Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೃಷ್ಣನ ಕೈಹಿಡಿದ ತುಂಟಾಟದ 'ಚಿಟ್ಟೆ' ಛಾಯಾ ಸಿಂಗ್
ನಟಿ ಛಾಯಾ ಸಿಂಗ್ ಸದ್ದು-ಸುದ್ದಿಯಿಲ್ಲದೇ ಮದುವೆಯಾಗಿದ್ದಾರೆ. ತಮಿಳು ಕಿರುತೆರೆ ನಟ ಕೃಷ್ಣನ ಜೊತೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ ಛಾಯಾ ಸಿಂಗ್. ಉತ್ತರ ಭಾರತ ಮೂಲದ ಬೆಂಗಳೂರು ಹುಡುಗಿ ಛಾಯಾ ಸಿಂಗ್ ಬಹಳಷ್ಟು ಕಾಲದಿಂದ ಆ ಟಿವಿ ನಟನೊಟ್ಟಿಗೆ ರೊಮ್ಯಾನ್ಸ್ ಮಾಡುತ್ತಿದ್ದರು. ಈಗ ಗಟ್ಟಿಮೇಳದಲ್ಲಿ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ಈವರೆಗೆ 6 ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಛಾಯಾ ಸಿಂಗ್, ಕನ್ನಡದಲ್ಲಿ ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಪ್ರೀತಿಸ್ಲೇಬೇಕು, ಸಖಸಖಿ, ಅಕಾಶಗಂಗೆ, ಚಿಟ್ಟೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆ ನಟಿಸಿದ 'ತಿರುಡಾ ತಿರುಡಿ' ಅವರಿಗೆ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ. ಇದಲ್ಲದೇ ಇನ್ನೂ ಮೂರ್ನಾಲ್ಕು ತಮಿಳು ಚಿತ್ರಗಳಲ್ಲೂ ಛಾಯಾ ನಟಿಸಿದ್ದಾರೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಭೋಜಪುರಿ ಹೀಗೆ ಆರು ಭಾಷೆಗಳಲ್ಲಿ ನಟಿಸಿದರೂ ಅವರು ಯಾಕೋ ಎಲ್ಲೂ ಗಟ್ಟಿಯಾಗಿ ನೆಲೆ ನಿಲ್ಲಲಿಲ್ಲ. ಭಾರೀ ಜನಪ್ರಿಯತೆ ಎಲ್ಲೂ ಸಿಗಲಿಲ್ಲ. ಕನ್ನಡದಲ್ಲಿ 'ಬಲಗಾಲಿಟ್ಟು ಒಳಗೆ ಬಾ' ಎಂದು ಕರೆಸಿಕೊಂಡರೂ ತಪ್ಪಿ ಎಡಗಾಲಿಟ್ಟರೋ ಏನೋ.., ಇಲ್ಲೂ ಭಾರೀ ಗೆಲುವು ಸಿಗಲಿಲ್ಲ. ಚಿಟ್ಟೆ ಚಿತ್ರದಲ್ಲಿ ನಟಿಸಿದರೂ ಹಾರಾಡುವ ಅದೃಷ್ಟ ಸಿಗಲಿಲ್ಲ.
ಸಿನಿಮಾದಲ್ಲಿ ಬೇಡಿಕೆ ಕಡಿಮೆಯಾದಾಗ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿದರು. ಈ ನಡುವೆ ತಮಿಳಿನ 'ಅನಂತಪುರತ್ತು ವೀಡು' ಎಂಬ ಚಿತ್ರದಲ್ಲಿ ಛಾಯಾ ಸಿಂಗ್ ನಟಿಸಿದ್ದರು. ಅಲ್ಲಿ ತಮಿಳು ಕಿರುತೆರೆ ನಟ ಕೃಷ್ಣನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಈಗ ಮದುವೆಯ ಮೂಲಕ ಸತಿ-ಪತಿ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಜೀ ಕನ್ನಡದಲ್ಲಿ 'ಹಾಲು ಜೇನು ನಾನು ನೀನು' ಎಂಬ ಕಾರ್ಯಕ್ರಮವನ್ನು ಛಾಯಾ ನಡೆಸಿಕೊಡುತ್ತಿದ್ದಾರೆ.
ಈಗ್ಗೆ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಛಾಯಾ ಹಾಗೂ ಕೃಷ್ಣ, ರಜಪೂತ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಛಾಯಾ ಸಿಂಗ್ ಹಾಗೂ ಕೃಷ್ಣರ ಹೆತ್ತವರು, ಹಿರಿಯರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಇದೀಗ ಸಪ್ತಪದಿ ತುಳಿದು ನವವಧು ಎನಿಸಿರುವ ಛಾಯಾರ ಮುಂದಿನ ಬಣ್ಣದ ಬದುಕಿನ ನಡೆ ಏನೋ! (ಒನ್ ಇಂಡಿಯಾ ಕನ್ನಡ)