Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಂಚಣಿ ಹಣ ದೇಣಿಗೆ ನೀಡಿದ್ದ ಅಂಧ ಮಹಿಳೆಗೆ ವಿಶೇಷ ಗೌರವ ನೀಡಿದ ಸೋನು
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜನಪರ ಕೆಲಸ ಮಾಡ್ತಿದ್ದ ಸೋನು ಸೂದ್ ಫೌಂಡೇಶನ್ಗೆ ಅಂಧ ಮಹಿಳೆಯೊಬ್ಬರು ತನ್ನ 5 ತಿಂಗಳ ಪಿಂಚಣಿ ಹಣವನ್ನು ದೇಣಿಗೆಯಾಗಿ ಕೊಟ್ಟಿದ್ದರು. 15 ಸಾವಿರ ರೂಪಾಯಿಯನ್ನು ಸೋನು ಫೌಂಡೇಶನ್ಗೆ ನೀಡಿದ ಮಹಿಳೆಯನ್ನು 'ಭಾರತದ ಶ್ರೀಮಂತ ಮಹಿಳೆ' ಎಂದು ಸೋನು ಸೂದ್ ಪರಿಚಯಿಸಿದ್ದರು.
ಇದೀಗ, ಈ ಮಹಿಳೆಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಆಂಧ್ರದಲ್ಲಿ ಸೋನು ಸೂದ್ ಫೌಂಡೇಶನ್ ವತಿಯಿಂದ ಆಮ್ಲಜನಕ ಘಟಕ ಸ್ಥಾಪಿಸಲಾಗಿದೆ. ಇದನ್ನು ಜುಲೈ 23 ರಂದು ಉದ್ಘಾಟಿಸಲಾಗುತ್ತಿದೆ.
ಭಾರತದ ಅತ್ಯಂತ 'ಶ್ರೀಮಂತ' ಮಹಿಳೆಯನ್ನು ಪರಿಚಯಿಸಿದ ಸೋನು ಸೂದ್
ಸೋನು ಸೂದ್ ಸಾರಥ್ಯದಲ್ಲಿ ನಿರ್ಮಾಣವಾಗಿರುವ ಆಮ್ಲಜನಕ ಘಟಕವನ್ನು ವಿಶೇಷ ಚೇತನ ಮಹಿಳೆ ಬುಡಾ ನಾಗಲಕ್ಷ್ಮಿ ಉದ್ಘಾಟಿಸಲಿದ್ದಾರೆ ಎಂಬ ವಿಷಯ ಹೊರಬಿದ್ದಿದೆ. ಈ ಕುರಿತು ಸ್ವತಃ ಸೋನು ಸೂದ್ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
''ಸೋನು ಸೂದ್ ಫೌಂಡೇಶನ್ಗೆ ತನ್ನ 5 ತಿಂಗಳ ಪಿಂಚಣಿ ಹಣ 15000 ಸಾವಿರ ರೂಪಾಯಿ ದೇಣಿಗೆ ನೀಡಿದ್ದ ಬುಡಾ ನಾಗಲಕ್ಷ್ಮಿ ಆಂಧ್ರದಲ್ಲಿ ಸ್ಥಾಪಿತವಾಗಿರುವ ಆಮ್ಲಜನಕ ಘಟಕದ ಉದ್ಘಾಟನೆ ಮಾಡಲಿದ್ದಾರೆ ಎನ್ನುವುದು ನನಗೆ ಹೆಮ್ಮೆ ತಂದಿದೆ. ಜುಲೈ 23ರಂದು ಬೆಳಗ್ಗೆ 11.15ಕ್ಕೆ ಈ ಕಾರ್ಯಕ್ರಮ ನೆರವೇರಲಿದೆ'' ಎಂದು ಸೋನು ಸೂದ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಐಟಿ ಸಚಿವ ಗೌತಮ್ ರೆಡ್ಡಿ, ಚಂದ್ರಾಧರ್ ಬಾಬು, ಜಿಲ್ಲಾಧಿಕಾರಿ ಸಹ ಭಾಗಿಯಾಗಲಿದ್ದಾರೆ ಎಂದು ಸೋನು ಸೂದ್ ಮಾಹಿತಿ ನೀಡಿದ್ದಾರೆ.
ಮೇ 13 ರಂದು ಬುಡಾ ನಾಗಲಕ್ಷ್ಮಿ ಸೋನು ಸೂದ್ ಫೌಂಡೇಶನ್ಗೆ 15 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು.
ಅಮ್ಮನ ಸ್ಮರಿಸಿದ ಸೋನು ಸೂದ್ ಭಾವುಕರಾಗಿದ್ದರು
Recommended Video
ಜುಲೈ 22 ರಂದು ಸೋನು ಸೂದ್ ಅವರ ತಾಯಿ ಸರೋಜ್ ಸೂದ್ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಸೋನು ಸೂದ್ ಅಮ್ಮನ ಬಗ್ಗೆ ಭಾವುಕ ಪೋಸ್ಟ್ ಹಾಕಿದ್ದರು. ''ಹ್ಯಾಪಿ ಬರ್ತಡೇ ಅಮ್ಮಾ. ಪ್ರತಿ ವರ್ಷವೂ ನಿಮ್ಮನ್ನು ತಬ್ಬಿಕೊಂಡು ವಿಶ್ ಮಾಡಬೇಕಿತ್ತು ಎಂದೆನಿಸುತ್ತದೆ. ನೀನು ಕಲಿಸಿದ ಜೀವನದ ಪಾಠಗಳಿಗೆ ಧನ್ಯವಾದಗಳು. ಸದಾ ಉತ್ತಮ ಕೆಲಸಗಳನ್ನು ಮಾಡುತ್ತಾ ನಿಮಗೆ ಹೆಮ್ಮೆ ತರುತ್ತೇನೆ ಎಂದು ಮಾತು ಕೊಡುತ್ತಿದ್ದೇನೆ'' ಎಂದಿದ್ದರು.