Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ, ಮತ್ಯಾರು?
ಅನುಷ್ಕಾ ಶೆಟ್ಟಿ ಮತ್ತು ಆರ್ ಮಾಧವನ್ ನಟಿಸಿದ್ದ 'ನಿಶ್ಯಬ್ದಂ' ಸಿನಿಮಾ ಇತ್ತೀಚಿಗಷ್ಟೆ ತೆರೆಕಂಡಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನುಷ್ಕಾ ಅಭಿಮಾನಿಗಳಿಗೆ ಇದು ನಿರಾಸೆ ತಂದಿತ್ತು.
ಆದ್ರೆ, ನಿಶ್ಯಬ್ದಂ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬ ವಿಚಾರ ಹೊರಬಿದ್ದಿದೆ. ಹೌದು, ನಿರ್ದೇಶಕ ಹೇಮಂತ್ ಮಧುಕರ್ ಮೊದಲ ಈ ಕಥೆಯನ್ನು ನಟಿ ರೆಜಿನಾಗೆ ಹೇಳಿದ್ದರಂತೆ.
ಸೆನ್ಸೇಷನ್ ಸ್ಟಾರ್ ಜೊತೆ ನಟಿ ಅನುಷ್ಕಾ ಶೆಟ್ಟಿ ಸಿನಿಮಾ: ಇಲ್ಲಿದೆ ಮಾಹಿತಿ
ಇಡೀ ಕಥೆ ಸೈಲೆಂಟ್ ಆಗಿ ಯಾವುದೇ ಸಂಭಾಷಣೆ ಇಲ್ಲದೇ ಮಾಡುವುದು ನಿರ್ದೇಶಕ ಗುರಿಯಾಗಿತ್ತಂತೆ. ಆದ್ರೆ, ನಿರ್ಮಾಪಕ ಕೋನಾ ವೆಂಕಟ್ ನಿರ್ದೇಶಕರ ಕಥೆಗೆ ಬದಲಾವಣೆ ತಂದರಂತೆ.
ರೆಜಿನಾ ಅವರ ಜಾಗಕ್ಕೆ ಅನುಷ್ಕಾ ಶೆಟ್ಟಿ ಇದ್ದರೆ ಸೂಕ್ತ ಎಂದು ನಿರ್ಧರಿಸಿದ ನಿರ್ಮಾಪಕರು, ಕಥೆಯಲ್ಲೂ ಬದಲಾವಣೆ ತಂದರು. ಆದ್ದರಿಂದಲೇ ಮಾಧವನ್ ಮತ್ತು ಅಂಜಲಿಯಂತಹ ಸ್ಟಾರ್ಗಳು ಈ ಚಿತ್ರಕ್ಕೆ ಆಯ್ಕೆ ಮಾಡಲಾಯಿತು. ಆದ್ರೆ, ಸಿನಿಮಾ ರಿಲೀಸ್ ಆದ್ಮೇಲೆ ಈ ಯೋಜನೆ ವಿಫಲವಾಗಿದೆ ಎಂದು ಫಲಿತಾಂಶ ಹೇಳಿದೆ.
ಸಿನಿಮಾ ತೆರೆಕಂಡ ಬಳಿಕ ಅನುಷ್ಕಾ ಅವರ ಮಟ್ಟಕ್ಕೆ ತಕ್ಕಂತೆ ಕಥೆಯಿಲ್ಲ ಎಂಬ ಕಾಮೆಂಟ್ಗಳೂ ಬಂದವು. ಒಂದು ವೇಳೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗಿತ್ತು ಎಂಬ ಆತಂಕವೂ ಕಾಡಿತ್ತು. ಹಾಗಾಗಿ, ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಲು ಮುಂದಾದರು.
ನಿಶ್ಯಬ್ದಂ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲು ಚಿಂತಿಸಲಾಗಿದೆ. ನಾನಿ ಹಾಗೂ ಸುಧೀರ್ ಬಾಬು ನಟಿಸಿದ್ದ 'ವಿ' ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮತ್ತೆ ರಿ ರಿಲೀಸ್ ಮಾಡುವ ಸಾಧ್ಯತೆ ಇದೆ.