Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಯ್ಯಪ್ಪನುಂ ಕೋಶಿಯುಂ' ರೀಮೇಕ್ಗೆ ಪವನ್ ಕಲ್ಯಾಣ್ ಪಡೆಯುತ್ತಿದ್ದಾರೆ ಭಾರಿ ಮೊತ್ತ
ಹಿಂದಿಯ ಪಿಂಕ್ ಸಿನಿಮಾ ರೀಮೇಕ್ 'ವಕೀಲ್ ಸಾಬ್' ನಲ್ಲಿ ನಟಿಸುತ್ತಿರುವ ಪವನ್ ಕಲ್ಯಾಣ್, ಅದರ ನಂತರ ಮತ್ತೊಂದು ರೀಮೇಕ್ ಸಿನಿಮಾಕ್ಕೆ ಓಕೆ ಹೇಳಿದ್ದಾರೆ.
ಮಲಯಾಳಂ ನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಅನ್ನು ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಮಲಯಾಳಂ ನಲ್ಲಿ ಬಿಜು ಮೆನನ್ ನಟಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ.
ವಿಮರ್ಶಿಕರಿಂದಲೂ ಶಭಾಷ್ ಎನಿಸಿಕೊಂಡು ಬಾಕ್ಸ್ಆಫೀಸ್ನಲ್ಲಿಯೂ ಸಖತ್ ಗಳಿಕೆ ಮಾಡಿದ 'ಅಯ್ಯಪ್ಪನುಂ ಕೋಶಿಯುಂ' ತೆಲುಗಿನಲ್ಲಿಯೂ ಪಕ್ಕಾ ಹಿಟ್ ಎನ್ನಲಾಗುತ್ತಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಬಿಜು ಮೆನನ್ ನಟಿಸಿದ್ದ ಪೊಲೀಸ್ ಅಧಿಕಾರಿ ಪಾತ್ರ ಪವನ್ ಕಲ್ಯಾಣ್ ಗೆ 'ಟೈಲರ್ ಮೇಡ್' ಪಾತ್ರದಂತಿದೆ. ಪವನ್ ಎದುರು ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದಾರೆ.
ಭಾರಿ ಸಂಭಾವನೆ ಪಡೆಯುತ್ತಿರುವ ಪವನ್ ಕಲ್ಯಾಣ್
ಇನ್ನು ಈ ಸಿನಿಮಾಕ್ಕೆ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಪವನ್ ಕಲ್ಯಾಣ್. ಈ ಸಿನಿಮಾಕ್ಕಾಗಿ ಬರೋಬ್ಬರಿ 50 ಕೋಟಿ ರುಪಾಯಿ ಸಂಭಾವನೆ ನೀಡಲಾಗುತ್ತಿದೆ ಪವನ್ ಕಲ್ಯಾಣ್ ಗೆ. ಒಪ್ಪಂದಕ್ಕೆ ಈಗಾಗಲೇ ಸಹಿ ಬಿದ್ದಿದೆ ಎಂದು ವರದಿ ಮಾಡಿವೆ ತೆಲುಗು ಪತ್ರಿಕೆಗಳು.
ರಾಣಾ ದಗ್ಗುಬಾಟಿಗೆ ಎಷ್ಟು ಸಂಭಾವನೆ
ಇನ್ನು ಪವನ್ ಕಲ್ಯಾಣ್ ಅಷ್ಟೆ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ರಾಣಾ ದಗ್ಗುಬಾಟಿಗೆ ಈ ಸಿನಿಮಾಕ್ಕೆ 5 ಕೋಟಿ ಹಣ ಸಿಗುತ್ತಿದೆಯಂತೆ. ರಾಣಾ ದಗ್ಗುಬಾಟಿಗೆ ಈ ಸಂಭಾವನೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಆದರೆ ನಟ ಪವನ್ ರ ಸ್ಟಾರ್ ವ್ಯಾಲ್ಯೂ ರಾಣಾ ಗೆ ಹೋಲಿಸಿದರೆ ಬಹಳವಿದೆ.
30 ದಿನದ ಡೇಟ್ಸ್ ಅಷ್ಟೇ ನೀಡಲಾಗಿದೆ
ಅಯ್ಯಪ್ಪನುಂ ಕೋಶಿಯುಂ ರೀಮೇಕ್ಗೆ ಪವನ್ ಕಲ್ಯಾಣ್ ನೀಡಿರುವುದು ಕೇವಲ 30 ದಿವಸದ ಡೇಟ್ಸ್ ಅಷ್ಟೇ. ಮೂವತ್ತು ದಿನಗಳ ಒಳಗಾಗಿ ತಮ್ಮ ಭಾಗದ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಡುವುದಾಗಿ ಹೇಳಿದ್ದಾರೆ ಪವನ್. ರಾಣಾ ದಗ್ಗುಬಾಟಿ ಸಹ 30 ದಿನದ ಡೇಟ್ಸ್ ಅಷ್ಟೇ ಕೊಟ್ಟಿದ್ದಾರಂತೆ.
Recommended Video
ಜನವರಿಯಿಂದ ಚಿತ್ರೀಕರಣ ಪ್ರಾರಂಭ
ಜನವರಿಯಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸಿನಿಮಾದ ನಿರ್ದೇಶನವನ್ನು ಸಾಗರ್ ಕೆ ಚಂದ್ರ ಮಾಡಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಿತಾರಾ ಎಂಟರ್ಟೈನ್ಮೆಂಟ್ ಸಿನಿಮಾದ ಮುಹೂರ್ತ ಎರಡು ದಿನದ ಹಿಂದಷ್ಟೆ ಮುಗಿದಿದ್ದು, ನಾಯಕಿಯರ ಆಯ್ಕೆ ಇನ್ನಷ್ಟೆ ಆಗಬೇಕಿದೆ.