Don't Miss!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Acharya Trailer : 'ಆಚಾರ್ಯ' ಟ್ರೇಲರ್ ಬಿಡುಗಡೆ, ಅಪ್ಪ ಮಗನ ಸಖತ್ ಆಕ್ಷನ್
ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ತೇಜ ಒಟ್ಟಾಗಿ ನಟಿಸಿರುವ 'ಆಚಾರ್ಯ' ಸಿನಿಮಾದ ಟ್ರೇಲರ್ ಬಿಡುಗಡೆ ಅಗಿದ್ದು, ಭರಪೂರ ಆಕ್ಷನ್ ಭರಿತ ಮನೊರಂಜನಾತ್ಮಕ ಸಿನಿಮಾ ಇದಾಗಿರುವ ಭರವಸೆಯನ್ನು ಟ್ರೇಲರ್ ಮೂಡಿಸುತ್ತಿದೆ.
ಈ ಹಿಂದೆ ರಾಮ್ ಚರಣ್ ತೇಜ ನಟಿಸಿರುವ ಕೆಲವು ಸಿನಿಮಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಂಡಿದ್ದರಾದರೂ, ಕೇವಲ ಒಂದು ಹಾಡು, ಒಂದು ಫೈಟ್ ದೃಶ್ಯದಲ್ಲಿ ಅತಿಥಿ ಪಾತ್ರವಾಗಿ ಮಾತ್ರವೇ ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಅಪ್ಪ-ಮಗ ಇಬ್ಬರೂ ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಆಚಾರ್ಯ' ಸಿನಿಮಾದ ಟ್ರೇಲರ್ನಿಂದ ತಿಳಿದು ಬರುತ್ತಿರುವುದೇನೆಂದರೆ ರಾಮ್ ಚರಣ್ ಹಾಗೂ ಸಂಗಡಿಗರು ಐತಿಹಾಸಿಕ, ಶಕ್ತಿಯುತ ದೇವಾಲಯವುಳ್ಳ ಹಳ್ಳಿಯಲ್ಲಿ ವಾಸವಿರುವ ಸಾಮಾನ್ಯ ಜನರಾಗಿದ್ದು, ದೇವಾಲಯದ ಆಸ್ತಿ ಮೇಲೆ ಕಣ್ಣು ಬೀಳುವ ವಿಲನ್ಗಳು ಹಳ್ಳಿಗರ ಮೇಲೆ ದೌರ್ಜನ್ಯ ಮಾಡುತ್ತಾರೆ. ಆಗ ಆ ಹಳ್ಳಿಗರನ್ನು ತಡೆಯಲು ನಟ ಚಿರಂಜಿವಿ ಆಗಮನವಾಗುತ್ತದೆ. ದುಷ್ಟರ ವಿರುದ್ಧ ಹೋರಾಡುವ ರಾಮ್ ಚರಣ್ ಬಲಿಯಾದ ಬಳಿಕ ರಾಮ್ ಚರಣ್ ಸ್ಥಾನ ತುಂಬಲು ಚಿರಂಜೀವಿ ಬರುತ್ತಾರೆಯೇ ಎಂಬ ಅನುಮಾನವೂ ಟ್ರೇಲರ್ ನೋಡಿದರೆ ಬರುತ್ತಿದೆ.
ರಾಮ್ ಚರಣ್ ಸಿದ್ದ ಪಾತ್ರದಲ್ಲಿ ನಟಿಸಿದ್ದು, ಚಿರಂಜೀವಿ ಹಾಗೂ ರಾಮ್ ಚರಣ್ ನಕ್ಸಲೈಟ್ ಗುಂಪಿಗೆ ಸೇರಿದವರಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಟ್ಟಿಗೆ ಫೈಟ್ ಮಾಡುತ್ತಿರುವ ದೃಶ್ಯಗಳು, ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸಿನಿಮಾದಲ್ಲಿ ಇರಲಿದ್ದು, ಅವುಗಳ ಸಣ್ಣ ಝಲಕ್ ಟ್ರೇಲರ್ನಲ್ಲಿ ಸಹ ಇದೆ. ಒಟ್ಟಾರೆ ಈ ಸಿನಿಮಾ ಮೆಗಾಸ್ಟಾರ್ ಕುಟುಂಬದ ಅಭಿಮಾನಿಗಳಿಗೆ ಹಬ್ಬವಾಗಿರುವುದಂತೂ ಪಕ್ಕಾ.
ಟ್ರೇಲರ್ನಲ್ಲಿ ರಾಮ್ ಚರಣ್, ಪೂಜಾ ಹೆಗ್ಡೆ, ಚಿರಂಜೀವಿ, ವಿಲನ್ ಪಾತ್ರದಲ್ಲಿ ನಟಿಸಿರುವ ಸೋನು ಸೂದ್ ಎಲ್ಲರೂ ಇದ್ದಾರೆ. ಆದರೆ ಸಿನಿಮಾದ ನಾಯಕಿ ಕಾಜಲ್ ಅಗರ್ವಾಲ್ ಎಲ್ಲೂ ಕಾಣುವುದಿಲ್ಲ.
ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಸ್ವತಃ ರಾಮ್ ಚರಣ್ ತೇಜ. 'ಆಚಾರ್ಯ' ಸಿನಿಮಾವು ಏಪ್ರಿಲ್ 29 ರಂದು ತೆರೆಗೆ ಬರಲಿದೆ.