Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್: ಛೀ.. ಎಂದ ನೆಟ್ಟಿಗರು
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾವು 200 ಕೋಟಿ ಗಳಿಕೆ ದಾಟಿದೆ.
ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿರುವ ಬೆನ್ನಲ್ಲೆ ವಿವಾದವೊಂದು ಬೆನ್ನು ಹತ್ತಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಹಾಡಿನ ದೃಶ್ಯವೊಂದರಲ್ಲಿ ನಾಯಕಿ ಕೀರ್ತಿ ಸುರೇಶ್ ಅನ್ನು ಮುಟ್ಟಿರುವ ರೀತಿ ವಿವಾದಕ್ಕೆ ಕಾರಣವಾಗಿದೆ.
ದೃಶ್ಯವೊಂದರಲ್ಲಿ ನಾಯಕ ನಟ ಮಹೇಶ್ ಬಾಬು ಬಲವಂತದಿಂದ ಅಥವಾ ಬೆದರಿಕೆ ಒಡ್ಡಿ ನಾಯಕಿ ಕೀರ್ತಿ ಸುರೇಶ್ ಅನ್ನು ತನ್ನ ಪಕ್ಕ ಮಲಗಿಕೊಳ್ಳುವಂತೆ ಮಾಡುತ್ತಾನೆ. ನಂತರ ತನ್ನ ಕಾಲನ್ನು ಆಕೆಯ ಮೇಲೆ ಹಾಕುತ್ತಾನೆ. ಈ ದೃಶ್ಯ ಚರ್ಚೆಗೆ ಕಾರಣವಾಗಿದೆ. ಈ ದೃಶ್ಯ ವಲ್ಗರ್ ಆಗಿದೆಯೆಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ ಈಗ 'ಸರ್ಕಾರು ವಾರಿ ಪಾಟ' ಸಿನಿಮಾದ ನಿರ್ದೇಶಕ ಪರಶುರಾಮ್, ಆ ದೃಶ್ಯದ ಬಗ್ಗೆ ನೀಡಿರುವ ಹೇಳಿಕೆ ವಿವಾದವನ್ನು ಇನ್ನಷ್ಟು ದೊಡ್ಡದಾಗಿಸಿದೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತಿರಿಸಿರುವ ನಿರ್ದೇಶಕ ಪರಶುರಾಮ್, ''ಆ ದೃಶ್ಯದಲ್ಲಿ ಏನು ತಪ್ಪಿದೆ. ಮಗುವೊಬ್ಬ ತನ್ನ ತಾಯಿಯೊಂದಿಗೆ ಮಲಗಲು ಆಸೆ ಪಟ್ಟಂತೆ ಅಲ್ಲಿ ನಾಯಕ, ನಾಯಕಿಯ ಪಕ್ಕ ಮಲಗಿದ್ದಾನೆ'' ಎಂದಿದ್ದಾರೆ. ಪರಶುರಾಮ್ರ ಈ ಅಪ್ರಬುದ್ಧ ಹೇಳಿಕೆಯನ್ನು ನೆಟ್ಟಿಗರು ತೀಕ್ಷ್ಣವಾಗಿ ಖಂಡಿಸಿದ್ದಾರೆ.
''ಆ ದೃಶ್ಯ ಅಸಹ್ಯಕರವಾಗಿ ಇದ್ದಿದ್ದರೆ ಮಹೇಶ್ ಬಾಬು ಅವರೇ ಆ ದೃಶ್ಯದಲ್ಲಿ ನಟಿಸಲು ಒಪ್ಪುತ್ತಿರಲಿಲ್ಲ. ಅಲ್ಲದೆ ಆ ದೃಶ್ಯ ತೆಗೆದು ಹಾಕುವಂತೆ ನನಗೆ ಹೇಳುತ್ತಿದ್ದರು. ಆದರೆ ಯಾವುದೇ ಸಮಸ್ಯೆ ಇಲ್ಲದೆ ಮಹೇಶ್ ಬಾಬು ಹಾಗೂ ನಟಿ ಕೀರ್ತಿ ಸುರೇಶ್ ಇಬ್ಬರೂ ಆ ದೃಶ್ಯದಲ್ಲಿ ನಟಿಸಿದ್ದಾರೆ'' ಎಂದಿದ್ದಾರೆ ಪರಶುರಾಮ್.
ಆದರೆ ನೆಟ್ಟಿಜನರು, ನಿರ್ದೇಶಕ ಪರಶುರಾಮ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ''ಕೆಟ್ಟ ದೃಶ್ಯವನ್ನು ತೆಗೆದಿರುವುದಲ್ಲದೆ, ಅದನ್ನು ಕೆಟ್ಟ ರೀತಿಯಲ್ಲಿ ಸಮಜಾಯಿಷಿ ಕೊಡುತ್ತಿದ್ದೀರಿ. ಪ್ರೇಯಸಿಗೂ ತಾಯಿಗೂ ಹೋಲಿಸುವುದನ್ನು ಬಿಡಿ'' ಎಂದಿದ್ದಾರೆ. ಇನ್ನು ಕೆಲವರು ನಾಯಕಿಯನ್ನು ಭೋಗದ ವಸ್ತುಗಳನ್ನಾಗಿ ಸಿನಿಮಾಗಳಲ್ಲಿ ತೋರಿಸಲಾಗುತ್ತಿದೆ, ನಾಯಕ ಮಾಡುವ ಎಲ್ಲ ಅನಾಚರಕ್ಕೂ 'ಹೀರೋಯಿಸಂ' ಬ್ರ್ಯಾಂಡ್ ಮಾಡಲಾಗುತ್ತಿದೆ. ಕೆಲವು ಸಿನಿಮಾಗಳಲ್ಲಿ ವಿಲನ್ಗಳಿಗಿಂತಲೂ ಕೆಟ್ಟದಾಗಿ ನಾಯಕರು, ನಾಯಕಿಯರೊಟ್ಟಿಗೆ ನಡೆದುಕೊಂಡಿದ್ದಾರೆ'' ಎಂದು ಕೆಲವು ಉದಾಹರಣೆಗಳನ್ನೂ ಸಹ ನೆಟ್ಟಿಗರು ನೀಡಿದ್ದಾರೆ.
'ಸರ್ಕಾರು ವಾರಿ ಪಾಟ' ಸಿನಿಮಾ ಬ್ಯಾಂಕ್ ವ್ಯವಸ್ಥೆ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಎದುರು ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಟಿಸಿದ್ದಾರೆ. ಇಬ್ಬರ ಲವ್ ಟ್ರ್ಯಾಕ್ ಹಾಗೂ ಕೆಮಿಸ್ಟ್ರಿ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.