Don't Miss!
- News ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲಿದ್ದಾರಾ ದಚ್ಚು?, ಎಚ್ಡಿಕೆ ಪರ ಇನ್ನೂ ಪ್ರಚಾರಕ್ಕಿಳಿಯದ ಸುಮಲತಾ-ಗುಟ್ಟೇನು?
- Automobiles ಕೋಟಿ ಬೆಲೆಯ ಲ್ಯಾಂಡ್ರೋವರ್ ಖರೀದಿಸಿದ ಗಾಯಕಿ: ಹೆಣ್ಮಕ್ಳೇ ಸ್ಟ್ರಾಂಗು ಗುರು ಎಂದ ನೆಟ್ಟಿಗರು!
- Finance Real Estate: ಬೆಂಗಳೂರಿನ ಕೋರಮಂಗಲದಲ್ಲಿ ದುಬಾರಿ ಬೆಲೆಗೆ ಆಸ್ತಿ ಖರೀದಿಸಿದ ಅಜಿತ್ ಐಸಾಕ್
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿ ಸಹಿತ ಕುಟುಂಬದ ಮೇಲೆ ಜೇನುನೊಣಗಳ ದಾಳಿ: ನಡೆದಿದ್ದೇನು?
ಮೆಗಾಸ್ಟಾರ್ ಚಿರಂಜೀವಿ ಸಹಿತ ಕುಟುಂಬ ಸದಸ್ಯರ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಚಿರಂಜೀವಿ ಕುಟುಂಬ ಆಪ್ತರೊಬ್ಬರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗ ಈ ಘಟನೆ ನಡೆದಿದೆ.
Recommended Video
ವಿವಾದಾತ್ಮಕ ದೋಮಕೊಂಡ ಕೋಟೆಯ ವಾರಸರು ಎನ್ನಲಾಗುವ ಉಮಾಪತಿ ರಾವ್ ಅವರು ನಾಲ್ಕು ದಿನದ ನಿಧನಹೊಂದಿದ್ದರು, ಅವರ ಅಂತ್ಯಕ್ರಿಯೆಯಲ್ಲಿ ಮೆಗಾಸ್ಟಾರ್ ಕುಟುಂಬ ಸಹ ಭಾಗವಹಿಸಿತ್ತು. ಆಗ ಈ ಘಟನೆ ನಡೆದಿದೆ.
ಚಿತ್ರರಂಗದ ಭವಿಷ್ಯ: ಚಿರಂಜೀವಿ ಮನೆಯಲ್ಲಿ ಮಹತ್ವದ ಸಭೆ
ವಿವಾದಾತ್ಮಕ ದೋಮಕೊಂಡ ಕೋಟೆಯಲ್ಲಿ ಮೃತರ ಅಂತ್ಯಸಂಸ್ಕಾರ ಆಯೋಜಿಸಲಾಗಿತ್ತು. ಆಗ ಏಕಾ-ಏಕಿ ಜೇನುನೊಣಗಳ ಹಿಂಡು ಅಲ್ಲಿದ್ದವರ ಮೇಲೆ ದಾಳಿ ಮಾಡಿದೆ. ಆ ಸಂದರ್ಭದಲ್ಲಿ ಚಿರಂಜೀವಿ ಮತ್ತು ಕೆಲವು ಕುಟುಂಬಸ್ಥರು ಸೇರಿ ಹಲವು ಪ್ರಮುಖರು ಅಲ್ಲಿ ಹಾಜರಿದ್ದರು.
ಗದ್ದಲ, ಹೊಗೆಗೆ ಜೇನುನೊಣಗಳು ಕ್ರೋಧಗೊಂಡವು
ದೋಮಕೊಂಡ ಹಳೆಯ ಕೋಟೆಯಾಗಿದ್ದು ಅಲ್ಲಿ ಸಾಕಷ್ಟು ಜೇನುನೊಣಗಳು ಗೂಡು ಕಟ್ಟಿದ್ದವು. ಅಂತ್ಯಕ್ರಿಯೆ ನಡೆವ ವೇಳೆ ಅಲ್ಲಿನ ಗದ್ದಲ, ಹೊಗೆ ಇನ್ನಿತರೆಗಳಿಂದ ಕ್ರೋಧಗೊಂಡು ಜೇನುನೊಣಗಳು ಅಲ್ಲಿದ್ದ ಗುಂಪಿನ ಮೇಲೆ ದಾಳಿ ನಡೆಸಿವೆ.
