Don't Miss!
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿ ಬೆಂಬಲದೊಂದಿಗೆ ಚುನಾವಣೆಗೆ ಧುಮುಕಲಿರುವ ಪ್ರಕಾಶ್ ರೈ
ಆಂಧ್ರ, ತೆಲಂಗಾಣದಲ್ಲಿ ರಾಜಕೀಯವೂ ಸಹ ಸಿನಿಮಾ ಮಾದರಿಯಲ್ಲಿ ಬಹು ಸಿನಿಮೀಯ. ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ದೊಡ್ಡ ಅಂತರವೇನೂ ತೆಲುಗು ರಾಜ್ಯಗಳಲ್ಲಿ ಇಲ್ಲ.
ಇದೀಗ ತೆಲುಗು ಸಿನಿಮಾ ರಂಗದ ಪ್ರತಿಷ್ಠಿತ ಒಕ್ಕೂಟವಾದ 'ಮಾ' (MAA)ಗೆ ಚುನಾವಣೆಗಳು ಸಮೀಪಿಸುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೇರಲು ಹಲವರು ಹಲವು ವಿಧದ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ನಟ ಪ್ರಕಾಶ್ ರೈ 'ಮಾ' (Movie Artist Associations) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಪ್ರಕಾಶ್ ರೈಗೆ ಮೆಗಾಸ್ಟಾರ್ ಚಿರಂಜೀವಿ ಬೆಂಬಲವೂ ಇದೆ ಆ ಮೂಲಕ ಇಡೀಯ ಮೆಗಾಸ್ಟಾರ್ ಕುಟುಂಬದ ಬೆಂಬಲವನ್ನು ಪ್ರಕಾಶ್ ರೈ ಪಡೆದಿದ್ದಾರೆ.
ಪ್ರಕಾಶ್ ರೈಗೆ ಎದುರಾಗಿ ಹಿರಿಯ ನಟ ಮೋಹನ್ಬಾಬು ಪುತ್ರ ನಾಯಕ ನಟ ಮಂಚು ವಿಷ್ಣು ಸ್ಪರ್ಧಿಸುವುದು ಬಹುತೇಕ ಖಾಯಂ ಆಗಿದೆ. ಮಂಚು ವಿಷ್ಣು ಕೆಲ ದಿನದ ಹಿಂದಷ್ಟೆ ತಾವು 'ಮಾ'ನ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಮಂಚು ವಿಷ್ಣುಗೆ 'ಮಾ'ನ ಪ್ರಸ್ತುತ ಅಧ್ಯಕ್ಷ ವಿ.ಕೆ.ನರೇಶ್ ಬೆಂಬಲ ಲಭಿಸಿದ್ದು, ಸೂಪರ್ ಸ್ಟಾರ್ ಕೃಷ್ಣ ಬೆಂಬಲವೂ ದಕ್ಕಿದೆ ಎನ್ನಲಾಗುತ್ತಿದೆ. ಮಂಚು ವಿಷ್ಣು ಸನಿಹದಲ್ಲಿಯೇ ಚಿರಂಜೀವಿ ಹಾಗೂ ಎನ್ಟಿಆರ್ ಕುಟುಂಬವನ್ನೂ ಭೇಟಿ ಮಾಡಿ ಬೆಂಬಲ ಕೋರಲಿದ್ದಾರೆ.
ಈ ನಡುವೆ ಕಳೆದ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದ ಶಿವಾಜಿ ರಾಜ ಸಹ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಆಶಯದಲ್ಲಿದ್ದು ಅವರೂ ಸಹ ಚಿರಂಜೀವಿ ಅವರನ್ನು ಭೇಟಿ ಆಗಲಿದ್ದಾರೆ.
'ಮಾ' ಚುನಾವಣೆಗಳಲ್ಲಿ, ರಾಜಕೀಯದಲ್ಲಿ ಸಕ್ರಿಯರಾಗಿದ್ದ ಡಾ.ರಾಜಶೇಖರ್ ಪತ್ನಿ ಜೀವಿತಾ ರಾಜಲಕ್ಷ್ಮಿ ಸಹ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. 'ಮಾ' ಚುನಾವಣೆಯು ಸೆಪ್ಟೆಂಬರ್ನಲ್ಲಿ ನಡೆಯಲಿದೆ.
Recommended Video
ತೆಲುಗು ಸಿನಿಮಾರಂಗದಲ್ಲಿ 'ಮಾ' ಚುನಾವಣೆ ಅತ್ಯಂತ ಪ್ರತಿಷ್ಠೆಯದ್ದಾಗಿದೆ. 'ಮಾ'ನಲ್ಲಿ ಹಲವು ವಿವಾದಗಳು, ಮೂದಲಿಕೆಗಳು ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಿದೆ. 'ಮಾ'ನ ರಾಜಕೀಯದಿಂದ ಬೇಸತ್ತು ಚಿರಂಜೀವಿ ಸೇರಿದಂತೆ ಹಲವು ಪ್ರತಿಷ್ಠಿತ ನಟರು ಸಂಘದಿಂದಲೇ ಹೊರಗೆ ಹೋಗಿದ್ದಿದೆ.