Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದೇಶದ ನಂಬರ್ 1 ನಟ': ಚಿರಂಜೀವಿ ಹೊಗಳಿದ್ದು ಯಾವ ನಟನನ್ನು?
ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಿರಂಜೀವಿ ಸಹ ಒಬ್ಬರು. ವಯಸ್ಸು 65 ಆಗಿದ್ದರೂ ಈಗಲೂ ಡಾನ್ಸ್, ಫೈಟ್ ದೃಶ್ಯಗಳಲ್ಲಿ ಯುವಕರನ್ನು ನಾಚಿಸುತ್ತಾರೆ ಚಿರಂಜೀವಿ.
ಹಲವು ದಶಕಗಳಿಂದ ದೇಶದ ಟಾಪ್ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಚಿರಂಜೀವಿ ನಟರೊಬ್ಬರನ್ನು 'ದೇಶದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ನಟ' ಎಂದು ಹೊಗಳಿದ್ದಾರೆ.
ಪವನ್ ಕಲ್ಯಾಣ್ ಪಾರ್ಟಿ ಮೀಟಿಂಗ್ ವಿಡಿಯೋ ವೈರಲ್: ಚಿರಂಜೀವಿ ಬಗ್ಗೆ ಭರ್ಜರಿ ಸುದ್ದಿ
ನಟರು ಇತರ ನಟರನ್ನು ಹೊಗಳುವುದು ಕಡಿಮೆ, ಅದರಲ್ಲೂ ಚಿರಂಜೀವಿ ಅಂಥಹಾ ಮೇರು ನಟರು ನಟನೊಬ್ಬನನ್ನು 'ದೇಶದ ಅತ್ಯುತ್ತಮ' ನಟ ಎಂದು ಹೊಗಳಿದ್ದಾರೆಂದರೆ ಅದು ಸಾಮಾನ್ಯ ವಿಷಯವಂತೂ ಖಂಡಿತ ಅಲ್ಲ.
ಚಿರಂಜೀವಿ ಅವರಿಂದಾಗಿ ಸಾವಿರಾರು ಜೀವ ಉಳಿಯಿತು: 'ಎನ್ಕೌಂಟರ್' ವಿಶ್ವನಾಥ್ ಸಿ ಸಜ್ಜನರ್
ಚಿರಂಜೀವಿ ಅವರು ಹೀಗೆ ಮನಸಾರೆ ಹೊಗಳಿರುವ ನಟ ಮತ್ತಾರು ಅಲ್ಲ, ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ತಮ್ಮ ಅತ್ಯದ್ಭುತ ಅಭಿನಯದಿಂದ ಕೋಟ್ಯಂತರ ಮನಸ್ಸನ್ನು ಸೂರಿಗೊಂಡಿದ್ದಾರೆ ನಟ ವಿಜಯ್ ಸೇತುಪತಿ.
'ಉಪ್ಪೆನ' ಸಿನಿಮಾದ ಕಾರ್ಯಕ್ರಮದಲ್ಲಿ ಮಾತು
ನಟ ವಿಜಯ್ ಸೇತುಪತಿ ನಟನೆ 'ಉಪ್ಪೆನ' ಸಿನಿಮಾದ 'ಪ್ರೀ ರಿಲೀಜ್' ಕಾರ್ಯಕ್ರಮ ಇತ್ತೀಚೆಗಷ್ಟೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಚಿರಂಜೀವಿ, ವಿಜಯ್ ಸೇತುಪತಿ ಅವರನ್ನು ಬಹುವಾಗಿ ಹೊಗಳಿದರು. 'ಮಾನವೀಯತೆ ಉಳ್ಳ ವ್ಯಕ್ತಿ. ಇಷ್ಟು ಖ್ಯಾತಿ, ಹಣವಿದ್ದರೂ ಸರಳವಾಗಿ ಬದುಕುವ ವ್ಯಕ್ತಿ ವಿಜಯ್ ಸೇತುಪತಿ' ಎಂದರು ಚಿರಂಜೀವಿ.
ಮತ್ತೊಮ್ಮೆ ಚಿರಂಜೀವಿ ಚಿತ್ರದಲ್ಲಿ ನಟಿಸುತ್ತಾರಾ ಕನ್ನಡ ನಟ ಸುದೀಪ್?
