ರಶ್ಮಿಕಾ ಬಿಟ್ಟು ತಿಮ್ಮಪ್ಪನ ದರ್ಶನ ಪಡೆದ ಮಹೇಶ್ ಬಾಬು ಮತ್ತು ಚಿತ್ರತಂಡ
Recommended Video
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆಗಿ ಬ್ಲಕ್ ಬಸ್ಟರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ದೇಶ ವಿದೇಶದಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೆ ಖುಷಿಗೆ ಚಿತ್ರತಂಡ ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ಭೇಟಿ ನೀಡಿದ್ದಾರೆ.
ಹೌದು, ಇಂದು ಸರಿಲೇರು ನೀಕೆವ್ವರು ಚಿತ್ರತಂಡ ತಿಮ್ಮಪ್ಪನ ದರ್ಶನ ಪಡೆದು ಸಂತಸ ಪಟ್ಟಿದ್ದಾರೆ. ಮಹೇಶ್ ಬಾಬು ಕುಟುಂಬ ಮತ್ತು ಇಡೀ ಚಿತ್ರತಂಡ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಮಹೇಶ್ ಬಾಬು ಪತ್ನಿ ಮತ್ತು ಮಕ್ಕಳು ಜೋತೆಗೆ ತೆರಳಿದ್ದಾರೆ. ಇನ್ನು ಚಿತ್ರತಂಡ ಕೂಡ ಜೊತೆಯಲ್ಲಿದೆ.
ಆದರೆ ಚಿತ್ರತಂಡದಿಂದ ನಾಯಕಿ ರಶ್ಮಿಕಾ ಒಬ್ಬರು ಮಿಸ್ ಆಗಿದ್ದಾರೆ. ಕಿರಿಕ್ ಬೆಡಗಿ ಇತ್ತ ಐಟಿ ವಿಚಾರಣೆಯಲ್ಲಿದ್ದಾರೆ. ಶೂಟಿಂಗ್ ನಲ್ಲಿದ್ದ ರಶ್ಮಿಕಾ ಐಟಿ ಅಧಿಕಾರಿಗಳ ಸೂಚನೆ ಮೇರೆಗೆ ರಾತ್ರೊ ರಾತ್ರಿ ಕೊಡಗು ಜಿಲ್ಲೆಗೆ ಆಗಮಿಸಿದ ಹಿನ್ನಲೆ ಸಿನಿಮಾ ತಂಡದ ಜೊತೆಗಿನ ತಿಮ್ಮನ ದರ್ಶನ ಮಿಸ್ ಆಗಿದೆ.

ಚಿತ್ರತಂಡ ತಿಮ್ಮಪ್ಪನ ದರ್ಶನ ಪಡೆದು ಹೊರಬಂದ ನಂತರ ಕ್ಯಾಮರಾಗೆ ಪೋಸ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸರಿಲೇರು ನೀಕೆವ್ವರು ಸಿನಿಮಾ ರಿಲೀಸ್ ಆಗಿ ವಾರ ಆಗಿದೆ. ಆಗಲೆ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತ ಬಾಕ್ಸ್ ಆಫೀಸ ನಲ್ಲಿ ಧೂಳ್ ಎಬ್ಬಿಸುತ್ತಿದೆ.


Click it and Unblock the Notifications











