Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ, RSS ಸದಸ್ಯ, ಲೇಖಕ, ಪತ್ರಕರ್ತ ರಾವಿ ಕೊಂಡಲ ರಾವು ನಿಧನ: ಗಣ್ಯರ ಸಂತಾಪ
ತೆಲುಗು ಚಿತ್ರರಂಗದ ಖ್ಯಾತ ನಟ ರಾವಿ ಕೊಂಡಲ ರಾವು ಅವರು ಇಂದು ನಿಧನವಾಗಿದ್ದಾರೆ. ಹೃಧಯಾಘಾತದಿಂದ ಕೊನೆ ಉಸಿರೆಳೆದ ಅವರಿಗೆ 88 ವರ್ಷ ವಯಸ್ಸಾಗಿತ್ತು.
Recommended Video
ಕಳೆದ ಕೆಲ ದಿನಗಳಿಂದಲೂ ಅವರು ಹೈದರಾಬಾದ್ನ ಸೋಮಾಜಿಗುಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ಸಂಜೆ ವೇಳೆಗೆ ಅವರು ಕೊನೆಯುಸಿರೆಳೆದರು. ಅವರಿಗೆ ಒಬ್ಬ ಪುತ್ರನಿದ್ದಾನೆ. ಇವರ ಪತ್ನಿ ರಾಧಾ ಕುಮಾರಿ ಸಹ ಖ್ಯಾತ ನಟಿಯಾಗಿದ್ದರು, ಅವರು 2012 ರಲ್ಲಿಯೇ ಕಾಲವಾದರು.
ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಕೊಂಡಲ ರಾವು ಅವರು ಹಲವಾರು ಸಿನಿಮಾಗಳಿಗೆ ಕತೆಗಾರರಾಗಿ, ಸಂಭಾಷಣೆಕಾರರಾಗಿ, ಸಹ ನಿರ್ಮಾಪಕ, ಸಹ ನಿರ್ದೇಶಕರಾಗಿ ಸಹ ಕೆಲವ ಮಾಡಿದ್ದಾರೆ. ರಾವಿ ಕೊಂಡಲ ರಾವು ಅವರ ನಿಧನಕ್ಕೆ ತೆಲುಗು ಸಿನಿಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
'ವಿಜಯ ಚಿತ್ರಂ' ಸಂಪಾದಕರಾಗಿ ಸಹ ಕಾರ್ಯ
ಬರಹಗಾರರೂ ಆಗಿದ್ದ ಕೊಂಡಲ ರಾವು ಅವರು ತೆಲುಗಿನ ಖ್ಯಾತ ಸಿನಿಮಾ ಪತ್ರಿಕೆ ಆಗಿದ್ದ 'ವಿಜಯ ಚಿತ್ರಂ ' ನ ಪ್ರಧಾನ ಸಂಪಾದರಾಗಿ ಸಹ ಕೆಲಸ ನಿರ್ವಹಿಸಿದ್ದರು. ಬರಹಗಾರರಾಗಿಯೂ ಖ್ಯಾತರಾಗಿದ್ದ ರಾವು, ಕೆಲವು ಪುಸ್ತಕಗಳನ್ನು ಸಹ ಹೊರತಂದಿದ್ದರು. ಒಂದು ವಾರದ ಹಿಂದೆಯಷ್ಟೆ ಆನ್ಲೈನ್ ಪತ್ರಿಕೆಗಾಗಿ ಲೇಖನವೊಂದನ್ನು ಬರೆದಿದ್ದರು.
ಹಲವು ಖ್ಯಾತ ಸಿನಿಮಾಗಳಿಗೆ ಕತೆ, ಸಂಭಾಷಣೆ ಬರೆದಿದ್ದಾರೆ
ತೆಲುಗು ಸಿನಿಮಾಉದ್ಯಮದ ಮೈಲಿಗಲ್ಲು ಸಿನಿಮಾ ಎನಿಸಿಕೊಳ್ಳುವ 'ಪೆಳ್ಳಿ ಪುಸ್ತಕಂ' ಅವರೇ ಬರೆದ ಕತೆ. 'ಭೈರವ ದ್ವೀಪಂ, ಶ್ರೀ ಕೃಷ್ಣಾರ್ಜುನ ಯುದ್ಧಂ, ಬೃಂದಾವನ' ಸಿನಿಮಾಗಳಿಗೆ ಸಂಭಾಷಣೆ ಸಹ ಬರೆದಿದ್ದರು. ನಟರಾಗಿ 600 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ರಾವು.
ಮೂರು ತಿಂಗಳು ಜೈಲು ವಾಸ ಅನುಭವಿಸಿದ್ದರು
ರಾವು ಅವರು ಆರ್ಎಸ್ಎಸ್ ಸದಸ್ಯ ಸಹ ಆಗಿದ್ದರು. ಮಹಾತ್ಮಾ ಗಾಂಧಿ ಹತ್ಯೆ ನಂತರ ಆರ್ಎಸ್ಎಸ್ ಮೇಲೆ ಸರ್ಕಾರ ನಿಷೇಧ ಹೇರಿದಾಗ ಅದನ್ನು ಪ್ರತಿಭಟಿಸಿದ ಪರಿಣಾಮ ಮೂರು ತಿಂಗಳ ಕಾಲ ಅವರನ್ನು ರಾಜಮಂಡ್ರಿ ಜೈಲಿನಲ್ಲಿ ಇಡಲಾಗಿತ್ತು.
ತೆಲುಗು ಸಿನಿಗಣ್ಯರ ಸಂತಾಪ
ರಾವಿ ಕೊಂಡಲ ರಾವು ಅವರ ನಿಧನಕ್ಕೆ ತೆಲುಗು ಸಿನಿಗಣ್ಯರಾದ ಚಿರಂಜೀವಿ, ಪವನ್ ಕಲ್ಯಾಣ್, ನಾಗಾರ್ಜುನ, ಎನ್ಟಿಆರ್, ಬಾಲಕೃಷ್ಣ ಇನ್ನೂ ಹಲವರು ಸಂತಾಪ ಸೂಚಿಸಿದ್ದಾರೆ. ಆಂಧ್ರ ಸಿಎಂ ಜಗನ್ ಸಹ ತಮ್ಮ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.