Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ ಡೌನ್ ನಡುವೆಯೂ ಗಗನಕ್ಕೇರಿತು ಅಲ್ಲು ಅರ್ಜುನ್ ಸಂಭಾವನೆ
ತೆಲುಗು ನಟ ಅಲ್ಲು ಅರ್ಜುನ್ ತಮ್ಮ ವೃತ್ತಿ ಬದುಕಿನ ಯಶಸ್ಸಿನ ಉತ್ತುಂಗದಲ್ಲಿ ಸಾಗುತ್ತಿದ್ದಾರೆ. 'ಅಲಾ ವೈಕುಂಠಪುರಮುಲೂ' ಚಿತ್ರದ ಭರ್ಜರಿ ಯಶಸ್ಸಿನ ನಂತರ ಅವರಿಗೆ ಬೇಡಿಕೆಯೂ ಹೆಚ್ಚಿದೆ. ಹಾಗೆಯೇ ಅಲ್ಲು ಅರ್ಜುನ್ ತಮ್ಮ ಸಂಭಾವನೆಯನ್ನು ಸುಮಾರು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
Recommended Video
ಲಾಕ್ ಡೌನ್ ಅವಧಿಯ ಬಳಿಕ ನಿರ್ಮಾಪಕರು ಸಂಕಷ್ಟದಲ್ಲಿರುವುದರಿಂದ ಸ್ಟಾರ್ಗಳ ಸಂಭಾವನೆಯಲ್ಲಿ ಕಡಿತ ಮಾಡುವ ಬಗ್ಗೆ ವಿವಿಧ ಚಿತ್ರರಂಗಗಳಲ್ಲಿ ಚರ್ಚೆ ನಡೆದಿದೆ. ಹಾಗೆಯೇ ತಮ್ಮ ಮುಂದಿನ ಚಿತ್ರ 'ಪುಷ್ಪ'ಕ್ಕಾಗಿ ಅಲ್ಲು ಅರ್ಜುನ್ ಸಂಭಾವನೆ ಕಡಿತಗೊಳಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವ ನಿರ್ಧಾರಕ್ಕೆ ತಡೆ ಒಡ್ಡಲಾಗಿತ್ತು. ಆದರೆ ಅಲ್ಲು ಅರ್ಜುನ್ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...
ಅಲ್ಲು ಅರ್ಜುನ್ 'ಅಲಾ ವೈಕುಂಠಪುರಂಲೋ' ಹಿಂದಿ ರಿಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ
ಸಂಭಾವನೆ ಏರಿಕೆ
ಅಲಾ ವೈಕುಂಠಪುರಮುಲೂ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಗದೆ ಹೋದರೂ ಬಾಕ್ಸಾಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಈ ಚಿತ್ರದ ಮೂಲಕ ಅಲ್ಲು ಅರ್ಜುನ್ ಅವರ ಮಾರುಕಟ್ಟೆ ಮತ್ತಷ್ಟು ವಿಸ್ತರಣೆಯಾಗಿದೆ. ತಮ್ಮ ಸಿನಿಮಾಗಳು ಮಿನಿಮಮ್ ಗ್ಯಾರಂಟಿ ಲಾಭ ತಂದುಕೊಡಲಿದೆ ಎನ್ನುವುದು ಅವರಿಗೆ ಖಚಿತವಾಗಿದೆ. ಇದರಿಂದಾಗಿ 'ಪುಷ್ಪ' ಚಿತ್ರಕ್ಕೆ ಅವರು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
35 ಕೋಟಿ ರೂ.ಗೆ ಹೆಚ್ಚಳ
ಕಳೆದ ಐದು ವರ್ಷಗಳಿಂದ ಅಲ್ಲು ಅರ್ಜುನ್ ಚಿತ್ರವೊಂದಕ್ಕೆ 14-17 ಕೋಟಿ ರೂ ಸಂಭಾವನೆ ಪಡೆದುಕೊಳ್ಳುತ್ತಿದ್ದರು. 'ಪುಷ್ಪ' ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಅವರು ಏಕಾಏಕಿ 35 ಕೋಟಿ ರೂ.ಗೆ ಏರಿಸಿದ್ದಾರೆ ಎನ್ನಲಾಗಿದೆ. ಇದರ ಮೂಲಕ ಅಲ್ಲು, ಜೂ.ಎನ್ಟಿಆರ್ ಮತ್ತು ಮಹೇಶ್ ಬಾಬು ಸಾಲಿಗೆ ಸೇರಿಕೊಂಡಿದ್ದಾರೆ.
ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ
ನಿರ್ದೇಶಕರ ಸಂಭಾವನೆಯೂ ಹೆಚ್ಚಳ
ಅಲಾ ವೈಕುಂಠಪುರಮುಲೋ ಚಿತ್ರ ಅಲ್ಲು ಅರ್ಜುನ್ ಅವರದೇ ಬ್ಯಾನರ್ನಲ್ಲಿ ಸಿದ್ಧವಾದ ಚಿತ್ರ. ಇದು 200 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಂಭಾವನೆಯನ್ನು 25 ಕೋಟಿ ರೂ ಎಂದು ಮೀಸಲಿರಿಸಲಾಗಿತ್ತು. ಅಲ್ಲು ಅರ್ಜುನ್ಗೆ ಸಿನಿಮಾ ಮಾಡುವಂತೆ ಕೊರತಲಾ ಶಿವ ಅವರಿಗೆ 13 ಕೋಟಿ ಆಫರ್ ನೀಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.
ದುಬಾರಿ ಬಜೆಟ್ ಚಿತ್ರ
ಲಾಕ್ ಡೌನ್ ಮುನ್ನವೇ ಚಿತ್ರ ಆರಂಭವಾಗಬೇಕಿತ್ತು. ಸ್ಲ್ಮಗ್ಲಿಂಗ್ ಕಥೆಯನ್ನು ಹೊಂದಿರುವ ಚಿತ್ರ ದುಬಾರಿ ಬಜೆಟ್ ಆಗಿರುವುದರಿಂದ ಸಿದ್ಧತೆ ಕೊಂಚ ತಡವಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಆರ್ಥಿಕ ಸಂಕಷ್ಟ ಎಲ್ಲೆಡೆ ಇರುವುದರಿಂದ ಅಲ್ಲು ಅರ್ಜುನ್ ಸಂಭಾವನೆ ಇಳಿಸಬೇಕು ಎಂದು ನಿರ್ಮಾಣ ಸಂಸ್ಥೆ ಮನವಿ ಮಾಡುವ ಸಾಧ್ಯತೆ ಇದೆ.
ಅಲ್ಲು ಅರ್ಜುನ್ ಗೆ ನಿರ್ದೇಶನ ಮಾಡಿ ಎಂದು ಸ್ಟಾರ್ ನಿರ್ದೇಶಕನಿಗೆ 13 ಕೋಟಿ ಆಫರ್