Don't Miss!
- News ಅಂದು ರಾಮದಾಸ್, ಇಂದು ಪ್ರತಾಪ್ ಸಿಂಹ ಬೆನ್ನಿಗೆ ಹೊಡೆದ ಮೋದಿ: ಆದರೆ ಇಬ್ಬರಿಗೂ ಮಾತ್ರ ಟಿಕೆಟ್ ಇಲ್ಲ
- Sports ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ಗೆ ಆಯ್ಕೆಯಾಗಬಾರದು; ಇರ್ಫಾನ್ ಪಠಾಣ್ ಹೀಗೆ ಹೇಳಿದ್ದೇಕೆ?
- Technology Smart TVs: ವಿಶೇಷ ಫೀಚರ್ಸ್ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!
- Finance ಕ್ಯಾನ್ಸರ್ಗೆ ಸವಾಲು ಹಾಕಿ ಗೆದ್ದ 33 ವರ್ಷದ ಹುಡುಗಿ ಬಳಿ ಈಗ 10 ಖಾಸಗಿ ಜೆಟ್ಗಳು!
- Lifestyle ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು..!
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂದಿನ ಸಿನಿಮಾ ಸೂಪರ್ ಸ್ಟಾರ್ ಜತೆ: ಖಚಿತಪಡಿಸಿದ ನಿರ್ದೇಶಕ ರಾಜಮೌಳಿ
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್ಆರ್ಆರ್ (ರೌದ್ರಂ ರಣಂ ರುಧಿರಂ) ಸೆಟ್ಟೇರಿ ಎರಡು ವರ್ಷಗಳಾಗಿವೆ. ಒಂದು ಹಂತದ ಶೂಟಿಂಗ್ ಮುಕ್ತಾಯಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ತೆರೆಗೆ ತರುವುದು ಚಿತ್ರತಂಡದ ಉದ್ದೇಶ. ಆದರೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.
ಈ ನಡುವೆ ಅದ್ಧೂರಿ ಮತ್ತು ರೋಚಕ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ಎಸ್ ಎಸ್ ರಾಜಮೌಳಿ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹೊರಗೆಡವಿದ್ದಾರೆ. ಆರ್ಆರ್ಆರ್ ಬಿಡುಗಡೆಯಾಗುತ್ತಿದ್ದಂತೆಯೇ ರಾಜಮೌಳಿ ತಮ್ಮ ಹೊಸ ಚಿತ್ರವನ್ನು ಆರಂಭಿಸಲಿದ್ದಾರೆ. ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಪ್ರಿ ಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಆರಂಭವಾಗಿವೆ. ಅಂದಹಾಗೆ ಸಿನಿಮಾ ಪ್ರಿಯರಲ್ಲಿ ಹೆಚ್ಚು ರೋಮಾಂಚನ ಮತ್ತು ಕುತೂಹಲ ಮೂಡಿಸಿರುವುದು ರಾಜಮೌಳಿ ಅವರ ಚಿತ್ರದ ನಾಯಕನ ಆಯ್ಕೆ. ಮುಂದೆ ಓದಿ...
'RRR' ಚಿತ್ರಕ್ಕೆ ಅಲಿಯಾ ಭಟ್ ಆಯ್ಕೆಯ ಕಾರಣ ಬಹಿರಂಗ ಪಡಿಸಿದ ರಾಜಮೌಳಿ
ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬು
ರಾಜಮೌಳಿ ಅವರ ಮುಂದಿನ ಚಿತ್ರದಲ್ಲಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸುವುದು ಖಚಿತವಾಗಿದೆ. ದುರ್ಗಾ ಆರ್ಟ್ಸ್ ಬ್ಯಾನರ್ನಲ್ಲಿ ಕೆಎಲ್ ನಾರಾಯಣ ಸಿನಿಮಾ ನಿರ್ಮಿಸಲಿದ್ದು, ಇದರಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ ಎಂದು ರಾಜಮೌಳಿ ದೃಢಪಡಿಸಿದ್ದಾರೆ.
