Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಕೃತಿ ಶೆಟ್ಟಿಗೆ ಸಿಕ್ತು ಮತ್ತೊಂದು ದೊಡ್ಡ ಯಶಸ್ಸು!
ಕರಾವಳಿ ಮೂಲದ ಬೆಡಗಿ ಕೃತಿ ಶೆಟ್ಟಿ ತೆಲುಗು ಸಿನಿಮಾರಂಗದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಕೃತಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಸದ್ಯ ಕೃತಿಯ ಮತ್ತೊಮ್ಮೆ ಯಶಸ್ಸು ಪಡೆದುಕೊಂಡಿದ್ದಾರೆ.
ಉಪ್ಪೆನ ಸಿನಿಮಾದ ಮೂಲಕ ಮೊದಲ ಸಿನಿಮಾದಲ್ಲೇ ನಟಿ ಕೃತಿ ಶೆಟ್ಟಿಗೆ ದೊಡ್ಡ ಸಕ್ಸಸ್ ಸಿಕ್ಕಿತ್ತು. ಆದರೆ ಮೊದಲ ಸಿನಿಮಾದ ನಂತರ ಅದ್ಯಾಕೊ ಯಾವ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲೆ ಇಲ್ಲ. ಸಾಲು, ಸಾಲು ಸಿನಿಮಾಗಳಲ್ಲಿ ನಟಿಸಿದರೂ, ಕೃತಿಗೆ 'ಉಪ್ಪೆನ' ಮಾದರಿ ಯಶಸ್ಸು ಸಿಕ್ಕಿರಲಿಲ್ಲ.
ಕೃತಿ ಶೆಟ್ಟಿಯನ್ನು ತಿರಸ್ಕರಿಸಿದ ತೆಲುಗು ಸ್ಟಾರ್ ನಟರು: ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!
ಈಗ ಮತ್ತೇ ಕೃತಿ ಫಾರ್ಮ್ಗೆ ಬಂದಿದ್ದಾರೆ. ಉಪ್ಪೆನ ಬಳಿಕ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. 'ದಿ ವಾರಿಯರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದ್ದು, ಕೃತಿ ಕೈ ಹಿಡಿದಿದೆ. ಈ ಚಿತ್ರದ ಗಳಿಕೆ ಮತ್ತು ಕೃತಿ ಮುಂದಿನ ಚಿತ್ರಗಳ ಬಗ್ಗೆ ಮುಂದೆ ಓದಿ...
ಮಹೇಶ್ ಬಾಬುಗಾಗಿ ಪವನ್ ಕಲ್ಯಾಣ್ ಸಿನಿಮಾ ಬಿಟ್ಟ ಪೂಜಾ ಹೆಗ್ಡೆ!
ಕೃತಿಗೆ ಮತ್ತೆ ಒಲಿದ ಅದೃಷ್ಟ!
ನಟಿ ಕೃತಿ ಶೆಟ್ಟಿಗೆ ಎರಡು ಸಿನಿಮಾ ಬಳಿಕ ಮತ್ತೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. 'ಉಪ್ಪೆನ' ಮುಲಕ ಭರವಸೆ ಮೂಡಿದ ನಟಿ ಮತ್ತೆ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಕೃತಿ ಶೆಟ್ಟಿಗೆ ವಾರಿಯರ್ ಸಿನಿಮಾ ಮೂಲಕ ಅದೃಷ್ಟ ಮರುಕಳಿಸಿದೆ. ಬೇಬಮ್ಮನ ಈ ಚಿತ್ರವನ್ನು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಇನ್ನು ಬಾಕ್ಸಾಫಿಸ್ನಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.
ವಾರಿಯರ್ ಬಾಕ್ಸಾಫೀಸ್ ಲೆಕ್ಕಾಚಾರ!
ಲಿಂಗುಸ್ವಾಮಿ ನಿರ್ದೇಶಿಸಿದ 'ದಿ ವಾರಿಯರ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ರಿಲೀಸ್ ಬಳಿಕ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಕೂಡ, ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ರಿಲೀಸ್ ಆದ 3ನೇ ದಿನಕ್ಕೆ ಸಿನಿಮಾ 21 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಈ ಸಿನಿಮಾಗೆ ಹಾಕಿದ 70 ಕೋಟಿ ಬಜೆಟ್ ಒಂದೇ ವಾರದಲ್ಲಿ ವಾಪಸ್ ಆಗಲಿದೆ ಎನ್ನಲಾಗುತ್ತಿದೆ.
ಕೃತಿ ಶೆಟ್ಟಿ ನಟಿಸಿದ ಚಿತ್ರಗಳು!
'ಉಪ್ಪೆನ' ಚಿತ್ರದ ನಂತರ ಕೃತಿ ಶೆಟ್ಟಿ ಬಗ್ಗೆ ಸಾಕಷ್ಟು ನಿರೀಕ್ಷೆ ಹೆಚ್ಚಿತ್ತು. ಆದರೆ ನಿರೀಕ್ಷೆಯಂತೆ ಕೃತಿ ಅಂತಹ ಯಶಸ್ಸು ಕಾಣಲಿಲ್ಲ. ಉಪ್ಪೆನ ಬಳಿಕ ಕೃತಿ 'ಶ್ಯಾಮ ಸಿಂಘ ರಾಯ್' ಸಿನಿಮಾದಲ್ಲಿ ನಟಿಸಿದರು. ಆದರೆ ಈ ಚಿತ್ರದಲ್ಲಿ ಸಾಯಿ ಪಲ್ಲವಿಯದ್ದು ಪ್ರಮುಖ ಪಾತ್ರವಾಗಿತ್ತು. ಆ ಬಳಿಕ ಬಂದ 'ಬಂಗಾರ್ರಾಜು' ಅಷ್ಟೇನು ಸದ್ದು ಮಾಡಲಿಲ್ಲ. ಈ 'ವಾರಿಯರ್' ಮೂಲಕ ಮತ್ತೆ ದೊಡ್ಡ ಮಟ್ಟದ ಯಶಸ್ಸು ಧಕ್ಕಿಸಿಕೊಂಡಿದ್ದಾರೆ.
ಕೃತಿ ಮುಂದಿನ ಸಿನಿಮಾಗಳು!
ವಾರಿಯರ್ ಸಿನಿಮಾದ ಬಳಿಕ ಕೃತಿ ಶೆಟ್ಟಿ ಕೈಯಲ್ಲಿ ದೊಡ್ಡ, ದೊಡ್ಡ ಸಿನಿಮಾಗಳಿವೆ. ನಟ ಸೂರ್ಯನ ಮುಂದಿನ ಸಿನಿಮಾದಲ್ಲಿ ಕೃತಿ ಶೆಟ್ಟಿ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ನಟಿ ಕೃತಿ ಹೇಗೆ ಕಾಣಿಸಿಕೊಳ್ಳಲಿದ್ದರೆ ಎನ್ನುವ ಕುತೂಹಲ ಮೂಡಿದೆ. ಇದರ ಜೊತೆಗೆ 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ' ಚಿತ್ರದಲ್ಲೂ ನಟಿ ಕೃತಿ ನಟಿಸಿದ್ದಾರೆ. ಇದರೊಂದಿಗೆ ಹೆಸರಿಡದ ಇನ್ನೂ ಎರಡು ಸಿನಿಮಾಗಳು ಕೃತಿ ಕೈಯಲ್ಲಿ ಇವೆ.