Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರು ಕುಟುಂಬದಲ್ಲಿ ಮತ್ತೊಂದು ಮದ್ವೆ: ಸಾಯಿ ಧರಮ್ ತೇಜ ಕಲ್ಯಾಣಕ್ಕೆ ಸಿದ್ಧತೆ!
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮದ ಸುಳಿವು ಸಿಕ್ಕಿದೆ. ಇತ್ತೀಚಿಗಷ್ಟೆ ನಾಗಬಾಬು ಅವರ ಪುತ್ರಿ ನಿಹಾರಿಕ ವಿವಾಹ ಜರುಗಿತ್ತು. ಡಿಸೆಂಬರ್ 9 ರಂದು ಉದಯ್ಪುರ್ನಲ್ಲಿ ನಡೆದ ನಿಹಾರಿಕ-ಚೈತನ್ಯ ಕಲ್ಯಾಣದ ಸಮಾರಂಭದಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು.
ಈ ಮದುವೆ ನೆರವೇರಿದ ಕೆಲವೇ ದಿನಗಳಲ್ಲಿ ಚಿರು ಕುಟುಂಬದ ಮತ್ತೊಬ್ಬ ನಟನ ಮದುವೆ ಸುದ್ದಿ ಚರ್ಚೆಯಲ್ಲಿದೆ. ಹೌದು, ಚಿರಂಜೀವಿ ಸೋದರಳಿಯ ಸಾಯಿ ಧರಮ್ ತೇಜ ಅವರ ಮದುವೆಗೆ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಫೋಟೋಗಳು; ಚೈತನ್ಯ ಜೊತೆ ಹಸೆಮಣೆ ಏರಿದ ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಸಾಯಿ ಧರಮ್ ತೇಜ ''ನಿಹಾರಿಕ ಮದುವೆ ಬಳಿಕ ನನ್ನ ಮದುವೆಗೆ ಮನೆಯಲ್ಲಿ ಒತ್ತಡ ಹೆಚ್ಚಿದೆ. ಮದುವೆ ಮಾಡಿಕೋ ಎಂದು ಕುಟುಂಬದ ಸದಸ್ಯರು ಆಗ್ರಹಿಸುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
''ಸದ್ಯಕ್ಕೆ ನಾನು ಸಿಂಗಲ್, ನನ್ನ ಮುಂದಿನ ಸಿನಿಮಾ 'ಸೋಲೋ ಬ್ರಾತುಕೆ ಸೋ ಬೆಟರ್' ಕುರಿತು ಯೋಚಿಸುತ್ತಿದ್ದೇನೆ. ಆದ್ರೆ, ನನ್ನ ಫ್ಯಾಮಿಲಿ ನನ್ನ ಮದುವೆಗೆ ಸಿದ್ಧತೆ ಮಾಡ್ತಿದ್ದಾರೆ'' ಎಂದು ಹೇಳಿಕೊಂಡಿದ್ದಾರೆ.
ಸಾಯಿ ಧರಮ್ ತೇಜ ಅವರ ಈ ಮಾತು ಗಮನಿಸಿದರೆ ಬಹುಶಃ ಅವರ ಕುಟುಂಬದಲ್ಲಿ ಮದುವೆಗೆ ಸಿದ್ಧತೆ ಮಾಡುತ್ತಿದ್ದಾರೆ, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಸಹ ಮಾಡಿದರು ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದ ಸಾಯಿ ಧರಮ್ ತೇಜ, ''ಇನ್ನು ಒಂದು ಅಥವಾ ಎರಡು ವರ್ಷದ ನಂತರ ಮದುವೆ ಮಾಡಿಕೊಳ್ಳಬಹುದು. ಸದ್ಯಕ್ಕೆ ಯಾವುದೇ ಪ್ಲಾನ್ ಇಲ್ಲ'' ಎಂದು ಹೇಳಿಕೊಂಡಿದ್ದರು. ಆದ್ರೆ, ನಿಹಾರಿಕ ಮದುವೆ ಮುಗಿಯುತ್ತಿದ್ದಂತೆ ಸಾಯಿ ಧರಮ್ ತೇಜ ಮದುವೆಯೂ ಸುದ್ದಿಯಾಗುತ್ತಿದೆ.
Recommended Video
ಸೋಲೋ ಬ್ರಾತುಕೆ ಸೋ ಬೆಟರ್ ಚಿತ್ರದಲ್ಲಿ ನಭಾ ನಟೇಶ್ ನಾಯಕಿಯಾಗಿ ನಟಿಸಿದ್ದಾರೆ. ಸುಬ್ಬು ಆಕ್ಷನ್ ಕಟ್ ಹೇಳಿದ್ದು ಇದು ಚೊಚ್ಚಲ ಚಿತ್ರ. ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಬ್ಯಾನರ್ ಅಡಿಯಲ್ಲಿ ಬಿವಿಎಸ್ಎನ್ ಪ್ರಸಾದ್ ನಿರ್ಮಿಸಿದ್ದಾರೆ. ಡಿಸೆಂಬರ್ 25, 2020 ರಂದು (ಕ್ರಿಸ್ಮಸ್) ಈ ಸಿನಿಮಾ ತೆರೆಕಾಣಬಹುದು.