Don't Miss!
- News ಹಳೇ ಹುಲಿ ಪಿಸಿ ಮೋಹನ್ ಎದುರು ಮನ್ಸೂರ್ ಅಲಿ ಖಾನ್ ಕಣಕ್ಕೆ; ಮತ್ತೊಮ್ಮೆ ಇತಿಹಾಸ ಬರೆಯುತ್ತಾರಾ ಬಿಜೆಪಿ ಕಲಿ?
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನಿಯರ್ ಎನ್ಟಿಆರ್ ಬಗ್ಗೆ ನೀಚವಾಗಿ ಮಾತನಾಡಿದ್ದರು ಅನುರಾಗ್ ಕಶ್ಯಪ್!
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮೀಟೂ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ಈಗ ಜೂನಿಯರ್ ಎನ್ ಟಿ ಆರ್ ಹೆಸರು ಎಳೆದು ತಂದಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದರು, ದೈಹಿಕವಾಗಿ ನನ್ನ ಬಳಸಿಕೊಳ್ಳಲು ಒತ್ತಡ ಹಾಕಿದ್ದರು ಎಂದು ಪಾಯಲ್ ಘೋಷ್ ದೂರು ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಟ್ವಿಟ್ಟರ್ನಲ್ಲಿ ಮಾತನಾಡಿರುವ ಪಾಯಲ್, ಜೂನಿಯರ್ ಎನ್ಟಿಆರ್ ಬಗ್ಗೆ ಕಶ್ಯಪ್ ಬಹಳ ನೀಚವಾಗಿ ಮಾಡಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....
ಲೈಂಗಿಕ ಕಿರುಕುಳ ಪ್ರಕರಣ: ಎಲ್ಲಾ ಗೊತ್ತಿದ್ದರೂ ಇರ್ಫಾನ್ ಪಠಾಣ್ ಮೌನವಾಗಿರೋದು ಯಾಕೆ ಎಂದ ಪಾಯಲ್
ಎನ್ಟಿಆರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು
''ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡಿದ್ದ ಅನುರಾಗ್ ಕಶ್ಯಪ್, ಎನ್ಟಿಆರ್ ಕುರಿತು ನೀಚವಾಗಿ ಮಾತನಾಡಿದ್ದರು. ಎನ್ಟಿಆರ್ ಸಹ ನಿನ್ನನ್ನು ಬಳಸಿಕೊಂಡಿರ್ತಾರೆ, ನೀನು ಸತ್ಯವನ್ ಸಾವಿತ್ರಿ ರೀತಿ ಆಡಬೇಡ'' ಎಂದು ಕಶ್ಯಪ್ ಹೇಳಿದ್ದರಂತೆ.
ಎನ್ಟಿಆರ್ ಜೊತೆ ನಟಿಸಿದ್ದ ಪಾಯಲ್
2011ರಲ್ಲಿ ತೆರೆಕಂಡಿದ್ದ 'ಊಸರವಳ್ಳಿ' ಚಿತ್ರದಲ್ಲಿ ಜೂನಿಯರ್ ಎನ್ ಟಿ ಆರ್ ಜೊತೆ ಪಾಯಲ್ ಘೋಷ್ ನಟಿಸಿದ್ದರು. ತಮನ್ನಾ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಪಾಯಲ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಹಿನ್ನೆಲೆ ಕಶ್ಯಪ್ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಪಾಯಲ್ ಹೇಳಿಕೊಂಡಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ನಟಿ ಪಾಯಲ್
ನಾನು ಕರೆದರೆ ಎಲ್ಲರು ಬರ್ತಾರೆ
''ನನ್ನ ಜೊತೆ ಸಿನಿಮಾ ಮಾಡಿದ ಪ್ರತಿಯೊಬ್ಬ ಹೀರೋಯಿನ್ ಸಹ ನಾನು ಕರೆದರೆ ಬರ್ತಾರೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದರು. ಆದ್ರೆ, ಪ್ರಪಂಚಕ್ಕೆ ನಾನೊಬ್ಬಳೆ ಹೇಳಲು ಬಯಸಿದ್ದೇನೆ ಏಕೆ'' ಎಂದು ಪ್ರಶ್ನಿಸಿಕೊಂಡಿದ್ದಾರೆ.
ಎನ್ಟಿಆರ್ ಬಹಳ ಒಳ್ಳೆಯ ವ್ಯಕ್ತಿ
ಅನುರಾಗ್ ಕಶ್ಯಪ್ ಅವರು ಎನ್ಟಿಆರ್ ಬಗ್ಗೆ ಬಹಳ ಕೆಟ್ಟದಾಗಿ ಹೇಳಿದ್ದರು. ಆದ್ರೆ, ನಾನು ಕಂಡಂತೆ ಎನ್ಟಿಆರ್ ಬಹಳ ಒಳ್ಳೆಯ ವ್ಯಕ್ತಿ. ಯಾವ ಸಮಯದಲ್ಲೂ ಅವರು ಕೆಟ್ಟದಾಗಿ ನಡೆದುಕೊಂಡಿಲ್ಲ'' ಎಂದು ಪಾಯಲ್ ಘೋಷ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.