ಕೆಲವು ಜೇನುನೊಣ ಕಚ್ಚಿವೆ
ಚಿರಂಜೀವಿ, ರಾಮ್ಚರಣ ತೇಜ, ಉಪಾಸನಾ ಸೇರಿ ಇನ್ನೂ ಕೆಲವು ಚಿರಂಜೀವಿ ಕುಟುಂಬ ಸದಸ್ಯರನ್ನು ಭದ್ರತಾ ಸಿಬ್ಬಂದಿ ಅಲ್ಲಿಯೇ ಇದ್ದ ಕೋಣೆಗೆ ಕೊಂಡೊಯ್ದರು. ಆದರೆ ರಾಮ್ಚರಣ್ ಹಾಗೂ ಉಪಾಸನಾ ಗೆ ಕೆಲವು ಜೇನುನೊಣಗಳು ಕಚ್ಚಿವೆ ಎನ್ನಲಾಗಿದೆ. ಕೆಲವು ಗ್ರಾಮಸ್ಥರಿಗೂ ಜೇನುನೊಣಗಳು ಕಚ್ಚಿವೆಯಂತೆ. ಯಾರಿಗೂ ಹೆಚ್ಚಿನ ಸಮಸ್ಯೆ ಆಗಿಲ್ಲ.
ಕಾಂಡೋಮ್ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ
ತೆಲುಗು ರಾಜ್ಯಗಳ ವಿಐಪಿಗಳಲ್ಲಿ ಒಬ್ಬರು
ನಿಧನರಾಗಿರುವ ಉಮಾಪತಿ ರಾವ್ ಅವರು ಚಿರಂಜೀವಿ ಸೊಸೆ, ರಾಮ್ಚರಣ್ ಪತ್ನಿ ಉಪಾಸನಾ ಅವರ ತಾತ. ಉಮಾಪತಿ ರಾವ್ ಆಂಧ್ರದ ವಿಐಪಿಗಳಲ್ಲಿ ಒಬ್ಬರು. ಅವರು ಮಾಜಿ ಐಎಎಸ್ ಅಧಿಕಾರಿ ಸಹ ಆಗಿದ್ದರು. ವಿವಾದದ ಕೇಂದ್ರಬಿಂದು ಆಗಿರುವ ದೋಮಕೊಂಡ ಕೋಟೆಯ ವಾರಸರು ಸಹ ಆಗಿದ್ದರು.
ನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆ
ಉರ್ದು ಕವಿ ಸಹ ಆಗಿದ್ದರು
ಉಪಾಸನಾ ತನ್ನ ತಾತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ತಾತ ಮಾಜಿ ಐಎಎಸ್ ಅಧಿಕಾರಿ. ಶಿಸ್ತು, ಸಂಯಮ, ಮಾನವೀಯತೆ, ನಿಸ್ವಾರ್ಥತೆಯನ್ನು ಉಸಿರಾಗಿಸಿಕೊಂಡಿದ್ದರು. ಅವರು ತಿರುಮಲ ತಿರುಪತಿ ದೇವಸ್ಥಾನದ ಮೊದಲ ಆಡಳಿತಾಧಿಕಾರಿ ಸಹ ಆಗಿದ್ದರು. ಜೊತೆಗೆ ಅವರೊಬ್ಬ ಅದ್ಭುತ ಉರ್ದು ಕವಿ ಸಹ, ಅವರ ಶಾಯರಿಗಳು ಬಹಳ ಪ್ರಖ್ಯಾತವಾಗಿದ್ದವು ಎಂದಿದ್ದಾರೆ.