Don't Miss!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- News ವಿರಾಟ್ ಕೊಹ್ಲಿ ಬಳಿ ಬಂದ ಅಭಿಮಾನಿಯನ್ನು ಕಾಲಲ್ಲಿ ತುಳಿದ ಸೆಕ್ಯೂರಿಟಿ ಸಿಬ್ಬಂದಿ-ರೂಪೇಶ್ ರಾಜಣ್ಣ ಹೇಳಿದ್ದೇನು?
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆ ಯೂಟ್ಯೂಬರ್ ನನ್ನನ್ನು ಕೆಟ್ಟದಾಗಿ ಬಳಸಿಕೊಂಡ: ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ನಟಿ
ತೆಲುಗು ಯೂಟ್ಯೂಬರ್ ಶ್ರೀಕಾಂತ್ ರೆಡ್ಡಿಯನ್ನು ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ಕರಾಟೆ ಕಲ್ಯಾಣಿ ನಡು ರಸ್ತೆಯಲ್ಲಿ ಹೊಡೆದ ಪ್ರಕರಣ ದಿನೇ ದಿನೇ ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದೆ.
ಶ್ರಿಕಾಂತ್ ರೆಡ್ಡಿ, ಯುವತಿಯರೊಟ್ಟಿಗೆ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ನಲ್ಲಿ ಹಂಚಿಕೊಳ್ಳುತ್ತಿದ್ದ. ಆತನ ಮನೆಗೆ ತೆರಳಿದ್ದ ನಟಿ ಕರಾಟೆ ಕಲ್ಯಾಣಿ ಹಾಗೂ ಇತರರು ಈ ಬಗ್ಗೆ ಪ್ರಶ್ನೆ ಮಾಡಿ, ಯುವತಿಯರೊಟ್ಟಿಗೆ ಪ್ರಾಂಕ್ ವಿಡಿಯೋ ಮಾಡುವುದು ನಿಲ್ಲುವಂತೆ ಹೇಳಿದ್ದರು. ನಂತರ ಶ್ರೀಕಾಂತ್ ರೆಡ್ಡಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮೇಲೆ ಹಲ್ಲೆ ಮಾಡಿದ್ದರು.
ನನ್ನನ್ನು ಕೆಟ್ಟದಾಗಿ ಮುಟ್ಟಿದ, ಹಣ ಕೊಡುತ್ತೇನೆ ನನ್ನೊಟ್ಟಿಗೆ ಸಹಕರಿಸು ಎಂದು ಕೇಳಿದ ಅದಕ್ಕಾಗಿಯೇ ಇವನನ್ನು ಹೊಡೆದಿದ್ದೇನೆ ಎಂದು ನಟಿ ಕರಾಟೆ ಕಲ್ಯಾಣಿ ವಿಡಿಯೋದಲ್ಲಿ ಹೇಳಿದ್ದರು. ಆದರೆ ಶ್ರೀಕಾಂತ್ ರೆಡ್ಡಿ ಬೇರೆಯದ್ದೇ ವಿಷಯ ಹೇಳಿದರು. ಕರಾಟೆ ಕಲ್ಯಾಣಿ ನನ್ನಿಂದ ಹಣ ವಸೂಲಿಗೆ ಬಂದಿದ್ದಳು. ಹಣ ನೀಡದೇ ಇದ್ದರೆ ಮಹಿಳಾ ಕಲ್ಯಾಣ ಇಲಾಖೆಗೆ ನಿನ್ನ ಮೇಲೆ ದೂರು ಕೊಡಿಸುತ್ತೇನೆ, ಮಹಿಳೆಯರಿಂದ ಪ್ರತಿಭಟನೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದಿದ್ದರು.
