Don't Miss!
- News ಬೆಂಗಳೂರಿನಲ್ಲಿ 647 ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಕೆಐಎಡಿಬಿ ಯೋಜನೆ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ಗೆ ವಿಲನ್ ಆದ ಫಹಾದ್ ಫಾಸಿಲ್ಗೆ ಭಾರಿ ಮೊತ್ತದ ಸಂಭಾವನೆ
ದಕ್ಷಿಣ ಭಾರತದಲ್ಲಿ ತೆಲುಗು ಚಿತ್ರರಂಗ ಅತ್ಯಂತ ಶ್ರೀಮಂತ ಸಿನಿಮಾ ಉದ್ಯಮ ಎಂದು ಹೇಳಲಾಗುತ್ತದೆ. ತಮಿಳಿಗಿಂತಲೂ ಹೆಚ್ಚು ಸಿನಿಮಾಗಳು ತೆಲುಗಿನಲ್ಲಿ ನಿರ್ಮಾಣವಾಗುವ ಜೊತೆಗೆ ಹಿಟ್ ಸಹ ಆಗುತ್ತವೆ.
ತೆಲುಗಿನಲ್ಲಿ ನಟ-ನಟಿಯರಿಗೆ ಸಂಭಾವನೆ ಸಹ ಹೆಚ್ಚು. ದಕ್ಷಿಣ ಭಾರತದ ಇತರ ಸಿನಿಮಾ ರಂಗದ ನಟ-ನಟಿಯರು ತೆಲುಗು ಚಿತ್ರರಂಗದಿಂದ ಬುಲಾವ್ ಬಂದ ಕೂಡಲೇ ಓಡಿ ಹೋಗುವುದು ಇದೇ ಕಾರಣಕ್ಕೆ. ದಕ್ಷಿಣದ ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ತೆಲುಗಿನಲ್ಲಿ ಹೆಚ್ಚು ಸಂಭಾವನೆ ಕೊಡಲಾಗುತ್ತದೆ.
ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲು ಸ್ಟಾರ್ ನಟನನ್ನು ಕರೆತಂದ ಸುಕುಮಾರ್
ಇದೀಗ ಮಲಯಾಳಂ ಸಿನಿಮಾರಂಗದ ಪ್ರತಿಭಾವಂತ ನಟ ಫಹಾದ್ ಫಾಸಿಲ್, ತೆಲುಗಿನ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಖಳನ ಪಾತ್ರ ನಿರ್ವಹಿಸಲು ಫಹಾದ್ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.
ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿರುವ ಫಹಾದ್ ಫಾಸಿಲ್
ಫಹಾದ್ ಫಾಸಿಲ್ ಅವರು 'ಪುಷ್ಪ' ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಫಹಾದ್ ಫಾಸಿಲ್ ಪ್ರತಿಭೆಗೆ ಈ ಮೊತ್ತ ಕಡಿಮೆಯೇ ಆದರೂ ಫಹಾದ್ ಫಾಸಿಲ್ಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿನಿಮಾ ವೃತ್ತಿ ಜೀವನದಲ್ಲಿ ಇದೇ ಮೊದಲು. ಮಲಯಾಳಂನ ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಫಹಾದ್ಗೆ ಇಷ್ಟೊಂದು ಸಂಭಾವನೆ ಸಿಗುತ್ತಿರಲಿಲ್ಲ.
ಮೈತ್ರಿ ಮೂವೀಸ್ನಿಂದ ಸಿನಿಮಾ ನಿರ್ಮಾಣ
ಅಲ್ಲು ಅರ್ಜನ್ ನಟನೆಯ 'ಪುಷ್ಪಾ' ಸಿನಿಮಾವನ್ನು ಪ್ರತಿಷ್ಠಿತ ಮೈತ್ರಿ ಮೂವೀಸ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಯಾವುದೇ ರೀತಿಯ ಕೊರತೆ ಆಗದಂತೆ ಬಂಡವಾಳ ಸುರಿಯುತ್ತಿದ್ದಾರೆ. ಹಲವು ಪ್ರತಿಭಾವಂತ ಸ್ಟಾರ್ ನಟ-ನಟಿಯರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಲಾಗಿದೆ.
ಅಲ್ಲು ಅರ್ಜುನ್ ಕಿಂತ ದುಬಾರಿ ಬೆಲೆಯ ಕ್ಯಾರವಾನ್ ಖರೀದಿಸಿದ ನಟ ಮಹೇಶ್ ಬಾಬು
ರಕ್ತ ಚಂದನ ಕಳ್ಳಸಾಗಣೆದಾರನ ಕತೆ ಹೊಂದಿರುವ ಸಿನಿಮಾ
'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆದಾರನ ಕತೆಯನ್ನು ಹೊಂದಿದೆ. ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಕೆರಳಿಸಿದೆ. ಸಿನಿಮಾದ ಚಿತ್ರೀಕರಣವು ಆಂಧ್ರ-ತೆಲಂಗಾಣದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ.
Recommended Video
ಆಗಸ್ಟ್ 13 ಕ್ಕೆ ಸಿನಿಮಾ ಬಿಡುಗಡೆ
ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. 'ಆರ್ಯಾ', 'ಆರ್ಯಾ2' ಬಳಿಕ ಅಲ್ಲು ಅರ್ಜುನ್ ಜೊತೆಗೆ ಇದು ಸುಕುಮಾರ್ ಅವರ ಮೂರನೇ ಸಿನಿಮಾ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಸಹ ಸಿನಿಮಾದಲ್ಲಿದ್ದಾರೆ ಎನ್ನಲಾಗಿದೆ. ಸಿನಿಮಾವು ಆಗಸ್ಟ್ 13 ರಂದು ಬಿಡುಗಡೆ ಆಗಲಿದೆ.