Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!'
Recommended Video
''ಅಯ್ಯೋ.. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಜೋಡಿನಾ.!? ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಗ್ಯಾರೆಂಟಿ ಸೂಟ್ ಆಗಲ್ಲ. ನಿಮ್ಮ (ನಿರ್ದೇಶಕ ಅನಿಲ್ ರವಿಪುಡಿ) ಆಯ್ಕೆ ತಪ್ಪು. ರಶ್ಮಿಕಾ ಮಂದಣ್ಣ ರನ್ನ ಆಯ್ಕೆ ಮಾಡಬೇಡಿ'' - ಹೀಗಂತ ಅದೆಷ್ಟೋ ಜನ ಫೋನ್ ಮಾಡಿ ನಿರ್ದೇಶಕ ಅನಿಲ್ ರವಿಪುಡಿಗೆ ಹೇಳಿದ್ರಂತೆ. ಅದು 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಹೀರೋಯಿನ್ ಅಂತ ಅನೌನ್ಸ್ ಮಾಡಿದ್ಮೇಲೆ.!
'ಸರಿಲೇರು ನೀಕೆವ್ವರು' ಚಿತ್ರದ ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ ಅಂತ ಬಹಿರಂಗ ಪಡಿಸಿದಾಗ, ಟಾಲಿವುಡ್ ಅಂಗಳದಲ್ಲಿ ನೆಗೆಟಿವ್ ಮಾತುಗಳೇ ಹೆಚ್ಚಾಗಿ ಕೇಳಿಬಂದ್ವಂತೆ.
ಆದ್ರೀಗ, 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಆದ್ಮೇಲೆ ಆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಸರಿಯಾಗಿದೆ ಎಂಬ ಟಾಕ್ ಶುರುವಾಗಿದೆ ಎಂದು ಸಂದರ್ಶನವೊಂದರಲ್ಲಿ ನಿರ್ದೇಶಕ ಅನಿಲ್ ರವಿಪುಡಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...
ರಶ್ಮಿಕಾ ರನ್ನ ಆಯ್ಕೆ ಮಾಡಿದಾಗ...
''ಸರಿಲೇರು ನೀಕೆವ್ವರು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ರನ್ನ ಆಯ್ಕೆ ಮಾಡಿದಾಗ, ನೆಗೆಟಿವ್ ಮಾತುಗಳೇ ಹೆಚ್ಚಾಗಿ ಕೇಳಿಬಂತು. ನಿಮ್ಮ ಆಯ್ಕೆ ಸರಿಯಿಲ್ಲ. ಮಹೇಶ್ ಬಾಬುಗೆ ರಶ್ಮಿಕಾ ಸೂಟ್ ಆಗಲ್ಲ. ಆಕೆಯನ್ನ ಸೆಲೆಕ್ಟ್ ಮಾಡಬೇಡಿ'' ಅಂತ ಎಷ್ಟೋ ಜನ ನನಗೆ ಫೋನ್ ಮಾಡಿ ಹೇಳಿದರು'' ಎಂದು ನಿರ್ದೇಶಕ ಅನಿಲ್ ರವಿಪುಡಿ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ನಂ.1 ಟ್ರೆಂಡಿಂಗ್ ನಲ್ಲಿದೆ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಟ್ರೈಲರ್.!
ಸ್ಟಾರ್ ಹೀರೋಯಿನ್ ಬೇಕಾಗಿರಲಿಲ್ಲ.!
''ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಮಗೆ ಸ್ಟಾರ್ ಹೀರೋಯಿನ್ ಬೇಕಾಗಿರಲಿಲ್ಲ. ಸ್ಟಾರ್ ನಾಯಕಿಯನ್ನು ಸೆಲೆಕ್ಟ್ ಮಾಡಿದ್ರೆ, ದೊಡ್ಡ ಎಡವಟ್ಟು ಆಗುತ್ತಿತ್ತು. ಹೀರೋಯಿನ್ ಅನ್ನೋದಕ್ಕಿಂತ ಹೆಚ್ಚಾಗಿ ಕ್ಯಾರೆಕ್ಟರ್ ಬೇಕಾಗಿತ್ತು. ರೈಲು ಸೀಕ್ವೆನ್ಸ್ ನಲ್ಲಿ ಕರ್ನೂಲಿಗೆ ಹೋಗುವ ಬಬ್ಲಿ ಹುಡುಗಿ ಬೇಕಾಗಿದ್ದಳು. ಅದಕ್ಕೆ ಸ್ಟಾರ್ ಇಮೇಜ್ ಇರುವ ನಾಯಕಿಯ ಅಗತ್ಯವಿರಲಿಲ್ಲ. ಹೀಗಾಗಿ ರಶ್ಮಿಕಾ ರನ್ನ ಆಯ್ಕೆ ಮಾಡಿದೆವು. ರಶ್ಮಿಕಾ ಆಯ್ಕೆ ಸರಿ ಎಂದು ಮಹೇಶ್ ಬಾಬು ಕೂಡ ಹೇಳಿದ್ದರು'' ಎಂದು ಅನಿಲ್ ರವಿಪುಡಿ ಹೇಳಿದ್ದಾರೆ.
ಅಯ್ಯಯ್ಯೋ.. ರಶ್ಮಿಕಾ ಮಂದಣ್ಣ ಹೆಸರನ್ನ ಚಿರಂಜೀವಿ ಹೀಗಾ ಕರೆಯೋದು.!?
ನಿರ್ದೇಶಕರ ಅನಿಸಿಕೆ
''ಟ್ರೈಲರ್ ಬಿಡುಗಡೆಯಾದ್ಮೇಲೆ ಆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಸರಿಯಾಗಿದೆ ಎಂದು ಕೆಲವರಿಗೆ ಅನಿಸಿದೆ. ಸಿನಿಮಾ ನೋಡಿದ್ಮೇಲೆ, ರಶ್ಮಿಕಾ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತದೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ ನಿರ್ದೇಶಕ ಅನಿಲ್ ರವಿಪುಡಿ
ಟಾಲಿವುಡ್ ನಲ್ಲೂ 'ಓವರ್ ಆಕ್ಟಿಂಗ್ ರಾಣಿ' ಎಂದು ಟ್ರೋಲ್ ಆದ ರಶ್ಮಿಕಾ ಮಂದಣ್ಣ.!
ಜನವರಿ 11 ಬಿಡುಗಡೆ
ಮೇಜರ್ ಅಜಯ್ ಕೃಷ್ಣ ಆಗಿ ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಕೃಷ್ಣ, ಪ್ರಕಾಶ್ ರಾಜ್ ರಂತಹ ದೊಡ್ಡ ತಾರಾಬಳಗ ಹೊಂದಿರುವ 'ಸರಿಲೇರು ನೀಕೆವ್ವರು' ಚಿತ್ರ ಜನವರಿ 11, 2020 ರಂದು ಬಿಡುಗಡೆ ಆಗಲಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿದ್ದಾರೆ.