Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯ ಗೆಲ್ಲುತ್ತಿದೆ ಮಹೇಶ್ ಬಾಬು ಮಾಡಿದ ಈ ಕಾರ್ಯ
ತೆಲುಗು ಸಿನಿಮಾ ಇಂಡಸ್ಟ್ರಿಯ ನಟ ಮಹೇಶ್ ಬಾಬು ತಮ್ಮ ಅಂದದಿಂದ ಮಾತ್ರವಲ್ಲ ತಮ್ಮ ಒಳ್ಳೆ ತನದಿಂದಲೂ ಉದ್ಯಮದಲ್ಲಿ ಸಾಕಷ್ಟು ಖ್ಯಾತರು.
Recommended Video
ಈ ಸುರಸುಂದರ ನಟ ಇತ್ತೀಚೆಗೆ ಮಾಡಿರುವ ಕಾರ್ಯ ಸಾಕಷ್ಟು ಸುದ್ದಿ ಮಾಡುತ್ತಿದೆ. ಅಷ್ಟೆ ಅಲ್ಲ ಮಹೇಶ್ ಬಾಬು ಮೇಲಿದ್ದ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ
ಒಂದು ದಿನದ ಹಿಂದೆ ಮಹೇಶ್ ಬಾಬು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ತಮ್ಮ ಮೇಕಪ್ ಅಪ್ ಮ್ಯಾನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮಹೇಶ್ ಬಾಬು ಈ ಪೋಸ್ಟ್ ಅನ್ನು ಹಾಕಿದ್ದಾರೆ. ಇದು ವೈರಲ್ ಆಗಿದೆ.
ಮಹೇಶ್ ಬಾಬು ಪ್ರಸಾದನ ಕಲಾವಿದರ ಹೆಸರು ಪಟ್ಟಾಭಿ
ಮಹೇಶ್ ಬಾಬು ಪ್ರಸಾದನ ಕಲಾವಿದರ ಹೆಸರು ಪಟ್ಟಾಭಿ ಎಂದು. ಜುಲೈ 8 ರಂದು ಅವರ ಹುಟ್ಟುಹಬ್ಬ. ಪಟ್ಟಾಭಿ ಅವರೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಹೇಶ್ ಪಟ್ಟಾಭಿಯನ್ನು ಹೊಗಳಿ ವಿಶ್ ಮಾಡಿದ್ದಾರೆ.
ಎಲ್ಲದಕ್ಕೂ ತಯಾರಾಗಿರುತ್ತಾರೆ ಪಟ್ಟಾಭಿ: ಮಹೇಶ್
ಉದ್ದನೆಯ ಚಿತ್ರೀಕರಣದ ಅವಧಿ ಇರಲಿ ಅಥವಾ ಕೊನೆಯ ಕ್ಷಣದ ಮೇಕಪ್ ಅಪ್ ಟಚಪ್ ಇರಲಿ ಪಟ್ಟಾಭಿ ಎಲ್ಲದಕ್ಕೂ ತಯಾರಿರುತ್ತಾರೆ. ನಿಮಗೆ ದೇವರ ಆಶೀರ್ವಾದ ಇರಲಿ, ಜೀವನ ಸಂತೋಷದಾಯಕವಾಗಿರಲಿ ಎಂದು ಮಹೇಶ್ ಬಾಬು ವಿಶ್ ಮಾಡಿದ್ದಾರೆ.
ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ಬೇಸರದ ಸುದ್ದಿ
ಮಹೇಶ್ ಬಾಬು ಪತ್ನಿಯಿಂದಲೂ ಶುಭಾಶಯ
ಮಹೇಶ್ ಬಾಬು ಅವರ ಇನ್ಸ್ಟಾಗ್ರಾಂ ಪೋಸ್ಟ್ ಗೆ ಕಮೆಂಟ್ ಮಾಡಿರುವ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್, 'ಹುಟ್ಟುಹಬ್ಬದ ಶುಭಾಶಯ ಪಟ್ಟಾಭಿ ಅವರೇ, ಈಗಲೂ ಯಾವಾಗಲೂ ನಮ್ಮ ಹಾರೈಕೆ ನಿಮ್ಮೊಂದಿಗೆ ಇರುತ್ತದೆ' ಎಂದು ಹೇಳಿದ್ದಾರೆ.
ಸರ್ಕಾರು ವಾರಿ ಪಾಠ ಸಿನಿಮಾ
ಮಹೇಶ್ ಬಾಬು ಅವರು 'ಸರ್ಕಾರು ವಾರಿ ಪಾಠ' ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಗೋವಾ, ಆಂಧ್ರಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಆಗಲಿದೆ. ಸಿನಿಮಾವನ್ನು ಪರಶುರಾಮ್ ನಿರ್ದೇಶಿಸಲಿದ್ದಾರೆ.