ವಿಜಯ್ ದೇವರಕೊಂಡ ಸಿನಿಮಾಕ್ಕೆ ಅಲ್ಲು ಅರ್ಜುನ್ ಆರ್ಥಿಕ ಸಹಾಯ!?
ನಟ ವಿಜಯ್ ದೇವರಕೊಂಡ ದೊಡ್ಡ ಸುದ್ದಿಯೊಂದನ್ನು ಕೆಲವು ದಿನದ ಹಿಂದೆಯಷ್ಟೆ ಹೊರಗೆಡವಿದ್ದಾರೆ. ವಿಜಯ್ ದೇವರಕೊಂಡ ಹಿಟ್ ನಿರ್ದೇಶಕ ಸುಕುಮಾರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ.
ಆದರೆ ಈ ಸಿನಿಮಾದ ಹಿಂದೆ ಖ್ಯಾತ ನಟ ಅಲ್ಲು ಅರ್ಜುನ್ ಇದ್ದಾರೆ. ನಿಜ, ವಿಜಯ್ ದೇವರಕೊಂಡ ಹಾಗೂ ಸುಕುಮಾರ್ ಸಿನಿಮಾಕ್ಕೆ ಆರ್ಥಿಕ ಸಹಾಯ ನೀಡಿರುವುದು ಅಲ್ಲು ಅರ್ಜುನ್ ಎಂಬ ಸುದ್ದಿಯೊಂದು ಈಗಷ್ಟೆ ಹೊರಬಿದ್ದಿದೆ.
ಸುಕುಮಾರ್ ಹಾಗೂ ವಿಜಯ್ ದೇವರಕೊಂಡ ಸಿನಿಮಾ ಈಗಷ್ಟೆ ಘೋಷಣೆ ಮಾಡಿದ್ದಾರೆ. ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಕೇದಾರ್ ಸೆಲಗಮಶೆಟ್ಟಿ ವಹಿಸಿಕೊಂಡಿದ್ದಾರೆ.

ಆದರೆ ಆ ಸಿನಿಮಾಕ್ಕೆ ಅಲ್ಲು ಅರ್ಜುನ್ ಸಹ ನಿರ್ಮಾಪಕರಾಗಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಸುಕುಮಾರ್ ನಿರ್ದೇಶನದ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್, ಸುಕುಮಾರ್-ವಿಜಯ್ ದೇವರಕೊಂಡಸ ಸಿನಿಮಾಕ್ಕೆ ಆರ್ಥಿಕ ಬೆಂಬಲ ನೀಡುತ್ತಿದ್ದಾರೆ.
Recommended Video
ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಅವರ ಬಹುಕಾಲದ ಗೆಳೆಯ, ಸುಕುಮಾರ್ ನಿರ್ದೇಶನದ ಆರ್ಯಾ ಸಿನಿಮಾ ಅಲ್ಲು ಅರ್ಜುನ್ ಗೆ ಸಿನಿಮಾ ರಂಗದಲ್ಲಿ ನೆಲೆಗೊಳ್ಳಲು ಮುಖ್ಯ ಕಾರಣ. ಹಾಗಾಗಿ ಸುಕುಮಾರ್ ಸಿನಿಮಾಕ್ಕೆ ಅಲ್ಲು ಅರ್ಜುನ್ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











