Don't Miss!
- News Neha Hiremath: ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಗೆ ಕೊರೊನಾ ಸೋಂಕು ತಗುಲಿದ್ದು ಯಾರಿಂದ?
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ವಾರದ ಹಿಂದೆ ಇದ್ದ ಆತಂಕ ಇಂದು (ಆಗಸ್ಟ್ 24) ಕ್ಕೆ ತುಸು ಕಡಿಮೆಯಾಗಿದೆ. ಎಸ್ಪಿಬಿ ಅವರ ಹೊಸ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಎಸ್ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಾರ್ತೆ ಕೋಟ್ಯಂತರ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.
Recommended Video
ಆದರೆ ಇದೇ ಸಮಯದಲ್ಲಿ ಎಸ್.ಬಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ತಗುಲಲು ಕಾರಣ ಯಾರು? ಎಂಬ ಚರ್ಚೆ ಆರಂಭವಾಗಿದೆ. ದಿನವೊಂದಕ್ಕೆ 60,000 ಕ್ಕೂ ಹೆಚ್ಚು ಪ್ರಕರಣಗಳು ದೇಶದಾದ್ಯಂತ ವರದಿ ಆಗುತ್ತಿರುವ ಸಂದರ್ಭದಲ್ಲಿ ಯಾರಿಂದ ಯಾರಿಗೆ ಸೋಂಕು ತಗುಲಿದೆ ಎಂದು ನಿಖರವಾಗಿ ಹೇಳುವುದು ಅಸಾಧ್ಯ. ಆದರೂ ಎಸ್ಪಿಬಿಗೆ ಸೋಂಕು ತಗುಲಲು ಯಾರು ಕಾರಣ ಎಂಬ ಚರ್ಚೆ ನಡೆಯುತ್ತಿದೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಕುರಿತು ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದ ಪುತ್ರ ಚರಣ್
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ಆಗುವ ಮುನ್ನಾ ಅವರು ಹೈದರಾಬಾದ್ನಲ್ಲಿ ಒಂದು ಟಿವಿ ಶೋ ನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಲ್ಲಿಯೇ ಅವರಿಗೆ ಕೋವಿಡ್ ಸೋಂಕು ತಗುಲಿದೆ ಎನ್ನಲಾಗುತ್ತಿದೆ. ಆ ಶೋನಲ್ಲಿ ಭಾಗವಹಿಸಿದ್ದ ಇತರರಿಗೂ ಕೊರೊನಾ ಸೋಂಕು ತಗುಲಿದೆಯಂತೆ.
ಟಿವಿ ಶೋನಲ್ಲಿ ಎಸ್ಪಿಬಿ ಜೊತೆಗೆ ಭಾಗವಹಿಸಿದ್ದ ಮಾಳವಿಕಾ
ಅದೇ ಟಿವಿ ಶೋನಲ್ಲಿ ಭಾಗವಹಿಸಿದ್ದ ಹಿನ್ನೆಲೆ ಗಾಯಕಿ ಮಾಳವಿಕಾ ಅವರಿಂದಲೇ ಎಸ್.ಪಿ.ಬಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಮಾಳವಿಕಾ ಕೊರೊನಾ ಪಾಸಿಟಿವ್ ಇದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು ಹಾಗಾಗಿಯೇ ಎಸ್ಪಿಬಿಗೆ ಕೊರೊನಾ ಬಂತು ಎಂದು ಆರೋಪ ಮಾಡಲಾಗಿದೆ.
ಅಲ್ಲಗಳೆದಿರುವ ಗಾಯಕಿ ಮಾಳವಿಕಾ
ಆದರೆ ಇದನ್ನು ತೀವ್ರವಾಗಿ ಅಲ್ಲಗಳೆದಿರುವ ಗಾಯಕಿ ಮಾಳವಿಕಾ, 'ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಯಲ್ಲಿ ದಾಖಲಾದ ಮೇಲೆ ನನಗೆ ಕೊರೊನಾ ಪಾಸಿಟಿವ್ ಇರುವ ವಿಷಯ ಗೊತ್ತಾಯಿತು. ಅದಕ್ಕೆ ಮುನ್ನಾ ನನಗೆ ಕೊರೊನಾ ಇರಲಿಲ್ಲ' ಎಂದು ಮಾಳವಿಕಾ ಫೇಸ್ಬುಕ್ನಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.
