Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪಂಚಾಯತ್ 2' ವೆಬ್ ಸಿರೀಸ್ ಇಟ್ಕೊಂಡು ಮಹೇಶ್ ಬಾಬು ಕಾಲೆಳೆದ ಉತ್ತರದ ಪ್ರೇಕ್ಷಕರು!
ಇತ್ತೀಚೆಗಷ್ಟೇ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ರಿಲೀಸ್ ಆದಲ್ಲಿಂದ ಬಾಕ್ಸಾಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಭಾರತ ಹಾಗೂ ಅಮೆರಿಕದಲ್ಲಿ ಸಿನಿಮಾ ಕಲೆಕ್ಷನ್ ಜೋರಾಗೇ ಇದೆ. ಆದರೆ, ಸಿನಿಮಾ ಬಿಡುಗಡೆಗೂ ಕೆಲವು ದಿನ ಮುನ್ನ ಮಹೇಶ್ ಬಾಬು ಕೊಟ್ಟ ಒಂದೇ ಒಂದು ಹೇಳಿಕೆ ಉತ್ತರ ಭಾರತದ ಸಿನಿಪ್ರಿಯರ ಸಿಟ್ಟಿಗೆಬ್ಬಿಸಿತ್ತು.
"ಬಾಲಿವುಡ್ ತನ್ನನ್ನು ಭರಿಸಲು ಸಾಧ್ಯವಿಲ್ಲ" ಎಂದು ಪ್ರಿನ್ಸ್ ಮಹೇಶ್ ಬಾಬು ಹೇಳಿಕೆ ನೀಡಿದ್ದರು. ಅದು ಉತ್ತರ ಭಾರತದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆಯಾಗಿತ್ತು. ಬಾಲಿವುಡ್ ಸಿನಿಮಾ ಮಂದಿ ಕೂಡ ಮಹೇಶ್ ಬಾಬು ಹೇಳಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಮೆಂಟ್ ಮಾಡಿದ್ದರು. ಈಗ ಸಿನಿಮಾ ಬಿಡುಗಡೆದ ಎರಡು ವಾರಗಳ ಬಳಿಕ ಉತ್ತರ ಭಾರತದ ಮಂದಿ ಮಹೇಶ್ ಬಾಬುರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
200 ಕೋಟಿ ಕಲೆಕ್ಷನ್ ಮಾಡಿದ 'ಸರ್ಕಾರು ವಾರಿ ಪಾಟ' ಬಾಕ್ಸಾಫೀಸ್ ಧೂಳ್
ಮಹೇಶ್ ಬಾಬು ಸಾಫ್ಟ್ ಟ್ರೋಲ್
ಬಾಲಿವುಡ್ ಬಗ್ಗೆ ನೀಡಿದ ಹೇಳಿಕೆ ವಿವಾದವಾಗುತ್ತಿದ್ದಂತೆ ಉತ್ತರದ ಜನರು ಮಹೇಶ್ ಬಾಬು ವಿರುದ್ಧ ಮುನಿಸಿಕೊಂಡಿರುವ ಹಾಗಿದೆ. ಇದೇ ಕಾರಣಕ್ಕೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿರುವ 'ಪಂಚಾಯತ್ 2' ವೆಬ್ ಸೀರಿಸ್ ಅನ್ನು ಮುಂದಿಟ್ಟುಕೊಂಡು ಮಹೇಶ್ ಬಾಬು ಕಾಲೆಳೆಯಲು ಮುಂದಾಗಿದ್ದಾರೆ. ಇಂತಹ ಟ್ರೋಲ್ ಹಾಗೂ ಮೇಮೆಗಳ ಬಗ್ಗೆ ಟಾಲಿವುಡ್ನಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ. ಉತ್ತರ ಭಾರತದ ಕೆಲವು ಮಂದಿ ಮಹೇಶ್ ಬಾಬುರನ್ನು ವಿರೋಧಿಸಲು ಆರಂಭಿಸಿದ್ದಾರೆ ಎಂಬ ಟಾಕ್ ಶುರುವಾಗಿದೆ.
