Don't Miss!
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀವ ಉಳಿಸುವ ಮಹತ್ ಕಾರ್ಯಕ್ಕೆ ಮುಂದಾದ ಚಿರಂಜೀವಿ-ರಾಮ್ ಚರಣ್
ಮೆಗಾಸ್ಟಾರ್ ಚಿರಂಜೀವಿ ಬಹು ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ಲಡ್ ಬ್ಯಾಂಕ್, ಕಣ್ಣು ಬ್ಯಾಂಕ್, ಕಷ್ಟದಲ್ಲಿರುವ ನಟ-ನಟಿಯರಿಗೆ ಆರ್ಥಿಕ ಸಹಾಯ ಹೀಗೆ ಹಲವಾರು ಕಾರ್ಯಗಳನ್ನು ದಶಕಗಳಿಂದಲೂ ಮಾಡಿಕೊಂಡು ಬಂದಿದ್ದಾರೆ ಚಿರಂಜೀವಿ.
ಕೊರೊನಾ ಸಮಯದಲ್ಲಿಯೂ ಚಿರಂಜೀವಿ ವೈಯಕ್ತಿಕವಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆದರೆ ಈಗ ದೊಡ್ಡ ಸಂಖ್ಯೆಯ ಜನರಿಗೆ ಸಹಾಯವಾಗುವಂತೆ ಮಹತ್ ಕಾರ್ಯಕ್ಕೆ ಕೈಹಾಕಿದ್ದಾರೆ. ಚಿರಂಜೀವಿ ಮಾಡುತ್ತಿರುವ ಕೋವಿಡ್ ರೋಗಿಗಳ ಜೀವ ಉಳಿಸುವ ಕಾರ್ಯಕ್ಕೆ ಚಿರಂಜೀವಿ ಪುತ್ರ, ನಟ ರಾಮ್ ಚರಣ್ ತೇಜ ಸಹ ಕೈಜೋಡಿಸಿದ್ದಾರೆ.
ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಿಗೆ ಆಮ್ಲಜನಕ ಸಿಲಿಂಡರ್ಗಳನ್ನು ಉಚಿತವಾಗಿ ಸರಬರಾಜು ಮಾಡುವ ಕಾರ್ಯವನ್ನು ನಟ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ ಜಂಟಿಯಾಗಿ ಮಾಡುತ್ತಿದ್ದಾರೆ. ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಮ್ಲಜನಕ ಬ್ಯಾಂಕ್ ಸ್ಥಾಪಿಸಿದ್ದು ಈ ಆಮ್ಲಜನಕ ಬ್ಯಾಂಕ್ಗಳು ಇಂದಿನಿಂದ (ಮೇ 26) ಕಾರ್ಯಾರಂಭ ಮಾಡಿವೆ.
ನೂರಾರು ಆಕ್ಸಿಜನ್ ಸಿಲಿಂಡರ್ ಹಾಗೂ ಸಾಂದ್ರಕ
ನೂರಾರು ಆಮ್ಲಜನಕ ಸಿಲಿಂಡರ್ಗಳು ಹಾಗೂ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಖರೀದಿಸಿರುವ ಚಿರಂಜೀವಿ ಮತ್ತು ರಾಮ್ ಚರಣ್ ಮೊದಲ ಬ್ಯಾಚ್ ಅನ್ನು ಅನಂತಪುರ ಜಿಲ್ಲೆ ಹಾಗೂ ಗುಂಟೂರಿಗೆ ಕಳುಹಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಚಿರಂಜೀವಿ.
ಅನಂತಪುರ, ಗುಂಟೂರಿಗೆ ಆಮ್ಲಕನಕ ಸಿಲಿಂಡರ್
'ಇಂದು ಅನಂತಪುರಂ ಹಾಗೂ ಗುಂಟೂರು ಜಿಲ್ಲೆಗೆ ಆಮ್ಲಜನಕ ಸಿಲಿಂಡರ್ಗಳನ್ನು ಕಳಿಸಿದ್ದೇವೆ. ಇನ್ನು ಮುಂದೆ ಇತರ ಜಿಲ್ಲೆಗಳಿಗೆ ಸಿಲಿಂಡರ್ಗಳನ್ನು, ಆಮ್ಲಜನಕ ಸಾಂದ್ರಕಗಳನ್ನು ಕಳಿಸಲಾಗುತ್ತದೆ. ಈ ಕಾರ್ಯವನ್ನು ನಾವು ಸಮರೋಪಾಧಿಯಲ್ಲಿ ಮಾಡುತ್ತಿದ್ದೇವೆ' ಎಂದಿದ್ದಾರೆ.
ರಾಮ್ ಚರಣ್ ತೇಜ್ ಸಹ ಕೈ ಜೋಡಿಸಿದ್ದಾರೆ
'ಈ ಮಹತ್ವದ ಕಾರ್ಯದಲ್ಲಿ ರಾಮ್ ಚರಣ್ ತೇಜ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಮ್ಲಜನಕ ಸಿಲಿಂಡರ್ ಹಾಗೂ ಸಾಂದ್ರಕಗಳು ಬೇಗ ನಮಗೆ ಲಭ್ಯವಾಗುವ ಹಿಂದೆ ರಾಮ್ ಚರಣ್ ಶ್ರಮ ಇದೆ. ನಾಳೆ (ಮೇ27) ಖಮ್ಮಂ, ಕರೀಂನಗರ ಸೇರಿ ಐದು ಜಿಲ್ಲೆಗಳಿಗೆ ಚಿರಂಜೀವಿ ಆಕ್ಸಿಜನ್ ಬ್ಯಾಂಕ್ನ ಆಕ್ಸಿಜನ್ ಸಿಲಿಂಡರ್ಗಳು ಸೇರುತ್ತವೆ' ಎಂದಿದ್ದಾರೆ ಚಿರಂಜೀವಿ.
Recommended Video
ಹಲವು ಸೇವಾ ಕಾರ್ಯ ಮಾಡಿರುವ ಚಿರಂಜೀವಿ
ಚಿರಂಜೀವಿ, ತೆಲುಗು ಸಿನಿಮಾ ಕಾರ್ಮಿಕರಿಗೆ ಸರ್ಕಾರದಿಂದ ಸಹಾಯ ಕೋಡಿಸಲು ಶ್ರಮಿಸಿದ್ದರು. ಅದು ಮಾತ್ರವೇ ಅಲ್ಲದೆ ಜನರಿಗೆ ಹಾಗೂ ಸಿನಿಮಾ ಕಾರ್ಮಿಕರಿಗೆ ಉಚಿತ ಆಹಾರ ವಿತರಣೆ, ದಿನಸಿ ವಿತರಣೆ. ಲಾಕ್ಡೌನ್ನಿಂದ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಧನ ಸಹಾಯ ಇನ್ನೂ ಹಲವು ಸೇವಾ ಕಾರ್ಯವನ್ನು ಲಾಕ್ಡೌನ್ ಅವಧಿಯಲ್ಲಿ ಚಿರಂಜೀವಿ ಮಾಡಿದ್ದಾರೆ.