Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗಾರ್ಜುನರ ನಿರೀಕ್ಷೆಯ ಚಿತ್ರ ಸೋಲಲು ಕಾರಣ ಅ ಒಂದು ದೃಶ್ಯ?
ಅಕ್ಕಿನೇನಿ ನಾಗಾರ್ಜುನ ವೃತ್ತಿ ಜೀವನದಲ್ಲಿ 'ಮನ್ಮಥಡು' ಸಿನಿಮಾ ಬಹಳ ದೊಡ್ಡ ಸಕ್ಸಸ್ ಕೊಟ್ಟಿತ್ತು. ಈ ಸಿನಿಮಾ ಬಂದ ನಂತರ ನಾಗಾರ್ಜುನ ಹೆಸರಿನ ಹಿಂದೆ 'ಮನ್ಮಥಡು' ಎಂಬ ಟ್ಯಾಗ್ ಅಂಟಿಕೊಂಡಿತು. 60ರ ವಯಸ್ಸಿನಲ್ಲೂ ಚಿರಯುವಕನಂತೆ ಕಾಣಿಸಿಕೊಳ್ಳುವ ನಾಗಾರ್ಜುನಗೆ ಈ ಹೆಸರು ಹೇಳಿ ಮಾಡಿಸಿದಂತಿತ್ತು.
ಒಮ್ಮೆ ಸೂಪರ್ ಹಿಟ್ ಆದ ಚಿತ್ರದ ಶೀರ್ಷಿಕೆ ಬಳಸಿಕೊಂಡು ಇನ್ನೊಂದು ಚಿತ್ರ ಮಾಡಿದ ಗೆದ್ದ ಉದಾಹರಣೆ ಬಹಳ ಕಡಿಮೆ. ಈ ವಿಚಾರದಲ್ಲಿ ನಾಗಾರ್ಜುನ ಸಿನಿಮಾ ಸಹ ಇದೆ. ಮನ್ಮಥಡು 2 ಎಂದು ಹೆಸರಿಟ್ಟು ಸಿನಿಮಾವೊಂದು ಮಾಡಲಾಯಿತು. ರಿಲೀಸ್ಗೂ ಮೊದಲು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ, ಒಂದೇ ಒಂದು ದೃಶ್ಯದಿಂದ ಈ ಚಿತ್ರ ಸೋಲು ಕಂಡಿತು ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ. ಯಾವುದು ಆ ದೃಶ್ಯ? ಮುಂದೆ ಓದಿ....
ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ ತೆಲುಗು ನಟ ನಾಗಾರ್ಜುನ
ನಾಗಾರ್ಜುನಗೆ ಹಿಟ್ ಕೊಟ್ಟ ಚಿತ್ರ
ಕೆ ವಿಜಯ ಭಾಸ್ಕರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರ ಮನ್ಮಥಡು. 2002ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ನಾಗಾರ್ಜುನ ನಿರ್ಮಿಸಿ ನಾಯಕನಾಗಿ ನಟಿಸಿದ್ದರು. ಸೋನಾಲಿ ಬೇಂದ್ರೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ನಾಗಾರ್ಜುನ ವೃತ್ತಿ ಜೀವನದಲ್ಲಿ ಈ ಸಿನಿಮಾ ದೊಡ್ಡ ಯಶಸ್ಸು ತಂದು ಕೊಡ್ತು. 2019ರಲ್ಲಿ ಮತ್ತೊಮ್ಮೆ ಮನ್ಮಥಡು 2 ಎಂದು ಹೊಸ ಸಿನಿಮಾ ಬಂತು.
