twitter
    For Quick Alerts
    ALLOW NOTIFICATIONS  
    For Daily Alerts

    ಅಲ್ಲು ಅರ್ಜುನ್ ಹೊಸ ಸಿನಿಮಾ 'ಪುಷ್ಪಾ' ಕತೆ ಬಹಿರಂಗ!?

    |

    ಟಾಲಿವುಡ್ ಜನಪ್ರಿಯ ನಟ ಅಲ್ಲು ಅರ್ಜುನ್ ಅವರ ಹೊಸ ಸಿನಿಮಾ 'ಪುಷ್ಪ' ತನ್ನ ಪೋಸ್ಟರ್‌ ನಿಂದಲೇ ಗಮನ ಸೆಳೆದಿದೆ.

    ಪೋಸ್ಟರ್ ಬಿಡುಗಡೆ ಆಗಿದ್ದೇ ತಡ, ಸಿನಿಮಾ ಸುತ್ತಾ ಕುತೂಹಲ ರೂಪುಗೊಂಡಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲದೆ, ಇತರ ಸಿನಿ ಪ್ರಿಯರು ಸಹ ಕತೆ ಏನಿರಬಹುದು ಎಂಬ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.

    ಅಲ್ಲು ಅರ್ಜುನ್ ಹಾದಿ ಹಿಡಿದ ಮಹೇಶ್ ಬಾಬು: ಹೊಸ ಸಾಹಸಕ್ಕೆ ಕೈ ಹಾಕಿದ ಸೂಪರ್ ಸ್ಟಾರ್ಅಲ್ಲು ಅರ್ಜುನ್ ಹಾದಿ ಹಿಡಿದ ಮಹೇಶ್ ಬಾಬು: ಹೊಸ ಸಾಹಸಕ್ಕೆ ಕೈ ಹಾಕಿದ ಸೂಪರ್ ಸ್ಟಾರ್

    ಪೋಸ್ಟರ್ ನೋಡಿದರೆ ಅಲ್ಲು ಅರ್ಜುನ್ ರಕ್ತ ಚಂದನ ಸಾಗಣೆಕಾರ ಎಂಬುದು ಗೊತ್ತಾಗುತ್ತಿದೆ. ಆದರೆ ಸಿನಿಮಾದ ಟೈಟಲ್ 'ಪುಷ್ಪ' ಹೀರೋ ನ ಹೆಸರೇ ಅಥವಾ ನಾಯಕಿಯದ್ದೇ. ಸಿನಿಮಾದ ಕತೆ ಏನಿರಬಹುದು? ಎಂಬೆಲ್ಲಾ ಕುತೂಹಲ ಇದೆ.

    ಅಲ್ಲು ಅರ್ಜುನ್ 'ಪುಷ್ಪ' ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ವಿಲನ್?ಅಲ್ಲು ಅರ್ಜುನ್ 'ಪುಷ್ಪ' ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ವಿಲನ್?

    ಇದೀಗ ಸಿನಿಮಾದ ಕತೆಯ ಎಳೆಯೊಂದು ಲೀಕ್ ಆಗಿದ್ದು, ಸಿನಿಮಾದ ಕತೆ ಇದೇ ಇರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.

    ಪುಷ್ಪಾ ನಾಯಕನ ಹೆಸರೇ ಅಥವಾ ನಾಯಕಿಯದ್ದೇ?

    ಪುಷ್ಪಾ ನಾಯಕನ ಹೆಸರೇ ಅಥವಾ ನಾಯಕಿಯದ್ದೇ?

    'ಪುಷ್ಪಾ' ಎಂಬುದು ಸಿನಿಮಾ ನಾಯಕನ ಹೆಸರಲ್ಲ, ಬದಲಿಗೆ ನಾಯಕಿಯ ಹೆಸರು ಎನ್ನಲಾಗುತ್ತಿದೆ. ಸಿನಿಮಾದ ನಾಯಕಿ ಕನ್ನಡತಿ ರಶ್ಮಿಕಾ ಮಂದಣ್ಣ ಆಗಿದ್ದು, ಸಿನಿಮಾದಲ್ಲಿ ರಶ್ಮಿಕಾ ಹೆಸರು 'ಪುಷ್ಪಾ' ಎಂದಿದೆಯಂತೆ.

    ಪುಷ್ಪಾ ಅರಣ್ಯಾಧಿಕಾರಿ ಆಗಿರುತ್ತಾಳೆ?

    ಪುಷ್ಪಾ ಅರಣ್ಯಾಧಿಕಾರಿ ಆಗಿರುತ್ತಾಳೆ?

    ಈಗ ಹರಿದಾಡುತ್ತಿರುವ ಕತೆಯ ಎಳೆಯ ಪ್ರಕಾರ, ನಾಯಕಿ ಪುಷ್ಪಾ ಅರಣ್ಯಾಧಿಕಾರಿ ಆಗಿದ್ದು, ಆಕೆ ಕುಖ್ಯಾತ ರಕ್ತ ಚಂದನ ಕಳ್ಳಸಾಗಣೆಕಾರ (ಅಲ್ಲು ಅರ್ಜುನ್) ಅನ್ನು ಹಿಡಿಯುತ್ತಾರಂತೆ. ಆತನನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ನಾಯಕಿ ಮಾಡುತ್ತಾಳೆ. ಈ ಸಮಯ ಇಬ್ಬರಿಗೂ ಪ್ರೇಮವೂ ಮೂಡುತ್ತದೆ.

    ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..

    ಈ ಸಮಯ ನಾಯಕಿಯ ಹತ್ಯೆ ಆಗುತ್ತದೆ

    ಈ ಸಮಯ ನಾಯಕಿಯ ಹತ್ಯೆ ಆಗುತ್ತದೆ

    ಒರಟು ವ್ಯಕ್ತಿತ್ವದ ನಾಯಕನನ್ನು ಬದಲಾವಣೆ ಮಾಡುವ ಪ್ರಯತ್ನದಲ್ಲಿದ್ದಾಗ ನಾಯಕಿಯ ಹತ್ಯೆಯಾಗುತ್ತದೆ. ಹತ್ಯೆ ಮಾಡಿದವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ನಾಯಕ ಮತ್ತೆ ತನ್ನ ಹಳೆಯ ವ್ಯಕ್ತಿತ್ವಕ್ಕೆ ಇಳಿಯುತ್ತಾನೆ. ಇದು ಸಿನಿಮಾದ ಕತೆಯ ಎಳೆ.

    ಲಾಕ್‌ಡೌನ್ ಬಳಿಕ ಚಿತ್ರೀಕರಣ ನಡೆಯಲಿದೆ

    ಲಾಕ್‌ಡೌನ್ ಬಳಿಕ ಚಿತ್ರೀಕರಣ ನಡೆಯಲಿದೆ

    ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸ್ವಲ್ಪ ಭಾಗವಷ್ಟೆ ಚಿತ್ರೀಕರಣ ಆಗಿದೆ. ಕೊರೊನಾ ಲಾಕ್‌ಡೌನ್ ಮುಗಿದ ಬಳಿಕ ಸಿನಿಮಾ ಚಿತ್ರೀಕರಣ ಮುಂದುವರೆಯಲಿದೆ. ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದು, ತೀವ್ರ ನಿರೀಕ್ಷೆ ಹುಟ್ಟಿಸಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    English summary
    Actor Allu Arjun's new movie Pushpa's story line leaked. People saying its a revenge story.
    Monday, April 13, 2020, 21:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X