Don't Miss!
- Finance ಇನ್ಫೋಸಿಸ್ ಸಂಸ್ಥೆಗೆ 7,969 ಕೋಟಿ ರೂಪಾಯಿ ಲಾಭ!
- News karnataka Rain: ವಾರಾಂತ್ಯಕ್ಕೆ ಖುಷಿ ಕೊಟ್ಟ ವರುಣ: ಬೆಂಗಳೂರು ಸೇರಿ ಇಂದು ಎಲ್ಲೆಲ್ಲಿ ಮಳೆ?
- Automobiles ತಿರುಪತಿ ತಿಮ್ಮಪ್ಪನ ದರ್ಶಕ್ಕೆ ತೆರಳಬೇಕೇ.. KSRTC ಬಸ್ಗಳ ವೇಳಾಪಟ್ಟಿ ಏನು, ಟಿಕೆಟ್ ರೇಟ್ ಎಷ್ಟಿದೆ?
- Sports KKR vs RCB IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಸೇಡು?; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Technology 108ಎಂಪಿ ಕ್ಯಾಮೆರಾ ಜೊತೆಗೆ ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
- Lifestyle ನೇಪಾಳದ ರಾಷ್ಟ್ರೀಯ ಚಿಹ್ನೆಯಾಗಿ 'ಯತಿ' ನಾಮನಿರ್ದೇಶನ..! ಹಿಮಾಲಯ ಕಾಯುವ ಯತಿ ಯಾರು..?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾವ್.. ಡಾ.ರಾಜ್ ಕುಮಾರ್ ಬಗ್ಗೆ 'ಬಾಹುಬಲಿ' ನಟ ರಾನಾ ಬಾಯಿಂದ ಬಂದಿದ್ದು ಎಂಥಾ ಮಾತು.!
Recommended Video
'ಲೀಡರ್' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟ ರಾನಾ ದಗ್ಗುಬಾಟಿ. 'ನೇನು ನಾ ರಾಕ್ಷಸಿ', 'ನಾ ಇಷ್ಟಂ', 'ಕೃಷ್ಣಂ ವಂದೇ ಜಗದ್ಗುರು', 'ಬಾಹುಬಲಿ: ದಿ ಬಿಗಿನ್ನಿಂಗ್', 'ರುದ್ರಮಾದೇವಿ', 'ಬಾಹುಬಲಿ: ದಿ ಕನ್ ಕ್ಲೂಶನ್', 'ನೇನೇ ರಾಜು ನೇನೇ ಮಂತ್ರಿ' ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳಿಂದ ಜನಪ್ರಿಯತೆ ಪಡೆದಿರುವ ನಟ ರಾನಾ ದಗ್ಗುಬಾಟಿ.
ಅಸಲಿಗೆ, ರಾನಾ ದಗ್ಗುಬಾಟಿ ಪ್ರಖ್ಯಾತ ತೆಲುಗು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಪುತ್ರ ಮತ್ತು ಟಾಲಿವುಡ್ ನ ದಿಗ್ಗಜ ಡಿ.ರಾಮಾನಾಯ್ಡು ಮೊಮ್ಮಗ. ನಟ ವೆಂಕಟೇಶ್ ದಗ್ಗುಬಾಟಿ ಮತ್ತು ಅಕ್ಕಿನೇನಿ ನಾಗಾರ್ಜುನ.. ರಾನಾ ದಗ್ಗುಬಾಟಿಗೆ ಸಂಬಂಧಿ.
ಇಂತಿಪ್ಪ ರಾನಾ ದಗ್ಗುಬಾಟಿ ಯಾರ ಅಭಿಮಾನಿ ಗೊತ್ತಾ.? ಕನ್ನಡ ಚಿತ್ರರಂಗದ ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಂದ್ರೆ ರಾನಾ ದಗ್ಗುಬಾಟಿಗೆ ಸಿಕ್ಕಾಪಟ್ಟೆ ಇಷ್ಟವಂತೆ.! ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ಡಾ.ರಾಜ್ ಕುಮಾರ್ ಅಭಿಮಾನಿ ರಾನಾ.!
''ನಾನು ಡಾ.ರಾಜ್ ಕುಮಾರ್ ಅವರ ಅತಿ ದೊಡ್ಡ ಅಭಿಮಾನಿ'' ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಟ ರಾನಾ ದಗ್ಗುಬಾಟಿ ಹೇಳಿದ್ದಾರೆ. ಡಾ.ರಾಜ್ ಕುಮಾರ್ ಚಿತ್ರಗಳನ್ನು ನೋಡಿ, ಅವರ ಫ್ಯಾನ್ ಆಗಿದ್ದಾರಂತೆ 'ಬಾಹುಬಲಿ' ನಟ ರಾನಾ ದಗ್ಗುಬಾಟಿ.
