ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೇಳಿದ ನಿರ್ದೇಶಕ ನಾಗ್ ಅಶ್ವಿನ್
ಪ್ರಭಾಸ್ ಸಿನಿಮಾಕ್ಕಾಗಿ ಅಭಿಮಾನಿಗಳು ತುದಿ ಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಜುಲೈ 30 ರಂದು ರಾಧೆ-ಶ್ಯಾಂ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೂರು ವರ್ಷಗಳ ನಂತರ ಪ್ರಭಾಸ್ ಅಭಿನಯದ ಸಿನಿಮಾ ಒಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.
ಈ ನಡುವೆ ಪ್ರಭಾಸ್ ಎರಡು ಭಾರಿ ಬಜೆಟ್ ನ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್', ಬಾಲಿವುಡ್ನ ಓಂ ರಾವತ್ ನಿರ್ದೇಶಿಸುತ್ತಿರುವ 'ಆದಿಪುರುಷ್'.
ಈ ನಡುವೆ ಹೆಸರಿಡದ ಮತ್ತೊಂದು ಸಿನಿಮಾಕ್ಕೆ ಪ್ರಭಾಸ್ ಎಸ್ ಅಂದಿದ್ದು, ಆ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ಆದರೆ ನಾಗ್ ಅಶ್ವಿನ್ ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಪ್ರಭಾಸ್ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.

ಫೆಬ್ರವರಿ 26 ಕ್ಕೆ ಅಪ್ಡೇಟ್ ನೀಡುವುದಾಗಿ ಹೇಳಿದ್ದರು
ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ. ಈ ಸಿನಿಮಾದ ಬಗ್ಗೆ ಫೆಬ್ರವರಿ 26 ಕ್ಕೆ ಅಪ್ಡೇಟ್ ನೀಡುವುದಾಗಿ ನಾಗ್ ಅಶ್ವಿನ್ ಹೇಳಿದ್ದರು. ಅದಕ್ಕಾಗಿ ಪ್ರಭಾಸ್ ಅಭಿಮಾನಿಗಳು ಕಾತರರಾಗಿದ್ದರು.

ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ: ನಾಗ್ ಅಶ್ವಿನ್
ಆದರೆ ನಾಗ್ ಅಶ್ವಿನ್ ಅನ್ನು ಈ ಬಗ್ಗೆ ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಪ್ರಶ್ನಿಸಿದಾಗ, ಸಿನಿಮಾ ಬಗ್ಗೆ ಫೆಬ್ರವರಿ 26ಕ್ಕೆ ಯಾವುದೇ ಅಪ್ಡೇಟ್ ನೀಡಲಾಗುತ್ತಿಲ್ಲ ಎಂದಿದ್ದಾರೆ. 'ಫೆಬ್ರವರಿ 26 ಕ್ಕೆ ಯಾವುದೇ ಅಪ್ಡೇಟ್ ನೀಡುವುದಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ, ಅಪ್ಡೇಟ್ ನೀಡಲು ಇದು ಸೂಕ್ತ ಸಮಯವಲ್ಲ' ಎಂದು ನಾಗ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಮಾಯಾವಿಲೋಕದ ಕತೆಯುಳ್ಳ ಸಿನಿಮಾ
ನಾಗ್ ಅಶ್ವಿನ್, ಪ್ರಭಾಸ್ಗಾಗಿ ನಿರ್ದೇಶಿಸುತ್ತಿರುವ ಸಿನಿಮಾ ಮಾಯಾಲೋಕದ ಕತೆಯುಳ್ಳ ಸಿನಿಮಾ ಆಗಿರಲಿದೆಯಂತೆ. ಸಿನಿಮಾದಲ್ಲಿ ಪ್ರಭಾಸ್ ಸಮುದ್ರ ರಾಜನ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದ ಕತೆಯನ್ನು ಖ್ಯಾತ ನಿರ್ದೇಶಕ ಸಿಂಗಿಂತಂ ಶ್ರೀನಿವಾಸ್ ಜೊತೆ ಸೇರಿ ಬರೆದಿದ್ದಾರೆ ನಾಗ್ ಅಶ್ವಿನ್.
Recommended Video

'ಸಲಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ
ಇನ್ನು ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ಇನ್ನು 'ಆದಿಪುರುಷ್' ಸಿನಿಮಾ ರಾಮಾಯಣದ ಕತೆ ಹೊಂದಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಭಾರತದ ಈವರೆಗೆ ಅತಿ ಹೆಚ್ಚು ಬಜೆಟ್ ನ ಸಿನಿಮಾ ಇದಾಗಿರಲಿದೆ.


Click it and Unblock the Notifications











