Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಮೌಳಿ ವಿರುದ್ಧ ಜೂ.ಎನ್ಟಿಆರ್, ರಾಮ್ ಚರಣ್, ಕೀರವಾಣಿ ದೂರು
ನಿರ್ದೇಶಕ ರಾಜಮೌಳಿ ದೇಶದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಅವರ ಸಿನಿಮಾಗಳು ಪಕ್ಕಾ ಸೂಪರ್ ಹಿಟ್. ಜೊತೆಗೆ ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಹಾ ಸಿನಿಮಾಗಳನ್ನು ನೀಡುತ್ತಾರೆ ರಾಜಮೌಳಿ.
ರಾಜಮೌಳಿ ಸಿನಿಮಾಗಳ ದೃಶ್ಯ ಸಂಯೋಜನೆ, ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೇ ಕರೆದುಕೊಂಡು ಹೋಗುತ್ತದೆ. ಬಾಹುಬಲಿ ಅಂಥಹಾ ಸಿನಿಮಾ ಮೂಲಕ ದಕ್ಷಿಣ ಭಾರತ ಸಿನಿಮಾದ ಸ್ಥಾಯಿಯನ್ನು ವಿದೇಶಗಳಿಗೂ ವಿಸ್ತರಿಸಿದ ಶ್ರೇಯ ರಾಜಮೌಳಿಗೆ ಸಲ್ಲಬೇಕು.
ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?
ವರ್ಷಾನುಗಟ್ಟಲೆ ಒಂದೇ ಸಿನಿಮಾ ತೆಗೆಯುವ ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ಕೆಲಸ ಮಾಡುವ ಕಲಾವಿದರಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಆ ಬಗ್ಗೆ ಜೂ ಎನ್ಟಿಆರ್, ರಾಮ್ಚರಣ್ ಸೇರಿದಂತೆ ಹಲವು ನಟರು ಹೇಳಿದ್ದಾರೆ. ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
12:45 ಕ್ಕೆ ದೃಶ್ಯ ಸ್ಟಾರ್ಟ್ ಮಾಡ್ತಾನೆ: ಜೂ ಎನ್ಟಿಆರ್
ಮೊದಲಿಗೆ ಮಾತನಾಡುವ ಜೂ.ಎನ್ಟಿಆರ್, 12:45 ರ ವೇಳೆಗೆ ಒಂದು ಸೀನ್ ತೆಗೆಯಲು ಪ್ರಾರಂಭ ಮಾಡುತ್ತಾನೆ (ರಾಜಮೌಳಿ), ಅಲ್ಲಿಂದ ನಮಗೆ ಹಿಂಸೆ ಪ್ರಾರಂಭವಾಗುತ್ತದೆ. ಆ ದೃಶ್ಯ ಮತ್ತೆ ಯಾವಾಗ ಮುಗಿಯುತ್ತದೆಯೋ ನಮಗೇ ಗೊತ್ತಿಲ್ಲ ಎನ್ನುತ್ತಾರೆ ರಾಜಮೌಳಿ.
RRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪ
'ಒಂದು ಹಾಡು ಮಾಡಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ'
ರಾಜಮೌಳಿ ಸಿನಿಮಾಗಳ ಖಾಯಂ ಸಂಗೀತ ನಿರ್ದೇಶಕ ಕೀರವಾಣಿ ಮಾತನಾಡಿ, ಜನವರಿಯಲ್ಲಿ ಹಾಡಿನ ಪಲ್ಲವಿ ಮಾಡುತ್ತೇವೆ, ಆರು ತಿಂಗಳ ನಂತರ ಜೂನ್ ಅಥವಾ ಜುಲೈನಲ್ಲಿ ಚರಣ ಮಾಡುತ್ತೇವೆ, ಡಿಸೆಂಬರ್ನಲ್ಲಿ ಹಾಡಿಗೆ ಲಿರಿಕ್ಸ್ ಬರೆಸುತ್ತಾನೆ, ಮುಂದಿನ ವರ್ಷ ಮಾರ್ಚ್ನಲ್ಲಿ ಹಾಡು ರೆಕಾರ್ಡ್ ಮಾಡುತ್ತಾನೆ, ನಂತರ ನವೆಂಬರ್ನಲ್ಲಿ ವಾಯ್ಸ್ ಮಿಕ್ಸ್ ಮಾಡಿಸುತ್ತಾನೆ, ಈ ನಡುವೆ ಯಾವ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನೇ ಮರೆತುಬಿಟ್ಟಿರುತ್ತೇವೆ, ವಿಚಿತ್ರ ಮನುಷ್ಯ ಆತ' ಎಂದು ರಾಜಮೌಳಿ ಬಗ್ಗೆ ಹೇಳಿದ್ದಾರೆ ಕೀರವಾಣಿ.