ಲೀಲಾಜಾಲವಾಗಿ ನಟಿಸುತ್ತಾರೆ ವಿಜಯ್ ಸೇತುಪತಿ: ಚಿರು
'ದೇಶದ ಅತ್ಯದ್ಭುತ ನಟ ವಿಜಯ್ ಸೇತುಪತಿ. ತಮಿಳಿನಲ್ಲಿ ಹಲವರು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಆದರೆ ಅವರಿಗೆ ತಾವು ನಾಯಕ ಪಾತ್ರದಲ್ಲಿಯೇ ನಟಿಸಬೇಕು ಎಂಬ ಹಂಬಲ ಇಲ್ಲ. ಬದಲಿಗೆ ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ. ಎಂಥಹಾ ಪಾತ್ರವಾದರೂ ಸರಿಯೇ ಅದನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ ವಿಜಯ್ ಸೇತುಪತಿ' ಎಂದು ಹೊಗಳಿದ್ದಾರೆ ಚಿರಂಜೀವಿ.
ಜಾರ್ಜಿಯಾದಲ್ಲಿ ನಡೆದ ಘಟನೆ ಮೆಲಕು ಹಾಕಿದ ಚಿರಂಜೀವಿ
'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಚಿತ್ರೀಕರಣವನ್ನು 'ಜಾರ್ಜಿಯಾ'ನಲ್ಲಿ ಮಾಡುತ್ತಿದ್ದೆವು. ಆಗ ಅಲ್ಲಿ ನಾವು ತಂಗಿದ್ದ ಹೋಟೆಲ್ ರಿಸೆಪ್ಶನ್ನಲ್ಲಿ ಗದ್ದಲ ಆರಂಭವಾಯಿತು. ಏನಪ್ಪಾ ಇಲ್ಲಿಯೂ ಅಭಿಮಾನಿಗಳ ಗಲಾಟೆ ಎಂದು ಕೊಂಡು ಕೆಳಗೆ ಹೋಗೋಣ ಎಂದುಕೊಂಡೆ. ಆ ವೇಳೆಗೆ ವಿಜಯ್ ಸೇತುಪತಿ ಅಭಿಮಾನಿಗಳೊಟ್ಟಿಗೆ ಮಾತನಾಡುತ್ತಿದ್ದರು. ಅಭಿಮಾನಿಗಳು ವಿಜಯ್ ಸೇತುಪತಿಯನ್ನು ನೋಡದೇ ವಾಪಸ್ ಹೋಗುವುದಿಲ್ಲ ಎಂದು ಗಲಾಟೆ ಮಾಡುತ್ತಿದ್ದರಂತೆ. ವಿಜಯ್ ಸೇತುಪತಿಗೆ ಎಲ್ಲೆಲ್ಲಿಯೂ ಅಭಿಮಾನಿಗಳು ಇದ್ದಾರೆ' ಎಂದರು ಚಿರಂಜೀವಿ.
Recommended Video
ಮಾಸ್ಟರ್ ಸಿನಿಮಾದ ಭವಾನಿ ನನ್ನ ಅಚ್ಚು-ಮೆಚ್ಚು: ಚಿರಂಜೀವಿ
'ಇತ್ತೀಚೆಗೆ 'ಮಾಸ್ಟರ್' ಸಿನಿಮಾ ನೋಡಿದೆ. ಸಿನಿಮಾದಲ್ಲಿ ಭವಾನಿ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಭವಾನಿ ಪಾತ್ರದ ಮೂಲಕ ನಾಯಕ ನಟನ ಪಾತ್ರ ಸಪ್ಪೆ ಆಗುವಂತೆ ಮಾಡಿಬಿಟ್ಟಿದ್ದಾರೆ. ಭವಾನಿ ಪಾತ್ರ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ ಚಿರಂಜೀವಿ. 'ನನ್ನ್ ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಸಹ ನಟಿಸಿದ್ದಾರೆ ವಿಜಯ್ ಸೇತುಪತಿ. ಪಾತ್ರ ದೊಡ್ಡದು-ಚಿಕ್ಕದು ಎಂಬುದನ್ನೆಲ್ಲಾ ಯೋಚಿಸದೇ, ಚಿರಂಜೀವಿ ಕೇಳಿದ್ದಾರೆ ಎಂಬ ಕಾರಣಕ್ಕೆ ಬಂದು ಕಡಿಮೆ ಅವಧಿಯಲ್ಲಿಯೇ ನಟಿಸಿದ್ದಾರೆ ಎಂದರು ಚಿರಂಜೀವಿ.