ಜುಲೈ 30 ರಂದು ಚಿತ್ರೀಕರಣ ಪ್ರಾರಂಭವಾಯಿತು
ಜುಲೈ 30 ರಂದು ಎಸ್ಪಿಬಿ ಅವರೊಂದಿಗೆ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಯಿತು. ನಾನು ಎರಡನೇಯ ದಿನ ಅಂದರೆ ಜುಲೈ 31 ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಆಗ ನನಗೆ ಕೊರೊನಾ ಇರಲಿಲ್ಲ. ಆ ಚಿತ್ರೀಕರಣದಲ್ಲಿ ಗಾಯಕರಾದ ಹೇಮಚಂದ್ರ, ಅನುದೀಪ್, ಪ್ರಣವಿ, ಲಿಪ್ಸಿಕಾ, ಕಾರುಣ್ಯ, ದಾಮಿನಿ, ಸತ್ಯ ಯಾಮಿನಿ ಸಹ ಭಾಗವಹಿಸಿದ್ದರು ಎಂದಿದ್ದಾರೆ ಮಾಳವಿಕಾ.
'ನನ್ನೊಂದಿಗಿದ್ದ ಮೂವರಿಗೆ ಏಕೆ ಪಾಸಿಟಿವ್ ಬರಲಿಲ್ಲ?'
ಒಂದೊಮ್ಮೆ ನನ್ನಿಂದಲೇ ಎಸ್ಪಿಬಿ ಅವರಿಗೆ ಕೊರೊನಾ ಬಂದಿದ್ದಾದರೆ. ನಾನು ಅಂದು ಮೂವರು ಇತರ ಗಾಯಕಿಯರೊಂದಿಗೆ ಸಂಪರ್ಕದಲ್ಲಿದ್ದೆ. ಒಂದೇ ಕೋಣೆ, ಒಂದೇ ಮೇಕಪ್ ಟೇಬಲ್, ಮೈಕ್ ಅನ್ನು ಬಳಸಿದ್ದೆವು ಹಾಗಿದ್ದರೆ ಅವರಿಗೇಕೆ ಕೊರೊನಾ ಬರಲಿಲ್ಲ' ಎಂದು ಪ್ರಶ್ನೆ ಮಾಡಿದ್ದಾರೆ ಮಾಳವಿಕಾ.
ಆಗಸ್ಟ್ 8 ರಂದು ನನ್ನ ವರದಿ ಪಾಸಿಟಿವ್ ಬಂತು: ಮಾಳವಿಕಾ
ಎಸ್ಪಿಬಿ ಅವರು ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾದ ಮೇಲೆ ಆಗಸ್ಟ್ 8 ರಂದು ನಾನು ಪರೀಕ್ಷೆಗೆ ಒಳಗಾದೆ ನನಗೆ ಪಾಸಿಟಿವ್ ಬಂತು. ನಂತರ ನನ್ನ ಮನೆಯಲ್ಲಿರುವವರಿಗೆ ಪರೀಕ್ಷೆ ಮಾಡಲಾಗಿ, ನನ್ನ ತಾಯಿ, ತಂದೆ, ಮಗಳಿಗೆ ಕೊರೊನಾ ಇರುವುದು ಗೊತ್ತಾಯಿತು. ನನ್ನ ಪತಿಗೆ ನೆಗೆಟಿವ್ ವರದಿ ಬಂತು ಎಂದು ಮಾಹಿತಿ ನೀಡಿದ್ದಾರೆ ಮಾಳವಿಕಾ.
ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸರಿಗೆ ದೂರು
ನನ್ನ ತಂದೆಯವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ನಾನು ಮತ್ತು ನನ್ನ ಕುಟುಂಬ ಬಹಳ ಕಠಿಣ ಪರಿಸ್ಥಿತಿಯನ್ನು ಈಗ ಎದುರಿಸುತ್ತಿದ್ದೇವೆ. ಈ ಸಮಯದಲ್ಲಿ ಇಂಥಹಾ ಸುಳ್ಳು ಸಂದೇಶಗಳನ್ನು ಹರಿಬಿಟ್ಟು ಮತ್ತಷ್ಟು ಘಾಸಿಗೊಳಿಸುವ ಪ್ರಯತ್ನ ಬೇಡ. ಇದು ಮುಂದುವರೆದರೆ ಸುಳ್ಳು ಸುದ್ದಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದಾರೆ ಮಾಳವಿಕಾ.