Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಯಂ' ನಿರ್ದೇಶಕನ ಚಿತ್ರದಲ್ಲಿ ಕೀರ್ತಿ ಸುರೇಶ್: ನಾಯಕ ಯಾರು?
'ಜಯಂ', 'ಚಿತ್ರಂ', 'ನುವ್ವು-ನೇನು', 'ಔನನ್ನಾ ಕಾದನ್ನ', 'ಲಕ್ಷ್ಮೀ ಕಲ್ಯಾಣಂ' ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ತೇಜ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಲಿದ್ದಾರೆ.ಪೆಂಗ್ವಿನ್ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಟನೆಯನ್ನು ಮೆಚ್ಚಿದ ತೇಜ, ಕೀರ್ತಿ ಸುರೇಶ್ ಅವರನ್ನೇ ತಮ್ಮ ಮುಂದಿನ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸಿನಿಮಾದ ನಾಯಕನಾಗಿ ಗೋಪಿಚಂದ್ ಈಗಾಗಲೇ ಆಯ್ಕೆ ಆಗಿದ್ದು, ಗೋಪಿಚಂದ್ ಎದುರಾಗಿ ನಾಯಕಿ ಹುಡುಕಾಟ ನಡೆಸುತ್ತಿದ್ದಾಗ ಕೀರ್ತಿ ನಟನೆ ಗಮನ ಸೆಳೆದು ಅವರನ್ನೇ ಅಂತಿಮ ಮಾಡಲಾಗಿದೆ.ಕೀರ್ತಿ ಸುರೇಶ್ ಅವರ ಇತ್ತೀಚಿನ ಪೆಂಗ್ವಿನ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. ಮಗನಿಗಾಗಿ ಹೋರಾಡುವ ತಾಯಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ಅದ್ಭುತವಾಗಿ ನಟಿಸಿದ್ದರು.
ಸತತ ಸೋಲು ಕಂಡಿರುವ ತೇಜ
ಚಿತ್ರಂ, ಜಯಂ, ನುವ್ವು ನೇನು ಅಂಥಹಾ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ತೆಲುಗು ಚಿತ್ರರಂಗದಕ್ಕೆ ನೀಡಿದ್ದ ನಿರ್ದೇಶಕ ತೇಜ ಕೆಲ ವರ್ಷಗಳಿಂದ ಸತತ ಸೋಲಿನಲ್ಲಿಯೇ ಇದ್ದಾರೆ. ಈ ಸಿನಿಮಾ ಮೂಲಕ ತಮ್ಮ ಹಳೆ ಚಾರ್ಮ್ ಹಿಂಪಡೆಯುವ ಇರಾದೆಯಲ್ಲಿದ್ದಾರೆ ತೇಜ.
ಮೆಗಾಸ್ಟಾರ್ ಚಿರಂಜೀವಿ ನೀಡಿದ ಆಫರ್ ತಿರಸ್ಕರಿಸಿದರೇ ಸಾಯಿ ಪಲ್ಲವಿ
ಗೋಪಿಚಂದ್ ಯಶಸ್ಸಿಗೆ ಕಾರಣವಾಗಿದ್ದ ತೇಜ
ಇನ್ನು ಗೋಪಿಚಂದ್ ಅವರು ತೇಜ ಅವರ ಸಿನಿಮಾದಿಂದಲೇ ಖ್ಯಾತಿಯ ಉತ್ತುಂಗಕ್ಕೆ ಏರಿದವರು. ಜಯಂ ಸಿನಿಮಾದಲ್ಲಿ ಗೋಪಿಚಂದ್ ನಿರ್ವಹಿಸಿದ ವಿಲನ್ ಪಾತ್ರವೇ ಅವರನ್ನು ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವಂತೆ ಮಾಡಿತು. ಇದೀಗ ಮತ್ತೆ ಅವರ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
ಸೀಟಿಮಾರ್ ಸಿನಿಮಾದಲ್ಲಿ ಗೋಪಿಚಂದ್
ಗೋಪಿಚಂದ್ ಪ್ರಸ್ತುತ ಸೀಟಿಮಾರ್ ಎಂಬ ಕ್ರೀಡಾ ಕತೆ ಆಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮನ್ನಾ ನಾಯಕಿಯಾಗಿರುವ ಈ ಸಿನಿಮಾ ಕಬಡ್ಡಿ ಕೋಚ್ ಒಬ್ಬನ ಕತೆ ಆಧರಿಸಿದೆ.
ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್ಪಿ ಬಂದಿದ್ದೆಷ್ಟು?
ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ
ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಪ್ರಸ್ತುತ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ ಮರಕ್ಕರ್, ತೆಲುಗಿನ ಗುಡ್ಲಕ್ ಸಾಕ್ಷಿ, ರಂಗ್ ದೇ, ಮಿಸ್ ಇಂಡಿಯಾ ಹಾಗೂ ತಮಿಳಿನಲ್ಲಿ ರಜನೀ ನಟಿಸಲಿರುವ ಅನ್ನಾತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.