Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ ಹಿರಿಯ ನಟಿ ಕಸ್ತೂರಿ ಶಂಕರ್
ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ಜಾಣ, ಪ್ರೇಮಕ್ಕೆ ಸೈ, ವಿಷ್ಣುವರ್ಧನ್ ಜೊತೆಗೆ ಹಬ್ಬ, ಶಿವರಾಜ್ ಕುಮಾರ್ ಜೋಡಿಯಾಗಿ ಇಬ್ಬರ ನಡುವೆ ಮುದ್ದಿನ ಆಟ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಕಸ್ತೂರಿ ಶಂಕರ್ ಇದೀಗ ಸುದ್ದಿಯಲ್ಲಿದ್ದಾರೆ.
ನಟಿ ಕಸ್ತೂರಿ ಶಂಕರ್ ಇದ್ದಕ್ಕಿದ್ದಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೇಲೆ ವಿಪರೀತ ಸಿಟ್ಟಾಗಿದ್ದಾರೆ. ಕೊಹ್ಲಿಗೆ ಸಾಮಾಜಿಕ ಜಾಲತಾಣ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿರಾಟ್-ಅನುಷ್ಕಾ ಮಗು ಬಗ್ಗೆ ಕರೀನಾ ಕಪೂರ್ ಮಾತು
ನಟಿ ಕಸ್ತೂರಿ ಶಂಕರ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸುತ್ತಿರುತ್ತಾರೆ. ದೀಪಾವಳಿ ಹಬ್ಬದಂದು ವಿರಾಟ್ ಕೊಹ್ಲಿ ನೀಡಿದ್ದ ಸಂದೇಶ ಕಸ್ತೂರಿ ಶಂಕರ್ಗೆ ಸಿಟ್ಟು ತರಿಸಿದ್ದು, ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಪಟಾಕಿ ಬೇಡ ಎಂದಿದ್ದ ವಿರಾಟ್ ಕೊಹ್ಲಿ
ದೀಪಾವಳಿ ಹಬ್ಬದ ಶುಭಾಶಯ ಕೋರಿ ಟ್ವಿಟ್ಟರ್ನಲ್ಲಿ ವಿಡಿಯೋ ಹಾಕಿದ್ದ ವಿರಾಟ್ ಕೊಹ್ಲಿ, 'ಈ ಬಾರಿ ಪಟಾಕಿ ಬೇಡ' ಎಂದು ಹೇಳಿದ್ದರು. ಕೊಹ್ಲಿಯ ಈ ಹೇಳಿಕೆ ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿತ್ತು. ಅದರಲ್ಲಿ ನಟಿ ಕಸ್ತೂರಿ ಶಂಕರ್ ಸಹ ಒಬ್ಬರು.
'ನಿಮಗೆ ಸ್ಪೋರ್ಟ್ಸ್ ಕಾರು ಏಕು ಸೈಕಲ್ ಇಟ್ಟುಕೊಳ್ಳಿ ಸಾಕು'
'ದೀಪಾವಳಿಗೆ ಪಟಾಕಿ ಬೇಡ ದೀಪ ಸಾಕೇ?, ಹಾಗಿದ್ದರೆ ನಿಮಗೆ ಒಂಬತ್ತು ಸ್ಪೋರ್ಟ್ಸ್ ಕಾರು ಏಕೆ, ಸುಮ್ಮನೆ ವಾಯುಮಾಲಿನ್ಯ ಒಂದು ಸೈಕಲ್ ತೆಗೆದುಕೊಂಡು ಬಿಡಿ. ಇಟಲಿಯಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಏಕಾದಿರಿ ಸುಮ್ಮನೆ ವಿಮಾನದಿಂದ ವಾಯುಮಾಲಿನ್ಯವಾಯಿತು, ಇಲ್ಲಿಯೇ ರಿಜಿಸ್ಟರ್ ಮದುವೆ ಆಗಬಹುದಿತ್ತಲ್ಲಾ?' ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ ಕಸ್ತೂರಿ ಶಂಕರ್.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಳ ನಾಯಿ: ಕಾಂಗ್ರೆಸ್ ಮುಖಂಡ
ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರ: ಕಸ್ತೂರಿ ಶಂಕರ್
ಮುಂದುವರೆದು, 'ಹಬ್ಬಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಮಾತನಾಡಿ. ದೀಪಾವಳಿ ಕೇವಲ ಹಬ್ಬವಷ್ಟೆ ಅಲ್ಲ ತಮಿಳುನಾಡಿನ ಶಿವಕಾಶಿಯ ಜನರಿಗೆ ಜೀವನವೇ ಅದು. ನಿಮ್ಮ ಹುಸಿ ಸಾಮಾಜಿಕ ಬದ್ಧತೆ ತೋರಿಸಲು ಜನರ ಬದುಕು ಕಸಿಯಬೇಡಿ ಎಂದಿದ್ದಾರೆ ಕಸ್ತೂರಿ ಶಂಕರ್.
Recommended Video
ಗಾಯಕಿ ಸುಚಿತ್ರಾ ವಿರುದ್ಧವೂ ಹೇಳಿಕೆ
ಕಸ್ತೂರಿ ಶಂಕರ್ ಈ ಹಿಂದೆಯೂ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಗಾಯಕಿ ಸುಚಿತ್ರಾ ಬಿಗ್ಬಾಸ್ ಮನೆ ಪ್ರವೇಶಿಸಿದಾಗ 'ಸುಚಿತ್ರಾ, ಮೀರಾ ಮಿಥುನ್ ಪಾರ್ಟ್ 2, ಜನರ ಗಮನ ಸೆಳೆಯಲು ಆಕೆ ಬೇಕೆಂದೇ ಗಲಾಟೆ ಮಾಡುತ್ತಾಳೆ' ಎಂದಿದ್ದರು.