Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ ಬಳಿಕ ಸ್ಟಾರ್ ನಿರ್ದೇಶಕನ ಕಾರು ತಡೆದು ದಂಡ ಹಾಕಿದ ಪೊಲೀಸರು
ತೆಲುಗು ಚಿತ್ರರಂಗದ ಮೇಲೆ ಹೈದರಾಬಾದ್ ಪೊಲೀಸರ ಕಣ್ಣು ಬಿದ್ದಂತಿದೆ. ನಿನ್ನೆಯಷ್ಟೆ ತೆಲುಗು ಚಿತ್ರರಂಗದ ಸ್ಟಾರ್ಗಳ ಮೆಚ್ಚಿನ ಐಶಾರಾಮಿ ಪಬ್ ಮೇಲೆ ದಾಳಿ ಮಾಡಿದ್ದರು. ಈಗ ತೆಲುಗು ಚಿತ್ರರಂಗದ ಗಣ್ಯರ ಕಾರುಗಳನ್ನು ಹುಡುಕಿ-ಹುಡುಕಿ ದಂಡ ವಿಧಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನಟ ಅಲ್ಲು ಅರ್ಜುನ್ ಕಾರು ತಡೆದಿದ್ದ ಹೈದರಾಬಾದ್ ಪೊಲೀಸರು ಕಾರಿನ ಕಿಟಕಿ ಗಾಜಿಗೆ ಅಳವಡಿಸಲಾಗಿದ್ದ ಟಿಂಟ್ ಅನ್ನು ತೆಗೆಸಿದ್ದರು. ಮಾತ್ರವಲ್ಲದೆ ದಂಡ ಸಹ ವಿಧಿಸಿದ್ದರು. ಅಲ್ಲು ಅರ್ಜುನ್ ಬಳಿಕ ಜೂ ಎನ್ಟಿಆರ್ ಹಾಗೂ ಮಂಚು ಮನೋಜ್ ಕಾರಿಗೂ ದಂಡ ವಿಧಿಸಲಾಯ್ತು. ಈಗ ಸ್ಟಾರ್ ನಿರ್ದೇಶಕರೊಬ್ಬರ ಸರದಿ.
ಒಲಾ ಕ್ಯಾಬ್ಸ್ ವಿರುದ್ಧ ಅಸಮಾಧಾನ ಹೊರಹಾಕಿದ ನಟಿ ಶ್ರದ್ಧಾ
ನಿರ್ದೇಶಕ ತ್ರಿವಿಕ್ರಮ್ ಕಾರನ್ನು ನಡು ರಸ್ತೆಯಲ್ಲಿ ತಡೆದ ಪೊಲೀಸರು ಕಾರಿನ ಕಿಟಕಿಗೆ ಅಳವಡಿಸಲಾಗಿದ್ದ ಟಿಂಟ್ ತೆಗೆದುಹಾಕಿರುವ ಪೊಲೀಸರು ದಂಡ ಸಹ ವಿಧಿಸಿದ್ದಾರೆ. ತ್ರಿವಿಕ್ರಮ್ರ ಐಶಾರಾಮಿ ಕಾರನ್ನು ಪೊಲೀಸರು ತಪಾಸಣೆ ನಡೆಸುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿಸ ವೈರಲ್ ಆಗಿದೆ.
ನಿರ್ದೇಶಕ ತ್ರಿವಿಕ್ರಮ್ ಟಾಲಿವುಡ್ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ರಾಜಮೌಳಿ, ಪುರಿ ಜಗನ್ನಾಥ್ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಸತತ ಸೂಪರ್ ಹಿಟ್ ನೀಡಿರುವ ನಿರ್ದೇಶಕ ತ್ರಿವಿಕ್ರಮ್.
Tollywood: ಟಾಲಿವುಡ್ ಸ್ಟಾರ್ ನಟರ ಕಾರು ನಿಲ್ಲಿಸಿ ದಂಡ ಹಾಕಿದ ಸಂಚಾರಿ ಪೋಲಿಸರು: ಕಾರಣವೇನು?
ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದ ತ್ರಿವಿಕ್ರಮ್ ಇದೀಗ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಉಪೇಂದ್ರ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ನಾಯಕಿ ಪೂಜಾ ಹೆಗ್ಡೆ.