Don't Miss!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Automobiles Mahindra Thar: ಸುಲಭವಾಗಿ ಆಫ್ರೋಡ್ ಕಿಂಗ್ ಖರೀದಿಸಬೇಕೆ?: ಆನ್ರೊಡ್ ಬೆಲೆ, EMI ಸಂಪೂರ್ಣ ಮಾಹಿತಿ!
- News ನೇಹಾ ಕೊಲೆಗೆ ಸಿಎಂ ತೀವ್ರ ಖಂಡನೆ: ಕೊಲೆಗಾರನಿಗೆ ಶಿಕ್ಷೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಫ್ಯಾನ್ಸ್ ನಡುವೆ ಬೆಂಕಿ ಹಚ್ಚಿದ ಶಕೀಲಾ
ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಸರ್ವೆ ಸಾಮಾನ್ಯ. ನೆಚ್ಚಿನ ನಟನ ವಿಚಾರದಲ್ಲಿ ಅಭಿಮಾನಿಗಳು ಕಿತ್ತಾಡುವುದು ಕೇವಲ ಒಂದು ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿಲ್ಲ. ಫ್ಯಾನ್ಸ್ ವಾರ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇದೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಇಬ್ಬರ ಸ್ಟಾರ್ ನಟರ ಅಭಿಮಾನಿಗಳ ವಾರ್ ತಾರಕ್ಕೇರಿತ್ತು. ಸ್ಯಾಂಡಲ್ ವುಡ್ ನಲ್ಲಿ ಇದು ತಣ್ಣಗಾಗುತ್ತಿದ್ದಂತೆ ಈಗ ಪಕ್ಕದ ರಾಜ್ಯದಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಟಕ್ಕೆ ಇಳಿದಿದ್ದಾರೆ.
ಹೌದು, ಇತ್ತೀಚಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಪ್ರಿನ್ಸ್ ಮಹೇಶ್ ಬಾಬು ನಡುವಿನ ಕಿತ್ತಾಟ ಜೋರಾಗಿದೆ. ಸಂಕ್ರಾಂತಿ ಸಮಯದಲ್ಲಿ ತೆರೆಗೆ ಬಂದ ಸರಿಲೇರು ನೀಕೆವ್ವರು ಮತ್ತು ಅಲಾ ವೈಕುಂಠಪುರಂಲೋ ಸಿನಿಮಾ ನಂತರ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ನಡೆಸುತ್ತಿದ್ದಾರೆ.
ದೂರದ ಅಮೇರಿಕಾದಲ್ಲೂ ಮಹೇಶ್ ಬಾಬು ದಾಖಲೆ ಅಳಿಸಿ ಹಾಕಿದ ಅಲ್ಲು ಅರ್ಜುನ್.!
ಈ ನಡುವೆ ದಕ್ಷಿಣ ಭಾರತದ ನಟಿ ಶಕೀಲಾ ನೀಡಿರುವ ಹೇಳಿಕೆ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ಶಕೀಲಾ ಇಬ್ಬರು ನಟರ ಅಭಿಮಾನಿಗಳ ನಡುವೆ ಬೆಂಕಿ ಇಟ್ಟಿದ್ದಾರೆ.
ಶಕೀಲಾ ಹೇಳಿದ್ದೇನು?
ದಕ್ಷಿಣ ಭಾರತದ ನಟಿ, ವಯಸ್ಕ ಚಿತ್ರಗಳ ನಾಯಕಿ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಬಗ್ಗೆ ಮಾತನಾಡಿದ್ದಾರೆ. ನಿರೂಪಕರು ಶಕೀಲಾಗೆ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಶಕೀಲಾ ಮಹೇಶ್ ಬಾಬು ನನ್ನ ಸಹೋದರನಂತೆ. ಜೂ.ಎನ್ ಟಿ ಆರ್ ಉತ್ತಮ ಡ್ಯಾನ್ಸರ್, ಅಲ್ಲು ಅರ್ಜುನ್ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ 'ನ್ಯಾಷನಲ್ ಸ್ಟಾರ್'!
