Don't Miss!
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Sports CSK vs LSG IPL 2024: ಚೆನ್ನೈನ ಚೆಪಾಕ್ ಕೋಟೆಯನ್ನು ಭೇದಿಸುವುದೇ ಲಕ್ನೋ?; ಸಂಭಾವ್ಯ ಆಡುವ 11ರ ಬಳಗ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಣ್ಣ ಪಾತ್ರಕ್ಕೆ ದೊಡ್ಡ ಸಂಭಾವನೆ ಕೇಳಿದ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ ತೆಲುಗಿನ ಅತ್ಯಂತ ಬ್ಯುಸಿ ನಟಿ. ದೊಡ್ಡ-ದೊಡ್ಡ ಬ್ಯಾನರ್ಗಳಲ್ಲಿ, ದೊಡ್ಡ-ದೊಡ್ಡ ಸ್ಟಾರ್ ನಟರೊಂದಿಗೆ ನಟಿಸುತ್ತಿರುವ ಪೂಜಾ ಹೆಗ್ಡೆ ಪ್ರಸ್ತುತ ತೆಲುಗಿನ ನಂಬರ್ 1 ನಟಿ ಸಹ ಹೌದು.
'ಅಲಾ ವೈಕುಂಟಪುರಂಲೋ' ಸಿನಿಮಾ ಹಿಟ್ ಆದ ಬಳಿಕ ತಮ್ಮ ಸಂಭಾವನೆ ಏರಿಸಿಕೊಂಡಿರುವ ಈ ನಟಿ ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯೂ ಹೌದು.
ಆದರೆ ಪೂಜಾ ಹೆಗ್ಡೆ ಸಣ್ಣ ಪಾತ್ರಕ್ಕೂ ದೊಡ್ಡ ಸಂಭಾವನೆಗಾಗಿ ಬೇಡಿಕೆ ಇಟ್ಟಿರುವುದು ನಿರ್ಮಾಪಕರಿಗೆ ತಲೆನೋವು ತಂದಿದೆ. ಈ ಬೇಡಿಕೆ ಇಟ್ಟಿರುವುದು ಬೇರೆ ಯಾವುದೋ ಸಿನಿಮಾಕ್ಕಲ್ಲ ಬದಲಿಗೆ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾಕ್ಕೆ.
ಸಣ್ಣ ಪಾತ್ರಕ್ಕೆ ದೊಡ್ಡ ಸಂಭಾವನೆ ಕೇಳುತ್ತಿರುವ ಪೂಜಾ?
'ಆಚಾರ್ಯ' ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆಯದ್ದು ಸಣ್ಣ ಪಾತ್ರವಿದೆ. ರಾಮ್ ಚರಣ್ ತೇಜ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಇದು ದೊಡ್ಡ ಪಾತ್ರವೇನಲ್ಲ, ಏಕೆಂದರೆ ಸಿನಿಮಾದ ನಾಯಕಿ ಬೇರೆಯೇ ಇದ್ದಾರೆ. ಆದರೆ ಈ ಸಣ್ಣ ಪಾತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿದ್ದಾರೆ ನಟಿ ಪೂಜಾ.
ಆಚಾರ್ಯ ಸಿನಿಮಾಕ್ಕೆ ಒಂದು ಕೋಟಿ?
ಪೂಜಾ ಹೆಗ್ಡೆ ತಮ್ಮ ಇತ್ತೀಚಿನ ಸಿನಿಮಾ 'ರಾಧೆ-ಶ್ಯಾಮ್' ಗಾಗಿ ಎರಡು ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ನಟಿಸಿದ್ದ ಈ ಸಿನಿಮಾದ ಚಿತ್ರೀಕರಣ ಪ್ಯಾರಿಸ್ನಲ್ಲಿ ನಡೆದಿತ್ತು. ಈಗ 'ಆಚಾರ್ಯ' ಸಿನಿಮಾಕ್ಕೆ ಒಂದು ಕೋಟಿ ಕೇಳಿದ್ದಾರೆ ಎನ್ನಲಾಗುತ್ತಿದೆ.
ಸೆಟ್ ಒಂದಕ್ಕೆ ಹಲವು ಕೋಟಿ ಖರ್ಚು
'ಆಚಾರ್ಯ' ಸಿನಿಮಾದ ನಿರ್ಮಾಣ ಮಾಡಿರುವುದು ರಾಮ್ ಚರಣ್ ತೇಜ ಜೊತೆಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಸಹ. ಈ ಸಿನಿಮಾದ ಮೇಲೆ ದೊಡ್ಡ ಬಂಡವಾಳ ಹೂಡಲಾಗಿದೆ. ಈ ಸಿನಿಮಾದ ಸೆಟ್ ಏಷ್ಯಾದಲ್ಲಿಯೇ ಅತಿ ದೊಡ್ಡ ಸಿನಿಮಾ ಸೆಟ್ ಆಗಿದೆ. ಸೆಟ್ ಒಂದಕ್ಕೆ ಹಲವು ಕೋಟಿಗಳನ್ನು ಖರ್ಚು ಮಾಡಲಾಗಿದೆ.
Recommended Video
ಕೊರಟಾಲ ಶಿವ ನಿರ್ದೇಶನ
ಚಿರಂಜೀವಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಾಯಕಿ ಆಗಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಸೋನು ಸೂದ್ ಸಹ ಸಿನಿಮಾದಲ್ಲಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ತಡವಾಗಿತ್ತು.