸ್ತೂರಿ ಶಂಕರ್
ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ಜಾಣ, ಪ್ರೇಮಕ್ಕೆ ಸೈ, ವಿಷ್ಣುವರ್ಧನ್ ಜೊತೆಗೆ ಹಬ್ಬ, ಶಿವರಾಜ್ ಕುಮಾರ್ ಜೋಡಿಯಾಗಿ ಇಬ್ಬರ ನಡುವೆ ಮುದ್ದಿನ ಆಟ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಸ್ತೂರಿ ಶಂಕರ್ ಇದೀಗ ಸುದ್ದಿಯಲ್ಲಿದ್ದಾರೆ.
ನಟಿ ಕಸ್ತೂರಿ ಶಂಕರ್ ಇದ್ದಕ್ಕಿದ್ದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ವಿಪರೀತ ಸಿಟ್ಟಾಗಿದ್ದಾರೆ. ಕೊಹ್ಲಿಗೆ ಸಾಮಾಜಿಕ ಜಾಲತಾಣ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿರಾಟ್-ಅನುಷ್ಕಾ ಮಗು ಬಗ್ಗೆ ಕರೀನಾ ಕಪೂರ್ ಮಾತು
ನಟಿ ಕಸ್ತೂರಿ ಶಂಕರ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸುತ್ತಿರುತ್ತಾರೆ. ದೀಪಾವಳಿ ಹಬ್ಬದಂದು ವಿರಾಟ್ ಕೊಹ್ಲಿ ನೀಡಿದ್ದ ಸಂದೇಶ ಕಸ್ತೂರಿ ಶಂಕರ್ಗೆ ಸಿಟ್ಟು ತರಿಸಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಪಟಾಕಿ ಬೇಡ ಎಂದಿದ್ದ ವಿರಾಟ್ ಕೊಹ್ಲಿ
ದೀಪಾವಳಿ ಹಬ್ಬದ ಶುಭಾಶಯ ಕೋರಿ ಟ್ವಿಟ್ಟರ್ನಲ್ಲಿ ವಿಡಿಯೋ ಹಾಕಿದ್ದ ವಿರಾಟ್ ಕೊಹ್ಲಿ, 'ಈ ಬಾರಿ ಪಟಾಕಿ ಬೇಡ' ಎಂದು ಹೇಳಿದ್ದರು. ಕೊಹ್ಲಿಯ ಈ ಹೇಳಿಕೆ ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿತ್ತು. ಅದರಲ್ಲಿ ನಟಿ ಕಸ್ತೂರಿ ಶಂಕರ್ ಸಹ ಒಬ್ಬರು.
'ನಿಮಗೆ ಸ್ಪೋರ್ಟ್ಸ್ ಕಾರು ಏಕು ಸೈಕಲ್ ಇಟ್ಟುಕೊಳ್ಳಿ ಸಾಕು'
'ದೀಪಾವಳಿಗೆ ಪಟಾಕಿ ಬೇಡ ದೀಪ ಸಾಕೇ?, ಹಾಗಿದ್ದರೆ ನಿಮಗೆ ಒಂಬತ್ತು ಸ್ಪೋರ್ಟ್ಸ್ ಕಾರು ಏಕೆ, ಸುಮ್ಮನೆ ವಾಯುಮಾಲಿನ್ಯ ಒಂದು ಸೈಕಲ್ ತೆಗೆದುಕೊಂಡು ಬಿಡಿ. ಇಟಲಿಯಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಏಕಾದಿರಿ ಸುಮ್ಮನೆ ವಿಮಾನದಿಂದ ವಾಯುಮಾಲಿನ್ಯವಾಯಿತು, ಇಲ್ಲಿಯೇ ರಿಜಿಸ್ಟರ್ ಮದುವೆ ಆಗಬಹುದಿತ್ತಲ್ಲಾ?' ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ ಕಸ್ತೂರಿ ಶಂಕರ್.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಳ ನಾಯಿ: ಕಾಂಗ್ರೆಸ್ ಮುಖಂಡ
ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರ: ಕಸ್ತೂರಿ ಶಂಕರ್
ಮುಂದುವರೆದು, 'ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಮಾತನಾಡಿ. ದೀಪಾವಳಿ ಕೇವಲ ಹಬ್ಬವಷ್ಟೆ ಅಲ್ಲ ತಮಿಳುನಾಡಿನ ಶಿವಕಾಶಿಯ ಜನರಿಗೆ ಜೀವನವೇ ಅದು. ನಿಮ್ಮ ಹುಸಿ ಸಾಮಾಜಿಕ ಬದ್ಧತೆ ತೋರಿಸಲು ಜನರ ಬದುಕು ಕಸಿಯಬೇಡಿ ಎಂದಿದ್ದಾರೆ ಕಸ್ತೂರಿ ಶಂಕರ್.
Recommended Video
ಗಾಯಕಿ ಸುಚಿತ್ರಾ ವಿರುದ್ಧವೂ ಹೇಳಿಕೆ
ಕಸ್ತೂರಿ ಶಂಕರ್ ಈ ಹಿಂದೆಯೂ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಗಾಯಕಿ ಸುಚಿತ್ರಾ ಬಿಗ್ಬಾಸ್ ಮನೆ ಪ್ರವೇಶಿಸಿದಾಗ 'ಸುಚಿತ್ರಾ, ಮೀರಾ ಮಿಥುನ್ ಪಾರ್ಟ್ 2, ಜನರ ಗಮನ ಸೆಳೆಯಲು ಆಕೆ ಬೇಕೆಂದೇ ಗಲಾಟೆ ಮಾಡುತ್ತಾಳೆ' ಎಂದಿದ್ದರು.