ವೈರಲ್ ಆಗಿದೆ ವಿಡಿಯೋ
ಶಕೀಲಾ ಹೇಳಿರುವ ಈ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲು ಮಹೇಶ್ ಬಾಬು ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನೆ ಇಟ್ಟುಕೊಂಡು ಅಭಿಮಾನಿಗಳು ಅಲ್ಲು ಅರ್ಜುನ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತ ಅಲ್ಲು ಅಭಿಮಾನಿಗಳು ಶಕೀಲಾ ಸಹೋದರ ಮಹೇಶ್ ಬಾಬು, ಶಾಕೀಲಾ ಬಾಬು ಎಂದು ಹೆಸರು ಬದಲಾಯಿಸಿ ಟ್ರೋಲ್ ಮಾಡುತ್ತಿದ್ದಾರೆ.
ಗರಂ ಆದ ಅಲ್ಲು ಫ್ಯಾನ್ಸ್
ಇದರಿಂದ ಸಿಟ್ಟಿಗೆದ್ದಿರುವ ಅಲ್ಲು ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ವೈರಲ್ ಮಾಡುವವರಿವ ವಿರುದ್ಧ ಗರಂ ಆಗಿದ್ದಾರೆ. ಅಲ್ಲು ಅರ್ಜುನ್ ಬಗ್ಗೆ ಕೇವಲ ತೆಲುಗಿನಲ್ಲಿ ಅಥವಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ. ವಿದೇಶದಲ್ಲೂ ಅಲ್ಲುಗೆ ಪ್ಯಾನ್ಸ್ ಇದ್ದಾರೆ. ದೊಡ್ಡ ಸ್ಟಾರ್ ನಟನ ಬಗ್ಗೆ ಗೊತ್ತಿರದೆ ಇರುವುದಕ್ಕೆ ಸಾಧ್ಯವಿಲ್ಲ. ಉದ್ದೇಶ ಪೂರ್ವಕವಾಗಿಯೆ ಶಕೀಲಾ ಹೀಗೆ ಹೇಳಿದ್ದಾರೆ ಎನ್ನುವುದು ಅಲ್ಲು ಅಭಿಮಾನಿಗಳ ವಾದವಾಗಿದೆ.
ಮಗನ ಚಿತ್ರ ನೋಡಿ ಸೂಪರ್ ಸ್ಟಾರ್ ಕೃಷ್ಣ ಹೇಳಿದ್ದೇನು?
ಬನ್ನಿ-ಪ್ರಿನ್ಸ್ ಅಭಿಮಾನಿಗಳ ಸಂಬಂಧ ಹಳಸಿದೆ
ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಅಭಿಮಾನಿಗಳ ನಡುವಿನ ಸಂಬಂಧ ಹಳಸಿದೆ. ಅಲಾ ವೈಕುಂಠಪುರಂಲೋ ಮತ್ತು ಸರಿಲೇರು ನೀಕೆವ್ವರು ಸಿನಿಮಾಗಳ ಕಲೆಕ್ಷನ್ ವಿಚಾರವಾಗಿ ಇಬ್ಬರು ಅಭಿಮಾನಿಗಳ ನಡುವೆ ಚರ್ಚೆ ಜೋರಾಗಿ ನಡೆದಿದ್ದು. ಸರಿಲೇರು ನೀಕೆವ್ವರು ಸಿನಿಮಾ ಕಲೆಕ್ಷನ್ ಫೇಕ್ ಎಂದು ಅಲ್ಲು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದರು. ಈ ಎರಡು ಸಿನಿಮಾಗಳು ರಿಲೀಸ್ ನಂತರ ಅಭಿಮಾನಿಗಳು ಆಗಾಗ ಕಿತ್ತಾಡಿಕೊಳ್ಳುತ್ತಿದ್ದಾರೆ.