Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಕೀರ್ತಿ ಸುರೇಶ್ ಕಾಣೆಯಾಗಿದ್ದಾರೆ! ತಕ್ಷಣವೇ ಸ್ಪಂದಿಸಿದ ಹೈದರಾಬಾದ್ ಪೊಲೀಸ್
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕಾಣೆಯಾಗಿದ್ದಾರೆ! ಹೀಗೆಂದು ತೆಲುಗಿನ ಖ್ಯಾತ ನಟ ಆತಂಕ ವ್ಯಕ್ತಪಡಿಸಿದ್ದಾರೆ.
ನಟ ನಿತೀನ್ ಅವರು ಟ್ವೀಟ್ ಮಾಡಿ, 'ಕಾಣೆಯಾಗಿದ್ದಾರೆ, ಪ್ರೀತಿಯ ಅನು, ನೀನು ಎಲ್ಲಿದ್ದರೂ 'ರಂಗ್ ದೇ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಬೇಕು. ಇಂತಿ ನಿನ್ನ ಅರ್ಜುನ್' ಎಂದಿರುವ ನಿತಿನ್. ಕೀರ್ತಿ ಸುರೇಶ್ ಅವರ ಹಳೆಯ ಚಿತ್ರವೊಂದನ್ನು ಪ್ರಕಟಿಸಿದ್ದಾರೆ.
ನಟ ನಿತಿನ್ ಅವರ ಈ ಕಾಲೆಳೆಯುವ ಟ್ವೀಟ್ಗೆ ಸ್ಪಂದಿಸಿರುವ ಹೈದರಾಬಾದ್ ಪೊಲೀಸರು, 'ಚಿಂತೆ ಮಾಡಬೇಡಿ ನಟ ನಿತಿನ್. ಈ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ' ಎಂದಿದ್ದಾರೆ.
ನಟ ನಿತಿನ್ ಹಾಗೂ ಕೀರ್ತಿ ಸುರೇಶ್ ಜೊತೆಯಾಗಿ ನಟಿಸಿರುವ ತೆಲುಗು ಸಿನಿಮಾ 'ರಂಗ್ ದೇ' ಮಾರ್ಚ್ 26 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭವಾಗಲಿದ್ದು, ಪ್ರಚಾರ ಕಾರ್ಯದ ಆರಂಭದಲ್ಲಿ ಕೀರ್ತಿ ಸುರೇಶ್ ಗೈರಾಗಿದ್ದರು. ಹಾಗಾಗಿ ನಟ ನಿತಿನ್ ಅವರು ಈ ರೀತಿ ತಮಾಷೆಯ ಪೋಸ್ಟ್ ಹಾಕಿದ್ದಾರೆ.
ಆದರೆ ನಿತಿನ್ ಅವರು ಪೋಸ್ಟ್ ಹಾಕಿದ ನಂತರ ಹೈದರಾಬಾದ್ ನಲ್ಲಿ ನಡೆದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ತ್ರಿವಿಕ್ರಿಮ್ ಶ್ರೀನಿವಾಸ್ ಅತಿಥಿಯಾಗಿ ಭಾಗವಹಿಸಿದ್ದರು.
ನಟಿ ಕೀರ್ತಿ ಸುರೇಶ್ ನಟನೆಯ ರಂಗ್ ದೇ, ಮರಕ್ಕರ್, ಗುಡ್ ಲಕ್ ಸಖಿ, ರೆಂಡು ಜಡಲ ಸೀತಾ, ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಸರ್ಕಾರು ವಾರಿ ಪಾಠ, ಅನ್ನಾತೆ, ವಾಶಿ, ಸಾನಿ ಕಾಯಿದಂ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.
ಇನ್ನು ನಟ ನಿತಿನ್ ಅವರು ರಂಗ್ ದೇ ಸಿನಿಮಾ ಬಿಡುಗಡೆ ಬಳಿಕ ಮೆರ್ಲಪಾಕ ಗಾಂಧಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ.
Recommended Video
'ರಂಗ್ ದೇ' ಸಿನಿಮಾವು ಮಾರ್ಚ್ 26 ರಂದು ಬಿಡುಗಡೆ ಆಗಲಿದ್ದು, ಸಿನಿಮಾವನ್ನು ವೆಂಕಿ ಅಟ್ಲೂರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಮಾಡಿರುವುದು ಸೂರ್ಯದೇವರ ನಾಗವಂಶಿ.