Don't Miss!
- News Voter Guide: ಮತದಾನ ಮಾಡುವ ಮುನ್ನ ಈ ಅಂಶಗಳ ಬಗ್ಗೆ ಗಮನವಿರಲಿ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಹಾಳು ಮಾಡಿದ್ದಾರೆ' ಎಂದ ನಟಿ
ಸಲ್ಮಾನ್ ಖಾನ್ ಅಭಿನಯದಲ್ಲಿ ತೆರೆಕಂಡಿರುವ 'ರಾಧೇ' ಸಿನಿಮಾ ಬಹಳ ಚೆನ್ನಾಗಿದೆ, ಸೂಪರ್ ಹಿಟ್ ಎಂದು ಅಭಿಮಾನಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಮರ್ಶಾತ್ಮಕವಾಗಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ನಡುವೆ ರಾಧೇ ಅತ್ಯಂತ ಕೆಟ್ಟ ಸಿನಿಮಾ, ಪ್ರಭುದೇವ ಅವರದ್ದು ಕೆಟ್ಟ ನಿರ್ದೇಶಕ ಎಂದು ನಟಿ ಶ್ರೀ ರೆಡ್ಡಿ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್ನಲ್ಲಿ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿರುವ ನಟಿ ಪ್ರಭುದೇವ ಕೆಲಸದ ಬಗ್ಗೆ ಟೀಕಿಸಿದ್ದಾರೆ.
ರಾಧೇ ಟ್ವಿಟ್ಟರ್ ವಿಮರ್ಶೆ: 'ಸೂಪರ್ ಹಿಟ್' ಎಂದು ಘೋಷಿಸಿದ ಅಭಿಮಾನಿಗಳು
''ರಾಧೇ ಸಿನಿಮಾ ಒಂದು ವಾಕ್ಯದ ವಿಮರ್ಶೆ, ಇತಿಹಾಸದಲ್ಲಿ ಇದೊಂದು ಕೆಟ್ಟ ಚಿತ್ರ. ಸಲ್ಮಾನ್ ಖಾನ್ ಅದ್ಭುತ ನಟ. ಆದರೆ, ಪ್ರಭುದೇವ ಸಿನಿಮಾ ಹಾಳು ಮಾಡಿದ್ದಾರೆ. ಕೆಟ್ಟ ನಿರ್ದೇಶನ, ಕೆಟ್ಟ ಕಥೆ, ಇದು ಕೇವಲ ಕಸ'' ಎಂದು ಹೀಯಾಳಿಸಿದ್ದಾರೆ.
ರಾಧೇ ಚಿತ್ರದ ಬಗ್ಗೆ ಶ್ರೀರೆಡ್ಡಿ ಮಾಡಿರುವ ಟ್ವೀಟ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, 'ಥ್ಯಾಂಕ್ಸ್ ಡಿಯರ್, ನೀನು ಇಷ್ಟು ಹೇಳಿದ್ಮೇಲೆ ನಾನು ಸಿನಿಮಾ ನೋಡಲ್ಲ' ಎಂದು ಓರ್ವ ವ್ಯಕ್ತಿ ಹೇಳಿದ್ದಾರೆ. 'ಸಿನಿಮಾ ಇನ್ನು ರಿಲೀಸ್ ಆಗೇ ಇಲ್ಲ ಅಷ್ಟು ಬೇಗ ರಿವ್ಯೂ ಕೊಡುತ್ತಿದ್ದಿಯಾ' ಎಂದು ಮತ್ತೊರ್ವ ವ್ಯಕ್ತಿ ಪ್ರಶ್ನಿಸಿದ್ದಾರೆ.
ಆಕೆ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ: ನಟಿಯ ಬಗ್ಗೆ ಸಂಸದ ಹೇಳಿಕೆ
ಪ್ರಭುದೇವ ನಿರ್ದೇಶನದ ರಾಧೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಣದೀಪ್ ಹೂಡಾ ಪ್ರಮುಖ ಖಳನಟನಾಗಿ ಅಭಿನಯಿಸಿದ್ದಾರೆ.
Recommended Video
ಇನ್ನು ನಟಿ ಶ್ರೀರೆಡ್ಡಿ ಅವರ ವಿರುದ್ಧ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ರಘುರಾಮ ಕೃಷ್ಣ ರಾಜು ಸಿಡಿದೆದಿದ್ದು, ' ನೀಲಿ ಚಿತ್ರಗಳಲ್ಲಿ ನಟಿಸುವ ನೀನು ಎಂಥವಳು ಎಂದು ಜನರಿಗೆ ಗೊತ್ತಿದೆ' ಎಂದು ವಾಗ್ದಾಳಿ ನಡೆಸಿದ್ದರು. ಅದಕ್ಕೂ ಮುಂಚೆ ರಘುರಾಮ ಕೃಷ್ಣ ರಾಜು ಅವರ ವಿರುದ್ಧ ಶ್ರೀರೆಡ್ಡಿ ವಿಡಿಯೋ ಪೋಸ್ಟ್ ಮಾಡಿ ನಿಂದಿಸಿದ್ದರು.