Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಲಾರ್' ನಂತರ ಪ್ರಶಾಂತ್ ನೀಲ್ ಮುಂದಿದೆ 4 ಪ್ಯಾನ್ ಇಂಡಿಯಾ ಪ್ರಾಜೆಕ್ಟ್?
ಭಾರತೀಯ ಸಿನಿ ಪ್ರಪಂಚದಲ್ಲಿ ಕೆಜಿಎಫ್ ಚಿತ್ರದ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಬಹಳ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಸಿನಿಮಾ ತೆರೆಕಂಡ ಬಳಿಕ ದಕ್ಷಿಣ ಭಾರತದ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ನೀಲ್ ಜೊತೆ ಸಿನಿಮಾ ಮಾಡಲು ಮುಂದಾಗಿವೆ.
ಒಂದರ ಹಿಂದೆ ಒಂದರಂತೆ ಪ್ರಶಾಂತ್ ನೀಲ್ ಸಹ ಒಪ್ಪಿಕೊಳ್ಳುತ್ತಾ ಹೋಗುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ಗಾಗಿ ಕಾಯುತ್ತಿವೆ. ಪ್ರಭಾಸ್ ಜೊತೆ ಸಲಾರ್ ಚಿತ್ರ ಆರಂಭಿಸಿದ್ದು, ಶೂಟಿಂಗ್ ಮಾಡ್ತಿದ್ದಾರೆ. ಈ ಸಿನಿಮಾ ಮುಗಿಸಿದ ತಕ್ಷಣ ಜೂನಿಯರ್ ಎನ್ಟಿಆರ್ ಜೊತೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ. ಯಂಗ್ ಟೈಗರ್ ಜೊತೆಗಿನ ಸಿನಿಮಾ ಬಳಿಕವೂ ನಾಲ್ಕು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳ ನೀಲ್ ಬಳಿ ಇವೆ ಎನ್ನಲಾಗಿದೆ. ಯಾವುದು ಅದು? ಮುಂದೆ ಓದಿ..
ಎನ್ಟಿಆರ್ ಜೊತೆ 31ನೇ ಪ್ರಾಜೆಕ್ಟ್
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಜೂನಿಯರ್ ಎನ್ಟಿಆರ್ ನಾಯಕ. ಸಲಾರ್ ಮುಗಿದ ಮೇಲೆ ಪ್ರಶಾಂತ್ ಮುಂದಿನ ಚಿತ್ರ ಇದಾಗಿದೆ. ಆ ಕಡೆ ಆರ್ಆರ್ಆರ್ ಸಿನಿಮಾ ಮುಗಿಸಿರುವ ಎನ್ಟಿಆರ್ ಕೊರಟಲಾ ಶಿವ ಜೊತೆ ಪ್ರಾಜೆಕ್ಟ್ ಮುಗಿಸಿ ನೀಲ್ ಜೊತೆ ಸೇರಲಿದ್ದಾರೆ.
ಗೀತಾ ಆರ್ಟ್ಸ್ ಜೊತೆ ನೀಲ್?
ಹೈದರಾಬಾದ್ನಲ್ಲಿರುವ ಗೀತಾ ಆರ್ಟ್ಸ್ ಸಂಸ್ಥೆಗೆ ಪ್ರಶಾಂತ್ ನೀಲ್ ಭೇಟಿ ನೀಡಿದ್ದರು ಎಂಬ ಮಾಹಿತಿ ಚರ್ಚೆಯಲ್ಲಿತ್ತು. ಕೆಜಿಎಫ್ ಚಿತ್ರದ ಬಿಸಿನೆಸ್ ವಿಚಾರಕ್ಕೆ ನೀಲ್ ಭೇಟಿಯಾಗಿದ್ದರು ಎನ್ನಲಾಗಿದೆ. ಆದರೆ, ಮತ್ತೊಂದು ಮಾಹಿತಿ ಪ್ರಕಾರ ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುವ ಕುರಿತು ಗೀತಾ ಆರ್ಟ್ಸ್ ಚರ್ಚಿಸಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಈ ಸುದ್ದಿಯನ್ನು ತಳ್ಳಿ ಹಾಕುವಂತಿಲ್ಲ.
'ಕೆಜಿಎಫ್' ಪ್ರಶಾಂತ್ ನೀಲ್ ಗೆಲುವಿನ ಹಿಂದಿರುವ ಪ್ರಮುಖ ಅಸ್ತ್ರಗಳು
ದಾನಯ್ಯ ಜೊತೆ ನೀಲ್?
ಬಾಹುಬಲಿ ಅಂತಹ ಮೆಗಾ ಚಿತ್ರ ನಿರ್ಮಿಸಿದ್ದ ಡಿವಿವಿ ದಾನಯ್ಯ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುವ ಕುರಿತು ಚರ್ಚೆಯಲ್ಲಿದೆಯಂತೆ. ಒಂದು ವೇಳೆ ಈ ಮಾತುಕತೆ ಸಕ್ಸಸ್ ಆದರೆ ಈ ಚಿತ್ರಕ್ಕೆ ರಾಮ್ ಚರಣ್ ತೇಜ ನಾಯಕ ಎಂಬ ಮಾತಿದೆ.
Recommended Video
ಪ್ರಭಾಸ್ ಜೊತೆ ಇನ್ನೊಂದು ಚಿತ್ರ?
ಪ್ರಭಾಸ್ ಜೊತೆ ಸಲಾರ್ ಮಾಡುತ್ತಿರುವ ಪ್ರಶಾಂತ್ ನೀಲ್ ಇನ್ನೊಮ್ಮೆ ಡಾರ್ಲಿಂಗ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಚಾಲ್ತಿಯಲ್ಲಿದೆ. ಪ್ರಭಾಸ್ ಜೊತೆ ನಿರ್ಮಾಪಕ ದಿಲ್ ರಾಜು ಸಿನಿಮಾ ಮಾಡುವ ಕಮಿಟ್ಮೆಂಟ್ ಇದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕರನ್ನಾಗಿಸಲು ಚಿಂತನೆ ನಡೆದಿದೆಯಂತೆ.