ಮನ್ಮಥಡು 2 ಸೋಲು
2019ರಲ್ಲಿ ಮನ್ಮಥಡು 2 ಸಿನಿಮಾ ಬಂತು. ಈ ಚಿತ್ರಕ್ಕೂ ನಾಗಾರ್ಜುನ ಬಂಡವಾಳ ಹಾಕಿದ್ದರು. ರಾಹುಲ್ ರವಿಚಂದ್ರನ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ನಟಿಸಿದರು. ಇವರ ಜೊತೆ ಕೀರ್ತಿ ಸುರೇಶ್, ಸಮಂತಾ, ಅಕ್ಷರಾ ಗೌಡ ಕಾಣಿಸಿಕೊಂಡಿದ್ದರು. ಈ ಚಿತ್ರ ನಿರೀಕ್ಷೆಯಂತೆ ಬಿಸಿನೆಸ್ ಮಾಡಿಲಿಲ್ಲ. ಮೆಚ್ಚುಗೆಯೂ ಗಳಿಸಿಲಿಲ್ಲ. ಈ ಚಿತ್ರದ ಸೋಲಿಗೆ ದೃಶ್ಯವೊಂದು ಕಾರಣ ಎಂದು ನಿರ್ದೇಶಕ ರಾಹುಲ್ ಈಗ ಹೇಳಿಕೊಂಡಿದ್ದಾರೆ.
ತೆಲುಗಿನ ಈ ಸ್ಟಾರ್ ನಟನಿಗೆ ಬಾಡಿಗಾರ್ಡ್ ಆಗಲು ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದಾರಂತೆ ರಶ್ಮಿಕಾ
ಆ ಒಂದು ದೃಶ್ಯದಿಂದ ಚಿತ್ರಕ್ಕೆ ಹಿನ್ನಡೆ ಆಯಿತು
ಮನ್ಮಥಡು ಎಂದ ತಕ್ಷಣ ಸಂಪೂರ್ಣವಾಗಿ ಕೌಟುಂಬಿಕ ಸಿನಿಮಾ ಎಂದು ಜನ ನಂಬಿದ್ದರು. ಆದರೆ, ಮೊದಲ ಇಪ್ಪತ್ತು ನಿಮಿಷದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚಿದ್ದವು. ಒಂದು ದೃಶ್ಯವೊಂದರಲ್ಲಿ ನಾಗಾರ್ಜುನ ಅಭಿನಯ ನೋಡಿದ ಅಭಿಮಾನಿಗಳು ಸ್ವಲ್ಪ ಮುಜುಗರ ಪಟ್ಟರು. ಇದು ವಿಮರ್ಶೆಯಲ್ಲೂ ಟೀಕೆಗೆ ಗುರಿಯಾಗಿತ್ತು. ಆ ದೃಶ್ಯ ಚಿತ್ರೀಕರಣ ಮಾಡಬೇಕಾದರೆ ಬಹಳ ನಗುತ್ತಿದ್ದೆವು, ಆದರೆ ಚಿತ್ರಮಂದಿರದಲ್ಲಿ ಜನರಿಗೆ ಇಷ್ಟ ಆಗಲ್ಲ ಎನ್ನುವುದು ಆಮೇಲೆ ಗೊತ್ತಾಯಿತು. ಆ ದೃಶ್ಯದಿಂದ ಸಿನಿಮಾಗೆ ಹಿನ್ನಡೆ ಆಯಿತು ಎಂದು ನಿರ್ದೇಶಕ ರಾಹುಲ್ ತಿಳಿಸಿದ್ದಾರೆ.
Recommended Video
ಮೂರು ಪ್ರಾಜೆಕ್ಟ್ನಲ್ಲಿ ನಾಗ್ ಬ್ಯುಸಿ
ಕೊರೊನಾ ಭೀತಿಯ ನಡುವೆಯೂ ನಾಗಾರ್ಜುನ ನಟಿಸಿದ್ದ 'ವೈಲ್ಡ್ ಡಾಗ್' ಸಿನಿಮಾ ಬಿಡುಗಡೆಯಾಗಿತ್ತು. ಹಿಂದಿಯ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಾಗಾರ್ಜುನ ನಟಿಸಿದ್ದಾರೆ. ಇದರ ಜೊತೆಗೆ ಎರಡು ಪ್ರಾಜೆಕ್ಟ್ನಲ್ಲಿ ನಾಗ್ ಅಭಿನಯಿಸಲಿದ್ದಾರೆ.