Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇರೆಯವರ ಜೀವನ ಕೆದಕುವ ರಾಮ್ಗೋಪಾಲ್ ವರ್ಮಾ ಜೀವನದ ಬಗ್ಗೆ ಸಿನಿಮಾ!
ಒಂದು ಕಾಲದ ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಪ್ರಸ್ತುತ ಕೇವಲ ಬಿ ಗ್ರೇಡ್ ಸಿನಿಮಾಗಳ ನಿರ್ದೇಶಕರಾಗಿಬಿಟ್ಟಿದ್ದಾರೆ.
Recommended Video
ನಾಯಕಿಯ ಗ್ಲಾಮರ್ ತೋರಿಸಿ ಸಿನಿಮಾ ಮಾಡಿಬಿಡುವ ರಾಮ್ ಗೋಪಾಲ್ ವರ್ಮಾ ಅದರ ಜೊತೆಗೆ ಆಗೊಮ್ಮೆ ಈಗೊಮ್ಮೆ ಪ್ರಸಿದ್ಧ ವ್ಯಕ್ತಿಗಳ ಜೀವನದ ಬಗ್ಗೆ ವಿವಾದಾತ್ಮಕ ಸಿನಿಮಾಗಳನ್ನು ಸಹ ನಿರ್ದೇಶಿಸುತ್ತಾರೆ. ಇದು ಅವರಿಗೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಸಿನಿಮಾ ಟ್ರೇಲರ್ ನೋಡುವುದಕ್ಕೂ ದುಡ್ಡು ಪಾವತಿಸಿ: ರಾಮ್ ಗೋಪಾಲ್ ವರ್ಮಾ ಹೊಸ ತಂತ್ರ
ಆದರೆ ಹೀಗೆ ಬೇರೆಯವರ ಜೀವನದ ಬಗ್ಗೆ ವಿವಾದಾತ್ಮಕ ಸಿನಿಮಾಗಳನ್ನು ಮಾಡುವ ರಾಮ್ ಗೋಪಾಲ್ ವರ್ಮಾ ಅವರ ಜೀವನದ ಬಗ್ಗೆಯೇ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾದಲ್ಲಿ ರಾಮ್ ಗೋಪಾಲ್ ವರ್ಮಾ ಅನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬುದು ಪೋಸ್ಟರ್ನಿಂದಲೇ ಗೊತ್ತಾಗುತ್ತಿದೆ.
ಪವನ್ ಕಲ್ಯಾಣ್ ಬಗ್ಗೆ ಸಿನಿಮಾ
ಖ್ಯಾತ ನಟ ಪವನ್ ಕಲ್ಯಾಣ್ ಅವರ ಜೀವನದ ಬಗ್ಗೆ ಸಿನಿಮಾ ನಿರ್ದೇಶಿಸುತ್ತಿರುವ ರಾಮ್ ಗೋಪಾಲ್ ವರ್ಮಾ ಈಗಾಗಲೇ ಟ್ರೇಲರ್ ಸಹ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ನಲ್ಲಿಯೇ ಸಾಕಷ್ಟು ವಿವಾದಾತ್ಮಕ ಅಂಶಗಳು ಎದ್ದು ಕಾಣುತ್ತಿವೆ.
ರಾಮ್ ಗೋಪಾಲ್ ವರ್ಮಾ ಬಗ್ಗೆ ಸಿನಿಮಾ
ಆದರೆ ಇದಕ್ಕೆ ವಿರುದ್ಧವಾಗಿ ಈಗ ರಾಮ್ಗೋಪಾಲ್ ವರ್ಮಾ ಬಗ್ಗೆಯೇ ಸಿನಿಮಾ ನಿರ್ದೇಶಿಸಲಾಗುತ್ತಿದ್ದು, ಇದಕ್ಕೆ 'ಪರಾನ್ನ ಜೀವಿ' ಎಂದು ಹೆಸರಿಡಲಾಗಿದೆ. ಸಿನಿಮಾದ ಹೆಸರಿನ ಅರ್ಥ ಪರಾವಲಂಬಿ ಎಂದು.
ಕೋಟಿ-ಕೋಟಿ ಗಳಿಸಿದ ರಾಮ್ ಗೋಪಾಲ್ ವರ್ಮಾ ನಾಯಕಿಗೆ ಕೊಟ್ಟಿದ್ದು ಇಷ್ಟೇ ಹಣ
ವರ್ಮಾ ಬಗ್ಗೆ ಹಾಡೊಂದು ಬಿಡುಗಡೆ
ಈಗಾಗಲೇ ಸಿನಿಮಾದ ಬಗ್ಗೆ ಹಾಡೊಂದನ್ನು ಬಿಡುಗಡೆ ಮಾಡಲಾಗಿದ್ದು, 'ಸತ್ತವರನ್ನೂ ಬಿಡದ, ಬದುಕಿರುವವರನ್ನು ಮುಕ್ಕುವ ಪರಾವಲಂಬಿ ಜೀವಿ ಆರ್ಜಿವಿ', 'ತಂಗಿ, ತಾಯಿ ವ್ಯತ್ಯಾಸ ಗೊತ್ತಿಲ್ಲ' ಎಂದು ರಾಮ್ ಗೋಪಾಲ್ ವರ್ಮಾ ಬಗ್ಗೆ ಹಾಡಿನಲ್ಲಿ ತೆಗಳಲಾಗಿದೆ.
ಪವನ್ ಕಲ್ಯಾಣ್ ಅಭಿಮಾನಿಯಿಂದ ನಿರ್ದೇಶನ
ಪವನ್ ಕಲ್ಯಾಣ್ ಅಭಿಮಾನಿ ಆಗಿರುವ ನೂತನ್ ನಾಯ್ಡು ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ವಿವಾದಗಳಿಂದಲೇ ಖ್ಯಾತಿ ಗಳಿಸಿರುವ ಶ್ರೀ ರೆಡ್ಡಿ ಅವರನ್ನು ಕೇಳಿಲಾಗಿತ್ತು, ಆದರೆ ಅವರು ನಟಿಸುವುದಿಲ್ಲವೆಂದಿದ್ದಾರೆ.
ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಮಾಡಿದ ರಾಮ್ ಗೋಪಾಲ್ ವರ್ಮಾ