ಲಾಕ್ ಡೌನ್ ನಡುವೆ ಭಾವನಾತ್ಮಕ ಸಂದೇಶ ರವಾನಿಸಿದ ನಟಿ ಅನುಷ್ಕಾ ಶೆಟ್ಟಿ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಲಾಕ್ ಡೌನ್ ನಡುವೆ ಒಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಕೊರೊನಾ ಮಹಾಮಾರಿಯ ಬಗ್ಗೆ ದೇಶದ ಜನತೆಗೆ ಸಂದೇಶ ರವಾನಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿರುವ ಅನುಷ್ಕಾ ನಮ್ಮನ್ನು ಪಾಡುತ್ತಿರುವ ಪ್ರತಿಯೋಬ್ಬರಿಗೂ ಧನ್ಯವಾದ ತಿಳಿಸಿ, ಪ್ರೀತಿಯಿಂದ ವಂದಿಸಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಅನುಷ್ಕಾ,"ನಮ್ಮನ್ನು ಕಾಪಾಡುತ್ತಿರುವ ಪ್ರತಿಯೊಬ್ಬರಿಗೂ ನಾವು ಧನ್ಯವಾದ ತಿಳಿಸಬೇಕು. ಅವರಿಗೆ ನಾನು ಪ್ರೀತಿಯಿಂದ ವಂದಿಸುತ್ತೇನೆ. ಆದರೆ ಕೃತಜ್ಞತೆ ಸಲ್ಲಿಸಲು ಪದಗಳೇ ಸಿಗುತ್ತಿಲ್ಲ" ಎಂದು ಹೇಳಿದ್ದಾರೆ.

ಇನ್ನೂ "ಈ ಪರಿಸ್ಥಿಯಿಂದ ಹೊರಬಂದ ಬಳಿಕ ನಾವು ಮೌಲ್ಯಯುತವಾಗಿ ಬದುಕಬೇಕು. ನಾವು ಪ್ರತಿಯೊಬ್ಬರು ವಿಭಿನ್ನ ಜಾಗದಲ್ಲಿದ್ದರೂ ಒಂದಾಗಿ ನಿಂತಿದ್ದೀವಿ. ಮಾನವೀಯತೆಯ ಕಡೆಗೆ ನಮಗಿರುವ ಜವಾಬ್ದಾರಿ ನಿಭಾಯಿಸೋಣ". ಎಂದು ಬರೆದುಕೊಂಡಿದ್ದಾರೆ.
ಲಾಕ್ ಡೌನ್ ಗೆ ಬೆಂಬಲಿಸಿ ಎಂದು ಅನುಷ್ಕಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇನ್ನು ಅನುಷ್ಕಾ ಸದ್ಯ ನಿಶಬ್ದಂ ಸಿನಿಮಾ ರಿಲೀಸ್ ಎದುರು ನೋಡುತ್ತಿದ್ದಾರೆ. ಎಲ್ಲವು ಅಂದಿಕೊಂಡಂತೆ ಆಗಿದ್ದರೆ ಸಿನಿಮಾ ಏಪ್ರಿಲ್ 3ಕ್ಕೆ ರಿಲೀಸ್ ಆಗಬೇಕಿತ್ತು. ಕೊರೊನಾ ವೈರಸ್ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.


Click it and Unblock the Notifications