ತೆಲುಗು ನಟ ರಾನಾ ದಗ್ಗುಬಾಟಿಗೆ ಜಪಾನ್ ನಲ್ಲೂ ಫ್ಯಾನ್ಸ್ ಇದ್ದಾರೆ ಕಣ್ರೀ.!
'ಭಕ್ತ ಪ್ರಹ್ಲಾದ' ಸ್ಫೂರ್ತಿ
ನಟ ರಾನಾ ದಗ್ಗುಬಾಟಿ ಸದ್ಯ 'ಹಿರಣ್ಯ ಕಶ್ಯಪ' ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ 'ಹಿರಣ್ಯ ಕಶ್ಯಪ' ಚಿತ್ರಕ್ಕೆ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ 'ಭಕ್ತ ಪ್ರಹ್ಲಾದ' ಚಿತ್ರವೇ ಸ್ಫೂರ್ತಿ. 1983 ರಲ್ಲಿ ತೆರೆಕಂಡ ಕನ್ನಡದ 'ಭಕ್ತ ಪ್ರಹ್ಲಾದ' ಚಿತ್ರವನ್ನು ರಾನಾ ದಗ್ಗುಬಾಟಿ ಕಣ್ತುಂಬಿಕೊಂಡಿದ್ದಾರಂತೆ.
ಭಾರತಕ್ಕೆ ವಾಪಸ್ ಆಗುತ್ತಿರುವ ರಾಣಾ ಕಿಡ್ನಿ ವೈಫಲ್ಯ ವದಂತಿಗೆ ತೆರೆ ಎಳೆಯುತ್ತಾರಾ?
ಕನ್ನಡ ಚಿತ್ರವೇ ರೆಫರೆನ್ಸ್.!
''ನಾನು ಈಗ 'ಹಿರಣ್ಯ ಕಶ್ಯಪ' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಏನಾದರೂ ರೆಫರ್ ಮಾಡಬೇಕು ಅಂದ್ರೆ, ನಾನು ಸೀದಾ ಡಾ.ರಾಜ್ ಕುಮಾರ್ ಅಭಿನಯದ 1983 ರಲ್ಲಿ ತೆರೆಕಂಡ 'ಭಕ್ತ ಪ್ರಹ್ಲಾದ' ಚಿತ್ರವನ್ನು ನೋಡುತ್ತೇನೆ'' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ನಟ ರಾನಾ ದಗ್ಗುಬಾಟಿ.
ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?
ಪುನೀತ್ ರಾಜ್ ಕುಮಾರ್ ಕೂಡ ಗೊತ್ತು.!
''ನನಗೆ ಪುನೀತ್ ರಾಜ್ ಕುಮಾರ್ ಕೂಡ ಬಹಳ ವರ್ಷಗಳಿಂದ ಗೊತ್ತು. ಅವರ ಸಿನಿಮಾಗಳನ್ನು ನೋಡುವುದು ನನಗೆ ಇಷ್ಟ'' ಎಂದು ಅಣ್ಣಾವ್ರು ಮತ್ತು ಅಣ್ಣಾವ್ರ ಮಗನ ಬಗ್ಗೆ ರಾನಾ ದಗ್ಗುಬಾಟಿ ಹಾಡಿ ಹೊಗಳಿದ್ದಾರೆ.
'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅಪ್ಪು ಪಾತ್ರವನ್ನ ಇವರು ಮಾಡಬೇಕಿತ್ತಂತೆ.!
ಯಶ್ ಬಗ್ಗೆಯೂ ಕಾಮೆಂಟ್.!
''ಕೆ.ಜಿ.ಎಫ್' ಮೂಲಕ ನಟ ಯಶ್ ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ನಾವು ಕೂಡ ಅದನ್ನೇ 'ಬಾಹುಬಲಿ' ಮತ್ತು 'ದಿ ಘಾಝಿ ಅಟ್ಯಾಕ್' ಮೂಲಕ ಮಾಡಿದ್ವಿ'' ಅಂತ ಹೇಳುವ ಮೂಲಕ ಕನ್ನಡ ಚಿತ್ರರಂಗದ ನಟರ ಬಗ್ಗೆ ಸಂದರ್ಶನದಲ್ಲಿ ರಾನಾ ದಗ್ಗುಬಾಟಿ ಮಾತನಾಡಿದ್ದಾರೆ.