ನಮ್ಮನ್ನೇ ರಿಸ್ಕ್ಗೆ ತಳ್ಳಿಬಿಡುತ್ತಾರೆ: ರಾಮ್ ಚರಣ್
ನಟ ರಾಮ್ ಚರಣ್ ಮಾತನಾಡಿ, 'ರಾಜಮೌಳಿ ಒಂದು ದೃಶ್ಯ ವಿವರಿಸುತ್ತಾರೆ, 40 ಮೀಟರ್ ಮೇಲಿನಿಂದ ಬೀಳಬೇಕಿರುತ್ತದೆ. ಆಗ ನಾನು ಕೇಳ್ತೀನಿ, ದೃಶ್ಯ ಸೂಪರ್ ಆಗಿದೆ, ಸ್ವಲ್ಪ ರಿಸ್ಕ್ ಸಹ ಇದನ್ನು ಯಾರು ಮಾಡ್ತಾರೆ? ಎಂದರೆ, ನೀನೇ ಕಣೋ ಮಾಡೋದು ಎಂದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ರಾಜಮೌಳಿ ಎಂದಿದ್ದಾರೆ ರಾಮ್ ಚರಣ್.
'RRR' ಸಿನಿಮಾದ ಚಿತ್ರೀಕರಣ ಬಿಟ್ಟು ಕರ್ನಾಟಕಕ್ಕೆ ಬಂದ ನಿರ್ದೇಶಕ ರಾಜಮೌಳಿ
Recommended Video
ರಾಜಮೌಳಿಯ ಸಹಾಯಕ ನಿರ್ದೇಶಕ ಹೇಳುವುದೇನು?
ರಾಜಮೌಳಿಯ ಸಹಾಯಕ ನಿರ್ದೇಶಕ ಕಿರಣ್ ಮಾತನಾಡಿ, ಲೊಕೇಶನ್ನ ವಿಡಿಯೋವನ್ನು ಮಾಡಿ ನಾವು ಅವರಿಗೆ ಕಳಿಸುತ್ತೇವೆ, 'ನೀವು ಶೇಕಿಂಗ್ ಇಲ್ಲದೆ ಒಂದು ವಿಡಿಯೋ ಸಹ ತೆಗೆಯುವುದಿಲ್ಲ ಅಲ್ಲವೆ' ಎಂದು ಬೈಯುತ್ತಾರೆ. ಲೋಕೇಶನ್ ಎಲ್ಲಾ ನೋಡಿದ ನಂತರ, ಇದ್ಯಾಕೋ ಸರಿಯಿಲ್ಲ, ಸೆಟ್ನಲ್ಲಿ ಗ್ರೀನ್ ಮ್ಯಾಟ್ನಲ್ಲಿ ಚಿತ್ರೀಕರಣ ಮಾಡಿಬಿಡೋಣ ಎನ್ನುತ್ತಾರೆ, ಅವರಿಗೆ ಯಾವಾಗ ಏನು ಹೊಳೆಯುತ್ತದೆಯೋ ಗೊತ್ತಾಗುವುದಿಲ್ಲ ಎಂದಿದ್ದಾರೆ ಕಿರಣ್.