Don't Miss!
- News ಕಾಂಗ್ರೆಸ್ ಸರ್ಕಾರ ನೀಡಿತ್ತು ಖಾಲಿ ಚೊಂಬು; ಮೋದಿ ಅದನ್ನು ಅಕ್ಷಯವನ್ನಾಗಿಸಿದ್ದಾರೆ: ಎಚ್ಡಿಡಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಟ್ ದಿ ಸೆಕೆಂಡ್ ಕೇಸ್ ಬಿಡುಗಡೆ ದಿನಾಂಕ ಘೋಷಣೆ; ಕೇಡಿಯಾದ 'ಮೇಜರ್'
ಕೊರೋನಾವೈರಸ್ ಹೊಡೆತಕ್ಕೆ ನಿರೀಕ್ಷಿಸಿದ ಥಿಯೆಟ್ರಿಕಲ್ ಯಶಸ್ಸು ಗಳಿಸದೇ ನಿರಾಸೆಗೊಳಗಾದ ಚಿತ್ರಗಳ ಪೈಕಿ ತೆಲುಗಿನ 'ಹಿಟ್ ದ ಫಸ್ಟ್ ಕೇಸ್' ಚಿತ್ರ ಕೂಡ ಒಂದು. 2020ರ ಫೆಬ್ರವರಿ 28ರಂದು ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಲು ಬೇಕಿದ್ದ ಎಲ್ಲಾ ಅಂಶವನ್ನು ಕೂಡ ಹೊಂದಿತ್ತು. ಆದರೆ ಕೊರೋನಾ ಭಯ ಜನ ಚಿತ್ರಮಂದಿರದತ್ತ ಮುಖ ಮಾಡುವುದನ್ನು ಕಡಿಮೆ ಮಾಡಿಸಿತು ಹಾಗೂ ನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬೀಗ ಕೂಡ ಬಿತ್ತು. ಹೀಗಾಗಿಯೇ ಹಿಟ್ ದ ಫಸ್ಟ್ ಕೇಸ್ ಸಿನಿಮಾ ಚಿತ್ರಮಂದಿರಕ್ಕಿಂತ ಓಟಿಟಿಯಲ್ಲಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
'ಈ ನಗರಾನಿಕಿ ಏಮೈಂದಿ' ರೀತಿಯ ಕಾಮಿಡಿ ಎಂಟರ್ ಟೈನರ್ ಚಿತ್ರದ ನಟನಾಗಿದ್ದ ವಿಶ್ವಕ್ ಸೇನ್ ಈ ಚಿತ್ರದಲ್ಲಿ ಪೊಲೀಸ್ ತನಿಖಾಧಿಕಾರಿಯಾಗಿ ಅಭಿನಯಿಸಿ ಹುಬ್ಬೇರುವಂತೆ ಮಾಡಿದ್ದರು. ಸೀಟ್ ಎಡ್ಜ್ ಕ್ರೈಂ ಥ್ರಿಲ್ಲರ್ ಆಗಿದ್ದ ಈ ಸಿನಿಮಾ ತೆಲುಗು ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿ ರಸಿಕರಿಗೆ ಸಖತ್ ಇಷ್ಟವಾಯ್ತು. ಅಲ್ಲದೆ ಇದೇ ವರ್ಷ ಈ ಚಿತ್ರ ಹಿಂದಿಗೂ ಅದೇ ಟೈಟಲ್ ಅಡಿಯಲ್ಲಿ ರಿಮೇಕ್ ಆಗಿತ್ತು, ಆದರೆ ತೆಲುಗಿನಲ್ಲಿ ಪಡೆದ ಯಶಸ್ಸನ್ನು ಹಿಂದಿಯಲ್ಲಿ ಪಡೆಯುವಲ್ಲಿ ವಿಫಲವಾಯಿತು.
ಇನ್ನು ಫಸ್ಟ್ ಕೇಸ್ ಮೂಲಕ ಗೆದ್ದಿದ್ದ ನಿರ್ದೇಶಕ ಶೈಲೇಶ್ ಕೋಲನು ಇದೀಗ ಸೆಕೆಂಡ್ ಕೇಸ್ ತೆಗೆದುಕೊಂಡು ಪ್ರೇಕ್ಷಕರ ಮುಂದೆ ಬರಲು ದಿನಾಂಕ ನಿಗದಿಯಾಗಿದೆ. ಹಿಟ್ ದಿ ಫಸ್ಟ್ ಕೇಸನ್ನು ಬಗೆಹರಿಸಿದ್ದ ವಿಶ್ವಕ್ ಸೇನ್ ಬದಲಾಗಿ ಈ ಸೀಕ್ವೆಲ್ ಚಿತ್ರದಲ್ಲಿ ಮೇಜರ್ ಖ್ಯಾತಿಯ ಅಡಿವಿ ಶೇಷ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಎರಡನೇ ಕೇಸನ್ನು ಇದೇ ವರ್ಷದ ಡಿಸೆಂಬರ್ 2ರಂದು ಕೈಗೆತ್ತಿಕೊಳ್ಳಲಿದ್ದಾರೆ.
ಹೌದು, ಹಿಟ್ ದಿ ಸೆಕೆಂಡ್ ಕೇಸ್ ಡಿಸೆಂಬರ್ 2ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಕಟಿಸಿದೆ. ಚಿತ್ರದಲ್ಲಿ ಅಡಿವಿ ಶೇಷ್ ಕೃಷ್ಣದೇವ್ ಅಲಿಯಾಸ್ ಕೆಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ರವಿತೇಜ ಖಿಲಾಡಿ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಮೀನಾಕ್ಷಿ ಚೌಧರಿ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಹಾಗೂ ಭಾನುಚಂದರ್, ರಾವ್ ರಮೇಶ್, ಪೊಸಾನಿ ಕೃಷ್ಣಮುರಳಿ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ.