Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ ವಿರುದ್ಧ ತೊಡೆತಟ್ಟಲು ಕನ್ನಡಿಗ ಸಜ್ಜು
ಕನ್ನಡದ ಪ್ರತಿಭೆಗಳು ಹೊರ ರಾಜ್ಯಗಳಿಗೆ ಹೋಗಿ ಅಲ್ಲಿ ಮಿಂಚುತ್ತಿರುವುದು ಹೊಸದೇನಲ್ಲ. ಕನ್ನಡದ ನಟರು ತಮ್ಮ ಪ್ರತಿಭೆಯಿಂದ ನಾಯಕ ನಟನಿಗೆ ಸರಿಸಮನಾದ ಪಾತ್ರಗಳನ್ನೇ ನೆರೆ-ಹೊರೆಯ ಸಿನಿರಂಗಗಳಲ್ಲಿ ಪಡೆಯುತ್ತಿದ್ದಾರೆ.
Recommended Video
ಕನ್ನಡದ ಖ್ಯಾತ ವಿಲನ್ ರಾಜ್ ದೀಪಕ್ ಶೆಟ್ಟಿ ಅವರು ಈಗಾಗಲೇ ಹಲವು ಸಿನಿಮಾಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿಯಾಗಿದೆ. ತಮ್ಮ ಹುರಿ ಮೈಕಟ್ಟು, ಗಂಭೀರ ನಟನೆಯಿಂದ ನಿರ್ದೇಶಕರ ಮೆಚ್ಚಿನ ವಿಲನ್ ಅವರಾಗಿದ್ದಾರೆ.
ಇದೇ ರಾಜ್ ದೀಪಕ್ ಶೆಟ್ಟಿ ಅವರು ಈಗ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಮುಂದೆ ತೊಡೆತಟ್ಟಲಿದ್ದಾರೆ. ಎರಡನೇ ವಿಲನ್, ಮೂರನೇ ವಿಲನ್ ಆಗಿ ಸಿನಿಮಾಗಳಲ್ಲಿ ಮಾಡಿರುವ ರಾಜ್ ದೀಪಕ್ ಶೆಟ್ಟಿ ಈಗ ಅಲ್ಲು ಅರ್ಜುನ್ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರ್ಜುನ್ ಎದುರು ಪ್ರಮುಖ ಪಾತ್ರ
ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವ ಅಲ್ಲು ಅರ್ಜುನ್ ಹೊಸ ಚಿತ್ರವೊಂದರ ಶೂಟಿಂಗ್ ಪ್ರಾರಂಭಿಸಿದ್ದಾರೆ, ಆ ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರ ರಾಜ್ ದೀಪಕ್ ಶೆಟ್ಟಿ ಅವರದ್ದಾಗಿದೆ. ದೊಡ್ಡ ತಾರಾಗಣವಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಾನಾ ನಾಯಕಿ, ಜಗಪತಿ ಬಾಬು ಸಹ ಇದ್ದು, ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ.
ಬಿಡುಗಡೆಗೆ ತಯಾರಾಗಿರುವ ಸಿನಿಮಾಗಳ ಪಟ್ಟಿ
ರಾಜ್ ದೀಪಕ್ ಶೆಟ್ಟಿ ಅವರ ಹಲವು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು, ಇಲ್ಲಿದೆ ನೋಡಿ ಪಟ್ಟಿ; ರಾಣಾ ದಗ್ಗುಬಟಿ ಜೊತೆ ನಟಿಸಿರುವ ವಿರಾಟ ಪರ್ವಮ್, ಜಗಪತಿ ಬಾಬು ಅವರೊಂದಿಗೆ ಹೆಸರಿಡದ ಚಿತ್ರ, ವಿಕ್ಟರಿ ವೆಂಕಟೇಶ್ ಅಭಿನಯದ ಅಸುರನ್ ಚಿತ್ರದ ರೀಮೇಕ್ ನಾರಪ್ಪ, ಕನ್ನಡದ ರಣಂ, ಭಟಾರೆ, ಕೋಟಿಗೊಬ್ಬ 3, ರವಿಚಂದ್ರ, ಅರ್ಜುನ್ ಗೌಡ, ಪೊಗರು, ಗಡಿಯಾರ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ.
ಧಾರವಾಹಿ ಮೂಲಕ ಸಿನಿಮಾಕ್ಕೆ ಪ್ರವೇಶ
ಧಾರವಾಹಿ ನಟನೆಯ ಮೂಲಕ ಬೆಳ್ಳಿತೆರೆ ಪ್ರವೇಶಿಸಿರುವ ರಾಜ್ ದೀಪಕ್ ಶೆಟ್ಟಿ ಶಿವರಾಜ್ ಕುಮಾರ್ ಅವರ ಶ್ರೀಕಂಠ, ಟೈಗರ್ ಮೂಲಕ ವಿಲನ್ ಪಾತ್ರಗಳನ್ನು ಆರಂಭಿಸಿದರು. ತೆಲುಗಿನ ಐ ಸ್ಮಾರ್ಟ್ ಶಂಕರ್ ಸೇರಿ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
ಹೀರೋ ಪಾತ್ರಗಳು ಬೇಡ, ವಿಲನ್ ಸಾಕು
ಹುರಿಗಟ್ಟಿದ ಮೈಕಟ್ಟು ಹೊಂದಿರುವ ರಾಜ್ ದೀಪಕ್ ಶೆಟ್ಟಿ, ನಾಯಕನ ಪಾತ್ರಗಳು ಹುಡುಕಿಕೊಂಡು ಬಂದರೂ ಸಹ ಅದನ್ನು ನಿರಾಕರಿಸಿ ತಾವು ವಿಲನ್ ಪಾತ್ರಗಳಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರಂತೆ. ತಿನ್ನಲಾಗದ ಅಡುಗೆಯನ್ನು ಬಡಿಸಿಕೊಂಡು ಪ್ರಯೋಜನವಿಲ್ಲ ಎಂಬುದು ಹೀರೋ ಪಾತ್ರಗಳ ನಿರಾಕರಣೆಯ ಹಿಂದಿರುವ ರಾಜ್ ಶೆಟ್ಟಿ ನಂಬಿರುವ ವೇದಾಂತ.