ಬಳಿಕ ಇಬ್ಬರೂ ಹೋಗಿ ಹೈದರಾಬಾದ್ನ ಯೂಸಫ್ಗಡ ಪೊಲೀಸ್ ಠಾಣೆಯಲ್ಲಿ ಪರಸ್ಪರರ ಮೇಲೆ ದೂರು ದಾಖಲು ಮಾಡಿದ್ದರು. ಆ ನಂತರ ನಟಿ ಕರಾಟೆ ಕಲ್ಯಾಣಿ ಅಲ್ಲಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆ ಬಳಿಕ ಕರಾಟೆ ಕಲ್ಯಾಣಿ ವಿರುದ್ಧವೇ ಸತತ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿ ಎಫ್ಐಆರ್ ಸಹ ದಾಖಲಾಯಿತು. ಕರಾಟೆ ಕಲ್ಯಾಣಿ, ಅಕ್ರಮವಾಗಿ ಮಗುವನ್ನು ಖರೀದಿ ಮಾಡಿದ್ದಾರೆಂಬ ಆರೋಪ ಸಹ ಮಾಡಲಾಗಿ, ಅಧಿಕಾರಿಗಳು ಕರಾಟೆ ಕಲ್ಯಾಣಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದರು.
ಈಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ. ನಟಿ, ಯೂಟ್ಯೂಬರ್ ಸ್ವಾತಿ ನಾಯ್ಡು ಎಂಬುವರು ಶ್ರೀಕಾಂತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಕಾಂತ್ ರೆಡ್ಡಿ ಮಾತ್ರವೇ ಅಲ್ಲದೆ ಇತರೆ ಕೆಲವು ಯೂಟ್ಯೂಬ್ ಚಾನೆಲ್ಗಳ ವಿರುದ್ಧವೂ ಆರೋಪ ಮಾಡಿದ್ದಾರೆ.
ನನ್ನನ್ನು ಅಶ್ಲೀಲವಾಗಿ ಬಳಸಿಕೊಂಡು ಕೆಲವು ಯೂಟ್ಯೂಬ್ ಚಾನೆಲ್ಗಳು ವೀವ್ಸ್ ಹೆಚ್ಚು ಮಾಡಿಕೊಂಡವು. ''ಎಕ್ಸ್ಪೋಸ್ ಮಾಡು, ಆ ಡ್ರೆಸ್ ಹಾಕಿಕೊ, ಶಾರ್ಟ್ಸ್ ಹಾಕಿಕೊ, ಬ್ರಾ ಹಾಕಿಕೊ ಎಂದೆಲ್ಲ ಹೇಳಿ ಎಪಿಕ್ ಮೀಡಿಯಾದವರು, ಯೂಟ್ಯೂಬರ್ ವೆಂಕಟ್ ಎಲ್ಲ ನನ್ನನ್ನು ಬಳಸಿಕೊಂಡರು. ಇನ್ನು ಶ್ರೀಕಾಂತ್ ರೆಡ್ಡಿ ಕೂಡ ನನ್ನನ್ನು ಬಳಸಿಕೊಂಡ. ಆತ ಹಗ್ ಮಾಡುವುದು, ಕಿಸ್ ಮಾಡುವುದು ಎಲ್ಲವನ್ನೂ ಮಾಡಿದ. ನಾನೂ ಸಹ ಚಾನೆಲ್ಗಾಗಿ ಎಂದು ಮಾಡಿದೆ. ಆದರೆ ನನ್ನನ್ನು ಬಳಸಿಕೊಂಡು ಕೊನೆಗೆ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ'' ಎಂದಿದ್ದಾರೆ ಸ್ವಾತಿ ನಾಯ್ಡು.
''ಅವರು ನನ್ನನ್ನು ಅವರಿಗೆ ಬೇಕಾದಂತೆ ಬಳಸಿಕೊಂಡರು. ಸಾವಿರ, ಐದು ಸಾವಿರ ಹಣವನ್ನಷ್ಟೆ ಅವರು ನನಗೆ ಕೊಡುತ್ತಿದ್ದರು. ಆದರೆ ಕೊನೆಗೆ ನನ್ನ ಕರಿಬೇವಿನ ರೀತಿ ಪಕ್ಕಕ್ಕೆ ಬಿಸಾಡಿದರು. ನನ್ನಿಂದ ಉಪಯೋಗ ಎಂದಮೇಲೆ ನನ್ನಿಂದ ವಿಡಿಯೋ ಏಕೆ ಮಾಡಿಸಿಕೊಂಡಿರಿ. ನನ್ನ ವಿಡಿಯೋಗಳನ್ನು ನಿಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಏಕೆ ಇಟ್ಟಿದ್ದೀರಿ'' ಎಂದು ಪ್ರಶ್ನೆ ಮಾಡಿದ್ದಾರೆ ಸ್ವಾತಿ ನಾಯ್ಡು.