Don't Miss!
- News Lok Sabha Election: ಮತದಾನದ ದಿನ ಬಸ್ಗಳ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊಲೆ ಮಾಡಲು ಯತ್ನ: 'ಅರ್ಜುನ್ ರೆಡ್ಡಿ' ನಟಿಯಿಂದ ದೂರು ದಾಖಲು
ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದ ನಟಿಗೆ ಅಪಘಾತವಾಗಿದೆ. ಆದರೆ ಇದು ಅಪಘಾತವಲ್ಲ ನನ್ನನ್ನು ಕೊಲ್ಲಲು ಮಾಡಿದ ಯತ್ನ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
'ಅರ್ಜುನ್ ರೆಡ್ಡಿ' ಸಿನಿಮಾದ ಆರಂಭದ ದೃಶ್ಯದಲ್ಲಿ ನಟ ವಿಜಯ್ ದೇವರಕೊಂಡ ಒಬ್ಬ ಯುವತಿಯ ಮನೆಗೆ ಹೋಗಿ ಆಕೆಗೆ ಕತ್ತಿ ತೋರಿಸಿ ಬೆದರಿಸಿ ನಂತರ ಯುವತಿಯ ಬಾಯ್ಫ್ರೆಂಡ್ ಬಂದನೆಂದು ಬರಿಮೈಯಲ್ಲಿ ಹೊರಗೆ ಬರುವ ದೃಶ್ಯವೊಂದಿದೆ. ಆ ದೃಶ್ಯದಲ್ಲಿ ನಟಿಸಿರುವ ಯುವತಿ ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದಲ್ಲಿ ಅಪಘಾತಕ್ಕೆ ಈಡಾಗಿದೆ.
ಸಾಯಿ ಸುಧಾ ರೆಡ್ಡಿ ಕಾರು ವಿಜಯವಾಡದ ಫ್ಲೈಓವರ್ ಬಳಿ ಅಪಘಾತಕ್ಕೆ ಈಡಾಗಿದ್ದು, ನಟಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಈ ಘಟನೆ ಅಪಘಾತವಲ್ಲ, ನನ್ನನ್ನು ಕೊಲ್ಲಲು ಮಾಡಿರುವ ಯತ್ನ ಎಂದು ಆ ನಟಿಯು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
'ನಟಿ ಸಾಯಿ ಸುಧಾ ರೆಡ್ಡಿ ಹಾಗೂ ಕ್ಯಾಮೆರಾಮನ್ ಶ್ಯಾಮ್ ಕೆ ನಾಯ್ಡು ನಡುವೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಲೇ ಇದೆ. ಶ್ಯಾಮ್ ಕೆ ನಾಯ್ಡು, ನನ್ನನ್ನು ಮದುವೆ ಆಗುತ್ತೀನೆಂದು ಹೇಳಿ ಮೋಸ ಮಾಡಿದ್ದಾನೆ ಎಂದು ನಟಿ ಸುಧಾ ರೆಡ್ಡಿ ದೂರು ದಾಖಲಿಸಿದ್ದರು. ಈಗ ಅದೇ ಶ್ಯಾಮ್ ನಾಯ್ಡು, ನನ್ನನ್ನು ಕೊಲ್ಲಲು ಯತ್ನಿಸಿದ್ದಾನೆ' ಎಂದು ಆರೋಪಿಸಿದ್ದಾರೆ ಸುಧಾ ರೆಡ್ಡಿ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Recommended Video
2014 ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸುಧಾ ರೆಡ್ಡಿಗೆ ಈ ವರೆಗೆ ಸೂಕ್ತ ಹಿಟ್ ದೊರೆತಿಲ್ಲ. ಸಾಕಷ್ಟು ಕಿರು ಚಿತ್ರ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸುಧಾ ರೆಡ್ಡಿ, ಅರ್ಜುನ್ ರೆಡ್ಡಿ, ಅಆ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.