Don't Miss!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭಾಸ್ ಬಳಿಕ ತೆಲುಗು ಸ್ಟಾರ್ ನಟನಿಗೆ ಪ್ರಶಾಂತ್ ನೀಲ್ ಆಕ್ಷನ್-ಕಟ್
ಕೆಜಿಎಫ್ ಸಿನಿಮಾದಿಂದ ತಾರಾ ಪಟ್ಟ್ ಗಳಿಸಿಕೊಂಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ತೆಲುಗಿನ 'ಸಲಾರ್' ಸಿನಿಮಾಕ್ಕಾಗಿ ಪ್ರಭಾಸ್ ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
Recommended Video
'ಸಲಾರ್' ನ ನಂತರ ಮತ್ತೊಬ್ಬ ದೊಡ್ಡ ತೆಲುಗು ನಟನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಪ್ರಶಾಂತ್ ನೀಲ್. ಇದೊಂದು ಭಾರಿ ಬಿಗ್ ಬಜೆಟ್ ಸಿನಿಮಾ ಆಗಿರಲಿದೆ.
ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ
ಹೌದು, ಖ್ಯಾತ ನಟ ಜೂ.ಎನ್ಟಿಆರ್ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ ಪ್ರಶಾಂತ್ ನೀಲ್. ಈ ಬಗ್ಗೆ ಈ ಹಿಂದೆಯೇ ಸ್ವತಃ ಪ್ರಶಾಂತ್ ನೀಲ್ ಮಾತನಾಡಿದ್ದರು. ಆದರೆ ಈ ನಡುವೆ 'ಸಲಾರ್' ಸೆಟ್ಟೇರಿದ ಕಾರಣ ಜೂ.ಎನ್ಟಿಆರ್ ಜೊತೆಗಿನ ಸಿನಿಮಾ ಅನುಮಾನ ಎನ್ನಲಾಗಿತ್ತು. ಆದರೆ ಸಿನಿಮಾ ನಿರ್ಮಾಣವಾಗುವುದು ಅಧಿಕೃತಕೊಂಡಿದೆ.
ತೆಲುಗಿನ ಪ್ರಖ್ಯಾತ ಮೈತ್ರಿ ಮೂವೀಸ್ ನ ನಿರ್ಮಾಪಕರಾದ ನವೀನ್ ಯೆರನೇನಿ ಹಾಗೂ ರವಿ ಶಂಕರ್ ಅವರುಗಳು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, 'ಜೂ.ಎನ್ಟಿಆರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.
ಜೂ.ಎನ್ಟಿಆರ್ ರ 31 ನೇ ಸಿನಿಮಾ
ಜೂ.ಎನ್ಟಿಆರ್ ಅವರ 31 ನೇ ಸಿನಿಮಾ ಇದಾಗಿರಲಿದ್ದು, ಸಿನಿಮಾಕ್ಕೆ 'ನ್ಯೂಕ್ಲಿಯರ್' ಎಂದು ಹೆಸರಿಡುವ ಸಾಧ್ಯತೆ ಇದೆ. ಜೂ.ಎನ್ಟಿಆರ್ ಹುಟ್ಟುಹಬ್ಬದಂದು ಜೂ.ಎನ್ಟಿಆರ್ ಅನ್ನು ಭೇಟಿ ಮಾಡಿದ್ದ ಪ್ರಶಾಂತ್ ನೀಲ್, 'ಈಗ ಗೊತ್ತಾಗುತ್ತಿದೆ, ನ್ಯೂಕ್ಲಿಯರ್ ಪ್ಲ್ಯಾಂಟ್ ಪಕ್ಕ ಕೂತರೇ ಹೇಗೆ ಅನುಭವವಾಗುತ್ತದಂತೆ, ಮುಂದಿನ ಬಾರಿ ನನ್ನ ರೇಡಿಯೇಶನ್ ಸೂಟ್ ಧರಿಸಿ ಬರುತ್ತೇನೆ. ಅದ್ಭುತವಾದ ಎನರ್ಜಿ ಜೂ.ಎನ್ಟಿಆರ್ ಅವರದ್ದು' ಎಂದು ಟ್ವೀಟ್ ಮಾಡಿದ್ದರು.
'ಸಲಾರ್' ಮುಗಿದ ಬಳಿಕ ಜೂ.ಎನ್ಟಿಆರ್ ಜೊತೆ ಸಿನಿಮಾ
'ಸಲಾರ್' ಸಿನಿಮಾ ಮುಗಿದ ಬಳಿಕ ಜೂ.ಎನ್ಟಿಆರ್ ಸಿನಿಮಾವನ್ನು ಪ್ರಾರಂಭಿಸಲಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ಸಿನಿಮಾದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೆ ಗೋಧಾವರಿ ಗಣಿಯಲ್ಲಿ ಮುಗಿದಿದ್ದು. ಇನ್ನೂ ಹಲವು ದಿನಗಳ ಚಿತ್ರೀಕರಣ ಬಾಕಿ ಇದೆ.
ಆರ್ಆರ್ಆರ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಜೂ.ಎನ್ಟಿಆರ್
ಜೂ.ಎನ್ಟಿಆರ್ ಈಗಷ್ಟೆ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ಆರಂಭಕ್ಕೂ ಮುನ್ನಾ ಮತ್ತೊಂದು ಸಿನಿಮಾವನ್ನು ಜೂ.ಎನ್ಟಿಆರ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.
ಸಲಾರ್ಗೆ ಕನ್ನಡಿಗ ವಿಲನ್
ಇನ್ನು ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಜುಲೈ 16 ಕ್ಕೆ ಬಿಡುಗಡೆ ಆಗಲಿದೆ. ಇನ್ನು ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಅಕ್ಟೋಬರ್ ನಲ್ಲಿ ಬಿಡುಗಡೆ ಆಗಲಿದೆ. ಸಲಾರ್ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ವಿಲನ್ ಆಗಿ ಕನ್ನಡಿಗ ಮಧು ಗುರುಸ್ವಾಮಿ ಅಭಿನಯಿಸಲಿದ್ದಾರೆ. ಜೊತೆಗೆ ಮೋಹನ್ಲಾಲ್ ಸಹ ಸಿನಿಮಾದಲ್ಲಿರಲಿದ್ದಾರೆ.