Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
RRR ಹುಟ್ಟಿದ್ದು ಹೇಗೆ: ಕಥೆಗಾರ ಬಿಚ್ಚಿಟ್ಟ 'RRR' ಕತೆಯ ಕತೆ!
'RRR' ಸಿನಿಮಾ ಭರ್ಜರಿ ಹಿಟ್ ಆಗಿದೆ. ಕೇವಲ ಐದೇ ದಿನದಲ್ಲಿ ವಿಶ್ವದಾದ್ಯಂತ ಸುಮಾರು 600 ಕೋಟಿ ಹಣ ಗಳಿಸಿದೆ.
ಸಿನಿಮಾದ ಕತೆಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಉತ್ತಮ ಕತೆಗೆ ರಾಜಮೌಳಿ ನೀಡಿರುವ ಟಚ್ ಅಂತೂ ಅತ್ಯದ್ಭುತ ಎಂಬ ಮಾತುಗಳು ಕೇಳಿ ಬರುತ್ತಿದೆ.
RRR Hindi Box Office collection : ಹಿಂದಿ ಪ್ರದೇಶದಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿದ RRR
ಕತೆಗಾರ ವಿಜಯೇಂದ್ರ ಪ್ರಸಾದ್ 'RRR' ಮೂಲಕ ತಾವು ಎಂಥಹಾ ಅದ್ಭುತ ಕತೆಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ರಾಜಮೌಳಿ ತಂದೆಯೇ ಆಗಿರುವ ವಿಜಯೇಂದ್ರ ಪ್ರಸಾದ್, 'ಬಾಹುಬಲಿ', ಹಿಂದಿಯ 'ಭಜರಂಗಿ ಬಾಯಿಜಾನ್' ಸೇರಿ ಹಲವು ಅತ್ಯುತ್ತಮ ಸಿನಿಮಾಗಳಿಗೆ ಅತ್ಯುತ್ತಮ ಕತೆಗಳನ್ನು ಒದಗಿಸಿದ್ದಾರೆ. 'RRR' ಸಿನಿಮಾಕ್ಕೂ ಕತೆ ನೀಡಿರುವ ವಿಜಯೇಂದ್ರ ಪ್ರಸಾದ್ ಈ ಸಿನಿಮಾದ ಕತೆ ಹುಟ್ಟಿದ್ದು ಹೇಗೆ ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
RRR ಗೆ ಹೊಸ ವ್ಯಾಖ್ಯಾನ ಕೊಟ್ಟು ತನ್ನ ಪ್ರಾಡಕ್ಟ್ ಮಾರಲು ಮುಂದಾದ ಕಾಂಡೋಮ್ ಕಂಪನಿ
ಕತೆಯನ್ನು ನಾನು ಬರೆದುಕೊಳ್ಳುವುದಿಲ್ಲ: ವಿಜಯೇಂದ್ರ ಪ್ರಸಾದ್
''ಯಾವುದೇ ಸಿನಿಮಾದ ಕತೆಯನ್ನು ಮೊದಲಿಗೆ ನಾನು ಬರೆದುಕೊಳ್ಳುವುದಿಲ್ಲ ಬದಲಿಗೆ ಐಡಿಯಾವನ್ನು ಲಾಕ್ ಮಾಡಿಕೊಳ್ಳುತ್ತೇನೆ. ಈ ಕಾಲಘಟ್ಟದಲ್ಲಿ, ಈ ಸಂದರ್ಭ ಸೃಷ್ಟಿಯಾದರೆ ಹೇಗಿರಬಹುದು ಎಂಬ ಊಹೆಯನ್ನು ಮೊದಲು ಲಾಕ್ ಮಾಡಿಕೊಳ್ಳುತ್ತೇನೆ. ನಂತರ ಅದಕ್ಕೆ ಪಾತ್ರಗಳನ್ನು, ಘಟನೆಗಳನ್ನು ಸೇರಿಸುತ್ತಾ ಹೋಗುತ್ತೇನೆ. 'RRR' ಸಿನಿಮಾ ಸಹ ಹೀಗೆಯೇ ಆಗಿದ್ದು'' ಎಂದಿದ್ದಾರೆ ಕತೆಗಾರ ವಿಜಯೇಂದ್ರ ಪ್ರಸಾದ್.
