Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಲಿಗೆ ಹಿಡಿತದಲ್ಲಿಟ್ಟಿಕೊ, ಕ್ಷಮೆ ಕೇಳು: ಬಾಲಕೃಷ್ಣಗೆ ಚಿರಂಜೀವಿ ಸಹೋದರ ಎಚ್ಚರಿಕೆ
ಕೊರೊನಾ ಪರಿಣಾಮದಿಂದ ಈಗಾಗಲೇ ಕಂಗೆಟ್ಟಿರುವ ತೆಲುಗು ಚಿತ್ರರಂಗ, ಚಿತ್ರೋದ್ಯಮ ಪುನರ್ಸ್ಥಾಪಿಸುವತ್ತ ಗಮನ ಹರಿಸುವ ಬದಲಿಗೆ ಕ್ಷುಲ್ಲಕ ಜಗಳಲ್ಲಿ ತೊಡಗಿದೆ ಎಂದೆನಿಸುತ್ತಿದೆ.
Recommended Video
ಬಾಲಕೃಷ್ಣ ಹೇಳಿಕೆಯಿಂದ ಎದ್ದ ವಿವಾದ ಈಗ ಚಿರಂಜೀವಿ ಕುಟುಂಬ ವರ್ಸಸ್ ಎನ್ಟಿಆರ್ ಕುಟುಂಬ ಎಂಬಂತಾಗುವತ್ತ ಸಾಗುತ್ತಿದೆ.
ಕಾಂಡೋಮ್ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ
ಕೊರೊನಾ ಪರಿಣಾಮದಿಂದಾಗಿ ತತ್ತರಿಸಿರುವ ತೆಲುಗು ಚಿತ್ರೋದ್ಯಮದ ಬಗ್ಗೆ ಚರ್ಚಿಸಲೆಂದು ಚಿರಂಜೀವಿ ಮನೆಯಲ್ಲಿ ತೆಲುಗು ಸಿನಿ ಗಣ್ಯರು ಸಭೆ ಸೇರಿದ್ದರು. ಈ ಸಭೆಗೆ ನನ್ನನ್ನು ಕರೆದಿರಲಿಲ್ಲ, ನನಗೆ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಬಾಲಕೃಷ್ಣ ಹೇಳಿದ್ದರು. ಅಷ್ಟೆ ಅಲ್ಲದೆ, ಭೂಮಿ ಹಂಚಿಕೆ ಮಾಡಿಕೊಳ್ಳಲು ಅವರು ಸಿಎಂ ಭೇಟಿ ಮಾಡಿದ್ದರು ಎಂದಿದ್ದರು ಇದು ವಿವಾದಕ್ಕೆ ಕಾರಣವಾಗಿತ್ತು.
ಎಚ್ಚರಿಕೆ ನೀಡಿದ ಚಿರಂಜೀವಿ ಸಹೋದರ
ಆದರೆ ಇದೀಗ ನಟ ಬಾಲಕೃಷ್ಣಗೆ ಚಿರಂಜೀವಿ ಸಹೋದರ ನಾಗಬಾಬು ಎದುರುತ್ತರ ನೀಡಿದ್ದು, ಬಾಲಕೃಷ್ಣ ನಾಲಿಗೆ ಬಿಗಿಹಿಡಿದು ಮಾತನಾಡಬೇಕು, ಕೂಡಲೇ ಬಾಲಕೃಷ್ಣ ಕ್ಷಮೆ ಕೋರಲಿ, ಇಲ್ಲವಾದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ' ಎಂದು ರೌಡಿ ಭಾಷೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
'ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ'
'ಸಿಎಂ ಜೊತೆ ಸಭೆಗೆ ಬಾಲಕೃಷ್ಣ ಅವರನ್ನು ಕರೆಯದಿರುವುದನ್ನು ನಾನು ಸಮರ್ಥಿಸುವುದಿಲ್ಲ, ಆದರೆ ಭೂಮಿ ಹಂಚಿಕೊಳ್ಳಲು ಸಭೆ ನಡೆಸಿದ್ದಾರೆ ಎಂಬ ಬಾಲಕೃಷ್ಣ ಮಾತು ಸರಿಯಲ್ಲ. ಬಾಲಕೃಷ್ಣ ಬಾಯಿಗೆ ಬಂದಹಾಗೆ ಮಾತನಾಡಬಾರದು' ಎಂದಿದ್ದಾರೆ ನಾಗಬಾಬು.
ತೆಲುಗು ಚಿತ್ರರಂಗದ ನಾಯಕ ಪಟ್ಟ ಚಿರಂಜೀವಿಗೆ: ಬಾಲಕೃಷ್ಣ ಗರಂ
'ಸಿನಿಮಾ ರಂಗವನ್ನು ಅವಮಾನಿಸಿದ್ದಾರೆ ಬಾಲಕೃಷ್ಣ'
ಈ ಕೂಡಲೇ ಬಾಲಕೃಷ್ಣ ತಮ್ಮ ಮಾತನ್ನು ಹಿಂದೆ ಪಡೆಯಬೇಕು. ಭೂಮಿ ಹಂಚಿಕೊಳ್ಳಲು ಸಭೆ ನಡೆಸಿದ್ದಾರೆ ಎನ್ನುವ ಮೂಲಕ ಅವರು ಇಡೀಯ ಸಿನಿಮಾ ರಂಗವನ್ನು ಅವಮಾನಿಸಿದ್ದಾರೆ. ಹೀಗೆ ಸುಖಾ ಸುಮ್ಮನೆ ನಾಲಗೆ ಹರಿಬಿಡುವುದು ಸರಿಯಲ್ಲ ಎಂದು ನಾಗಬಾಬು ಎಚ್ಚರಿಕೆ ನೀಡಿದ್ದಾರೆ.
ಚಿರಂಜೀವಿ ಮನೆಯಲ್ಲಿ ಸಭೆ ವಿವಾದದ ಮೂಲ
ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಭವಿಷ್ಯದ ಬಗ್ಗೆ ಚಿರಂಜೀವಿ ಅವರ ಮನೆಯಲ್ಲಿ ಚಿತ್ರರಂಗದ ಗಣ್ಯರು ಮತ್ತು ಸಚಿವರುಗಳು ಸಭೆ ನಡೆಸಿದರು. ನಂತರ ಇದೇ ನಿಯೋಗವು ತೆಲಂಗಾಣ ಸಿಎಂ ಮತ್ತು ಆಂಧ್ರಪ್ರದೇಶ ಸಿಎಂ ಅವರುಗಳನ್ನು ಭೇಟಿ ಮಾಡಿದರು. ಇದಕ್ಕೆ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ ಎಂದು ಬಾಲಕೃಷ್ಣ ಸಿಟ್ಟಾಗಿದ್ದಾರೆ.