ಉತ್ತರದಲ್ಲಿ ಮಹೇಶ್ ಬಾಬು ಟ್ರೋಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಟ್ರೋಲ್ನಲ್ಲಿ ಪಂಚಾಯತ್ನ ಕಾರ್ಯದರ್ಶಿ ಅಭಿಷೇಕ್ ತ್ರಿಪಾಠಿ ಮಹೇಶ್ ಬಾಬು ಕಣ್ಣು ಮುಚ್ಚಿರುವ ಮೇಮೆಯೊಂದಿದೆ. ಇದರಲ್ಲಿ "ಭಾರತದ ಹಳ್ಳಿಗಳು ಅಂದರೆ ಹೀಗಿರುತ್ತೆ. ಸಿನಿಮಾದಲ್ಲಿ ತೋರಿಸಿರುವ ಹಾಗೆ ಇರುವುದಿಲ್ಲ." ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಂದು ಮೇಮೆಯಲ್ಲಿ ಡಿವೆಲಪ್ ಆಗಿರುವ ಹಳ್ಳಿಯ ಫೋಟೊವೊಂದನ್ನು ಟ್ವೀಟ್ ಮಾಡಿ "ಮಹೇಶ್ ಬಾಬು ಪಂಚಾಯತ್ ಕಾರ್ಯದರ್ಶಿ ಆದರೆ, ಹೀಗಿರುತ್ತೆ." ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿ ಉತ್ತರ ಭಾರತದ ನೆಟ್ಟಿಗರು ಪ್ರಿನ್ಸ್ ಮೇಲೆ ಸ್ಟಾಫ್ಟ್ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಟಾಲಿವುಡ್ ಮಂದಿ ಚರ್ಚೆ ಮಾಡುತ್ತಿದ್ದಾರೆ.
ಮಹೇಶ್ ಬಾಬು ಸಿನಿಮಾನೇ ಟಾರ್ಗೆಟ್
'ಸರ್ಕಾರು ವಾರಿ ಪಾಟ' ಸಿನಿಮಾಗೂ ಮುನ್ನ ಮಹೇಶ್ ಬಾಬು ನಟಿಸಿದ ಕೆಲವು ಸಿನಿಮಾಗಳು ಸಾಮಾಜಿಕ ಸಂದೇಶವನ್ನು ಹೊತ್ತು ಬಂದಿದ್ದವು. 'ಶ್ರೀಮಂತುಡು' ಹಾಗೂ 'ಮಹರ್ಷಿ' ಅಂತಹ ಸಿನಿಮಾಗಳು ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದವು. ಇದನ್ನೇ ಮುಂದಿಟ್ಟುಕೊಂಡು ಉತ್ತರ ಭಾರತದಲ್ಲಿ ಮಹೇಶ್ ಬಾಬು ವಿರುದ್ಧ ಟ್ರೋಲ್ ಮಾಡಲಾಗುತ್ತಿದೆ ಎಂದು ಕಮೆಂಟ್ ಮಾಡಲಾಗುತ್ತಿದೆ.
'ಪಂಚಾಯತ್ 2' ವೆಬ್ ಸಿರೀಸ್ ಹಿಟ್
ಅಮೆಜಾನ್ನಲ್ಲಿ 'ಪಂಚಾಯತ್ 2' ವೆಬ್ ಸಿರೀಸ್ ಸಕ್ಸಸ್ ಆಗಿದೆ. ಒಟಿಟಿ ಪ್ರಿಯರಿಗೆ 'ಪಂಚಾಯತ್' ವೆಬ್ ಸಿರೀಸ್ನ ಎರಡನೇ ಸೀಸನ್ ಹಿಟ್ ಆಗಿದೆ. ನೀನಾ ಗುಪ್ತ, ರಘುಬೀರ್ ಯಾದವ್ ಹಾಗೂ ಜಿತೇಂದ್ರ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ ಡ್ರಾಮ ಸೀರಿಸ್ ನೋಡಿ ವೀಕ್ಷಕರಉ ಮೆಚ್ಚುಗೆ ಸೂಚಿಸಿದ್ದು, ಎರಡನೇ ಸೀಸನ್ ಕೂಡ ಹಿಟ್ ಆಗಿದೆ.