ಮಹೇಶ್ ಬಾಬು ಅಭಿಮಾನಿಗಳಲ್ಲಿ ಖುಷಿ
ನಿಗದಿಪಡಿಸಿದಂತೆ 2021ರ ಜನವರಿ 8ರಂದು ಆರ್ಆರ್ಆರ್ ಬಿಡುಗಡೆಯಾದರೆ ರಾಜಮೌಳಿ ನಿರ್ದೇಶನದ 14ನೇ ಸಿನಿಮಾ ಮುಂದಿನ ವರ್ಷದ ಆರಂಭದಲ್ಲಿಯೇ ಸೆಟ್ಟೇರಲಿದೆ. ಟ್ರೆಂಡ್ ಸೆಟ್ಟರ್ ಆಗಿರುವ ರಾಜಮೌಳಿ, ಭಾರತವೇ ಅಚ್ಚರಿಯಿಂದ ನೋಡುವಂತಹ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ಅವರ ಮುಂದಿನ ಸಿನಿಮಾ ಬಗ್ಗೆ ಈಗಲೇ ಕುತೂಹಲ ಮೂಡಿದೆ. ಅದರಲ್ಲಿಯೂ ಮಹೇಶ್ ಬಾಬು ಅಭಿಮಾನಿಗಳಿಗೆ ಇದು ರೋಮಾಂಚಕ ಸುದ್ದಿ.
ಅಲ್ಲು ಅರ್ಜುನ್ ಹಾದಿ ಹಿಡಿದ ಮಹೇಶ್ ಬಾಬು: ಹೊಸ ಸಾಹಸಕ್ಕೆ ಕೈ ಹಾಕಿದ ಸೂಪರ್ ಸ್ಟಾರ್
ಆರ್ಆರ್ಆರ್ ಹೈದರಾಬಾದ್ಗೆ ಶಿಫ್ಟ್
ಸದ್ಯಕ್ಕೆ ರಾಜಮೌಳಿ, ಆರ್ಆರ್ಆರ್ ಚಿತ್ರದ ಕಾರ್ಯದಲ್ಲಿ ಬಿಜಿಯಾಗಿದ್ದಾರೆ. ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನಟಿಸಿರುವ ಐತಿಹಾಸಿಕ ಚಿತ್ರದ ಚಿತ್ರೀಕರಣಕ್ಕೆ ಕೊರೊನಾ ವೈರಸ್ ಲಾಕ್ಡೌನ್ ಅಡ್ಡಿಯಾಗಿದೆ. ಪುಣೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಚಿತ್ರತಂಡ, ಈಗ ಉಳಿದಿರುವ ಭಾಗವನ್ನು ಹೈದರಾಬಾದ್ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದೆ.
ಮಹೇಶ್ ಬಾಬು ಕೈಯಲ್ಲಿ ಎರಡು ಸಿನಿಮಾ
ಇನ್ನೊಂದೆಡೆ ಮಹೇಶ್ ಬಾಬು 'ಶ್ರೀಮಂತುಡು' ಚಿತ್ರದ ಖ್ಯಾತಿಯ ನಿರ್ದೇಶಕ ಕೊರಟಲಾ ಶಿವ ಜತೆಗೆ ಮತ್ತೊಂದು ಮನರಂಜನಾ ಪ್ರಧಾನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಜತೆಗೆ ಪರಶುರಾಮ್ ನಿರ್ದೇಶನದ ಇನ್ನೂ ಹೆಸರಿಡದ ಮತ್ತೊಂದು ಚಿತ್ರ ಲಾಕ್ಡೌನ್ ಮುಗಿದ ಬಳಿಕ ಚಿತ್ರೀಕರಣ ಆರಂಭಿಸಲಿದೆ.