Don't Miss!
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಂತರ ಹಣ ನಷ್ಟವಾಗುವ ಭೀತಿಯಲ್ಲಿ ಚಿರಂಜೀವಿ ಮತ್ತು ಪುತ್ರ
ಸಿನಿಮಾ ನಟನೆ, ನಿರ್ಮಾಣದಿಂದ ಕೋಟಿ-ಕೋಟಿ ಗಳಿಸಿರುವ ಚಿರಂಜೀವಿ ಮತ್ತು ಪುತ್ರ ರಾಮ್ಚರಣ್ ತೇಜಾ ಗೆ ಹಣ ಕಳೆದುಕೊಳ್ಳುವ ಭಯ ಆತಂಕ ಎದುರಾಗಿದೆ.
ಹಣ ಕಳೆದುಕೊಳ್ಳುವ ಆತಂಕವೆಂದೊಡನೆ, ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆಯೇ ಎಂದುಕೊಳ್ಳಬೇಕಿಲ್ಲ. ಆದರೆ ಪ್ರಸ್ತುತ ಕೊರೊನಾ ಸನ್ನಿವೇಶದಿಂದ ಸಾಕಷ್ಟು ದೊಡ್ಡ ಮಟ್ಟದ ಆರ್ಥಿಕ ಹಾನಿಯೇ ಚಿರಂಜೀವಿ ಮತ್ತು ರಾಮ್ ಚರಣ್ ತೇಜಾ ಗೆ ಆಗಲಿದೆ.
ನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆ
ಚಿರಂಜೀವಿ ಅಭಿನಯಿಸುತ್ತಿರುವ 'ಆಚಾರ್ಯ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದುದು ಬಹುತೇಕರಿಗೆ ಗೊತ್ತೇ ಇದೆ. ಇದರ ನಿರ್ಮಾಪಕ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ. ಕೊರೊನಾ ಮತ್ತು ಇತರೆ ಕಾರಣಗಳಿಂದಾಗಿ ನಿರ್ಮಾಪಕ ರಾಮ್ ಚರಣ್ ತೇಜಾ ಗೆ ಭಾರಿ ದೊಡ್ಡ ನಷ್ಟ ಎದುರಾಗಲಿದೆ.
ಆಚಾರ್ಯ ಕ್ಕಾಗಿ ದೊಡ್ಡ ಸೆಟ್ ಹಾಕಲಾಗಿತ್ತು
ಆಚಾರ್ಯ ಸಿನಿಮಾಕ್ಕಾಗಿ ಹೈದರಾಬಾದ್ ಸಮೀಪವೇ ಬಹಳಾ ದೊಡ್ಡ ಸೆಟ್ ಒಂದನ್ನು ನಿರ್ಮಿಸಲಾಗಿದೆ. ಅದರಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಲಾಕ್ಡೌನ್ ಆದ ಕಾರಣ ಚಿತ್ರೀಕರಣ ಸ್ಥಗಿತಗೊಂಡಿತು.
ಸೆಟ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು
ಲಾಕ್ಡೌನ್ ಮುಗಿದ ನಂತರ ಚಿತ್ರೀಕರಣ ಮಾಡಲೆಂದು ಸೆಟ್ ಅನ್ನು ಕೆಡವದೆ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಆದರೆ ಲಾಕ್ಡೌನ್ ವಿಸ್ತರಣೆ ಆಗುತ್ತಲೇ ಹೋಗಿದ್ದರಿಂದ ಈಗ ಆತಂಕ ತಲೆಎತ್ತಿದೆ. ಆತಂಕ್ಕೆ ಮುಖ್ಯ ಕಾರಣ ಹವಾಮಾನ.
ತೆಲುಗು ಚಿತ್ರರಂಗದ ನಾಯಕ ಪಟ್ಟ ಚಿರಂಜೀವಿಗೆ: ಬಾಲಕೃಷ್ಣ ಗರಂ
ತೆಲಂಗಾಣ ಆಂಧ್ರಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ
ತೆಲಂಗಾಣ, ಆಂಧ್ರಗಳಲ್ಲಿ ಜುಲೈ ಮೊದಲ ವಾರದಿಂದ ಭಾರಿ ಮಳೆ ನಿರೀಕ್ಷಿಸಲಾಗಿದೆ. ಹವಾಮಾನ ಇಲಾಖೆ ಅಂದತೆಯೇ ಆದರೆ ಈ ಎರಡೂ ರಾಜ್ಯಗಳಲ್ಲಿ ಈ ವಾರದಲ್ಲಿಯೇ ಮಳೆಯಾಗುತ್ತದೆ. ಹಾಗೊಮ್ಮೆ ಮಳೆ ಆದರೆ ಆಚಾರ್ಯ ಸೆಟ್ ಗೆ ಭಾರಿ ಹಾನಿ ಆಗಲಿದೆ.
ಕಾಂಡೋಮ್ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ
ಮಳೆ ನಿರೋಧಿಸಬಲ್ಲ ಸೆಟ್ ಅಲ್ಲ
ಆಚಾರ್ಯ ಕ್ಕಾಗಿ ನಿರ್ಮಿಸಿರುವುದು ಮಳೆ ನಿರೋಧಕ ಸೆಟ್ ಅಲ್ಲ. ಹಾಗಾಗಿ ಮಳೆ-ಗಾಳಿಯ ಹೊಡೆತಕ್ಕೆ ಆ ದೊಡ್ಡ ಸೆಟ್ ತಡೆಯಲಾರದು. ಹಾಗಾಗಿ ಸುಮಾರು ಕೋಟಿಗಳಷ್ಟು ನಿರ್ಮಾಪಕರಿಗೆ ಆ ಮೂಲಕ ಚಿರಂಜೀವಿ ಅವರಿಗೂ ನಷ್ಟವಾಗಲಿದೆ.