RRR ಸಿನಿಮಾದ ಕತೆ ಇದ್ದದ್ದು ಬೇರೆ ರೀತಿ
''RRR' ಸಿನಿಮಾದ ಕತೆ ಆರಂಭದಲ್ಲಿ ಹೀಗಿರಲಿಲ್ಲ. ಒಂದು ವಿಶೇಷ ಕಾರಣಕ್ಕಾಗಿ ಬ್ರಿಟೀಷರ ಪಡೆಯಲ್ಲಿ ಕೆಲಸ ಮಾಡುವ ನಾಯಕ ಹಾಗೂ ಆಗಷ್ಟೆ ಜೈಲಿನಿಂದ ತಪ್ಪಿಸಿಕೊಂಡ ಒಬ್ಬ ವ್ಯಕ್ತಿಯ ನಡುವಿನ ಕತೆ ಇದಾಗಿತ್ತು. ರಾಜಮೌಳಿಗೂ ಇದು ಇಷ್ಟವಾಯಿತು. ಬಳಿಕ ಯಾವುದೋ ಒಂದು ಕಾಲಘಟ್ಟದಲ್ಲಿ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರನ್ನು ನಮ್ಮ ಸಿನಿಮಾದ ನಾಯಕರಂತೆ ಪ್ರೆಸೆಂಟ್ ಮಾಡಿದರೆ ಹೇಗೆ ಎಂಬ ಐಡಿಯಾ ಬಂದು. ಅದೇ ಐಡಿಯಾಗೆ ಸ್ಟಿಕ್ ಆದೆವು. ಆ ಬಳಿಕ ನಾನು ಮತ್ತು ರಾಜಮೌಳಿ ಪ್ರತಿದಿನ ಕನಿಷ್ಟ ಎರಡರಿಂದ ನಾಲ್ಕು ಗಂಟೆ ಕಾಲ ಕುಳಿತು ಚರ್ಚಿಸಿ ಕತೆಯನ್ನು ಅಂತಿಮಗೊಳಿಸಿದೆವು'' ಎಂದು ಕತೆ ಹುಟ್ಟಿದ ಬಗೆ ವಿವರಿಸಿದ್ದಾರೆ ವಿಜಯೇಂದ್ರ ಪ್ರಸಾದ್.
'RRR' ಸಿನಿಮಾದ ಎರಡನೇ ಭಾಗ ಬರಬಹುದಾ?
'RRR' ಎರಡನೇ ಭಾಗ ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಪ್ರಸಾದ್, ''ಇಬ್ಬರು ನಾಯಕ ನಟರು ದೇಶ ಬಿಟ್ಟು ಹೊರಗೆ ಸಾಹಸ ಯಾತ್ರೆಗೆ ಹೋಗುವ ಕತೆಯನ್ನು ಮಾಡಬಹುದು. 1920 ರ ಸಮಯದಲ್ಲಿ ಭಾರತ ಮಾತ್ರವೇ ಅಲ್ಲದೆ ಇತರ ಕೆಲವು ದೇಶಗಳಲ್ಲೂ ಬ್ರಿಟೀಷ್ ರಾಜ್ಯಭಾರ ಇತ್ತಾದ್ದರಿಂದ ಅದೊಂದು ಸಾಹಸ ಯಾತ್ರೆಯ ಕತೆ ಮಾಡಬಹುದು. ಆದರೆ ಇದರ ಸಾಧ್ಯತೆಗಳ ಬಗ್ಗೆ ನಾನು ಹಾಗೂ ರಾಜಮೌಳಿ ಮಾತನಾಡಿಕೊಂಡಿಲ್ಲ. ಅಲ್ಲದೆ ಈಗ ನಾವು ಮಹೇಶ್ ಬಾಬು ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ದೊಡ್ಡ ಪ್ರಾಜೆಕ್ಟ್ ಆಗಿರುವ ಅದು ಮುಗಿಯಲು ಕನಿಷ್ಟ ಎರಡು ವರ್ಷ ಬೇಕು ಹಾಗಾಗಿ ಈ ಸಧ್ಯಕ್ಕಂತೂ 'RRR' ಮುಂದುವರೆದ ಭಾಗ ಬರುವುದು ಅನುಮಾನ'' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.
Recommended Video
ಭಾರತದ ಅತ್ಯುತ್ತಮ ಸಿನಿಮಾ ಕತೆಗಾರ
ವಿಜಯೇಂದ್ರ ಪ್ರಸಾದ್ ಅವರು ಭಾರತದ ಅತ್ಯುತ್ತಮ ಸಿನಿಮಾ ಕತೆಗಾರರು. ಕನ್ನಡದ 'ಅಪ್ಪಾಜಿ', 'ಕುರುಬನ ರಾಣಿ', 'ಜಾಗ್ವಾರ್' 'ಪಾಂಡುರಂಗ ವಿಠಲ', ಸೇರಿದಂತೆ ತೆಲುಗಿನ 'ಬಾಹುಬಲಿ', 'ಸಿಂಹಾದ್ರಿ', 'ಈಗ', 'ಯಮದೊಂಗ', 'ಮಗಧೀರ', 'ವಿಕ್ರಮಾರ್ಕುಡು', ಹಿಂದಿಯ 'ಭಜರಂಗಿ ಭಾಯಿಜಾನ್', 'ಮಣಿಕರ್ಣಿಕ', ತಮಿಳಿನ 'ತಲೈವಿ' ಸೇರಿದಂತೆ ಹಲವು ಸಿನಿಮಾಗಳಿಗೆ ಕತೆ ಬರೆದಿದ್ದಾರೆ. ಇದೀಗ 'ಭಜರಂಗಿ ಭಾಯಿಜಾನ್' ಮುಂದುವರೆದ ಭಾಗದ ಜೊತೆಗೆ ತಾವೇ ಕತೆ ಬರೆದು ನಿರ್ದೇಶಿಸಲಿರುವ 'ಸೀತಾ' ಸಿನಿಮಾದ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.