Don't Miss!
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ತಲೆಮಾರಿನ ನಾಯಕ ಉದಯ ಎಂದು ಅಲ್ಲು ಅರ್ಜುನ್ ಹೊಗಳಿದ್ದು ಯಾರನ್ನು?
ನಟ ಅಲ್ಲು ಅರ್ಜುನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಂತೆ ಅವರು ಹೆಚ್ಚಾಗಿ ಹೊಸ ತೆಲುಗು ಸಿನಿಮಾಗಳನ್ನು ನೋಡುವುದಿಲ್ಲವಂತೆ. ಪ್ರೀಮಿಯರ್ ಶೋ ಗಳಲ್ಲಿ ಪಾಲ್ಗೊಳ್ಳುವುದು ಸಹ ಕಡಿಮೆಯೆ. ಆದರೆ ಈಗ ಅಲ್ಲು ಅರ್ಜುನ್ ಅವರು ತೆಲುಗು ಸಿನಿಮಾ ಒಂದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ನಿನ್ನೆಯಷ್ಟೆ ಬಿಡುಗಡೆ ಆದ ತೆಲುಗು ಸಿನಿಮಾ 'ಜಾತಿರತ್ನಾಲು' ನೋಡಿರುವ ಅಲ್ಲು ಅರ್ಜುನ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ನಿರ್ದೇಶಕ ಹಾಗೂ ನಟರನ್ನು ಹೊಗಳಿದ್ದಾರೆ.
'ನಿನ್ನೆ ರಾತ್ರಿ 'ಜಾತಿರತ್ನಾಲು' ಸಿನಿಮಾ ನೋಡಿದೆ. ಅದ್ಭುತವಾದ ಸಿನಿಮಾ ಅದು. ಸಿನಿಮಾ ನೋಡುವಾಗ ಬಹಳ ನಕ್ಕೆ ನಾನು. ಇತ್ತೀಚಿನ ವರ್ಷಗಳಲ್ಲಿ ಇಷ್ಟೋಂದು ನಕ್ಕಿರಲಿಲ್ಲ' ಎಂದಿದ್ದಾರೆ ಅಲ್ಲು ಅರ್ಜುನ್.
'ನವೀನ್ ಪೋಲಿಶೆಟ್ಟಿ ತಮ್ಮ ಅದ್ಭುತ ನಟನೆಯಿಂದ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹೊಸ ಜನರೇಶನ್ನ 'ಪರ್ಫಾಮರ್' ಅವರು. ಹೊಸ ತಲೆಮಾರಿನ ನಾಯಕ ನಟನ ಉದಯವಾಗಿದೆ' ಎಂದು ನವೀನ್ ಅನ್ನು ಹೊಗಳಿದ್ದಾರೆ ಅಲ್ಲು ಅರ್ಜುನ್.
'ರಾಹುಲ್ ರಾಮಕೃಷ್ಣ ಅವರದ್ದು ಶ್ರಮರಹಿತ ಸಹಜ ನಟನೆ. ಪ್ರಿಯದರ್ಶಿ ಮತ್ತು ಫರಿಯಾ ಸಹ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರ ಅಭಿನಯವೂ ಚೆನ್ನಾಗಿದೆ' ಎಂದಿದ್ದಾರೆ ಅಲ್ಲು ಅರ್ಜುನ್.
'ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲ ತಂತ್ರಜ್ಞರಿಗೂ ನನ್ನ ಅಭಿನಂದನೆ. ಸಿನಿಮಾದ ನಿರ್ಮಾಪಕರಾದ ನಾಗ್ ಅಶ್ವಿನ್ಗೆ ವಿಶೇಷ ಗೌರವ ಮತ್ತು ಬಹಳ ಮುಖ್ಯವಾಗಿ ಸಿನಿಮಾದ ನಿರ್ದೇಶಕ ಅನುದೀಪ್ ಕೆವಿ ಗೆ ಅಭಿನಂದನೆ ಸಲ್ಲಿಸಲೇ ಬೇಕು. ಅವರು ಎಲ್ಲರನ್ನೂ ರಂಜಿಸಿದ್ದಾರೆ' ಎಂದಿದ್ದಾರೆ ಅಲ್ಲು.
'ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ', ಹಿಂದಿಯ 'ಚಿಚೋರೆ' ಸಿನಿಮಾಗಳಲ್ಲಿ ನಟಿಸಿದ್ದ ನವೀನ್ ಪೋಲಿಶೆಟ್ಟಿ ನಟನೆಯ 'ಜಾತಿರತ್ನಾಲು' ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Recommended Video
ನಟ ಅಲ್ಲು ಅರ್ಜುನ್ ಪ್ರಸ್ತುತ 'ಪುಷ್ಪ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ತಮಿಳಿನ ಚಿಯಾನ್ ವಿಕ್ರಂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.